<p><strong>ನವದೆಹಲಿ:</strong> ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಕಳುಹಿಸುವ ಮಹತ್ವಾಕಾಂಕ್ಷೆಯ 'ಆ್ಯಕ್ಸಿಯಂ–4' ಯೋಜನೆಯಲ್ಲಿ ಸುರಕ್ಷತೆ ಹಾಗೂ ಪರಿಪೂರ್ಣತೆಗೆ ಆದ್ಯತೆ ನೀಡಲಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ. </p><p>'ಆ್ಯಕ್ಸಿಯಂ ಸ್ಪೇಸ್, ನಾಸಾ ಹಾಗೂ ಸ್ಪೇಸ್ಎಕ್ಸ್ ಜೊತೆ ಇಸ್ರೊ ನಿಕಟವಾಗಿ ಸಂಪರ್ಕದಲ್ಲಿದೆ. ಸುರಕ್ಷತೆ ಹಾಗೂ ಯೋಜನೆಯ ಪರಿಪೂರ್ಣತೆಗೆ ಆದ್ಯತೆ ನೀಡಲಾಗಿದೆ' ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.</p><p>ಸ್ಪೇಸ್ಎಕ್ಸ್ನ ಫಾಲ್ಕನ್ -9 ರಾಕೆಟ್ನಲ್ಲಿ ಸೋರಿಕೆಯಾಗಿದ್ದರಿಂದ ಶುಭಾಂಶು ಹಾಗೂ ಇತರೆ ನಾಲ್ವರ ಅಂತರಿಕ್ಷಯಾನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. </p><p>ಮಿಷನ್ನ ಪರೀಕ್ಷೆಯ ವೇಳೆ 'ಪ್ರೊಪಲ್ಷನ್ ವ್ಯವಸ್ಥೆ'ಯಲ್ಲಿ ದ್ರವ ಆಮ್ಲಜನಕ ಸೋರಿಕೆ ಪತ್ತೆಯಾದ ಕಾರಣ ಯೋಜನೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಉಡಾವಣೆಯ ಮುಂದಿನ ದಿನಾಂಕ ಮತ್ತು ಸಮಯ ಘೋಷಣೆಯಾಗಿಲ್ಲ.</p><p>ಇದರೊಂದಿಗೆ ನಾಲ್ಕನೇ ಬಾರಿ ಯೋಜನೆ ಮುಂದೂಡಲಾಗಿದೆ. ಈ ಹಿಂದೆ ಮೇ 29, ಜೂನ್ 8, ಜೂನ್ 1 ಹಾಗೂ ಜೂನ್ 11ರಂದು ನಿಗದಿಯಾಗಿತ್ತು. </p>.ಆಮ್ಲಜನಕ ವ್ಯವಸ್ಥೆಯಲ್ಲಿ ಸೋರಿಕೆ: ಶುಕ್ಲಾ ಅಂತರಿಕ್ಷಯಾನ ಮತ್ತೆ ಮುಂದೂಡಿಕೆ.Falcon-9 ರಾಕೆಟ್ನಲ್ಲಿ ಸೋರಿಕೆ; ಭಾರತದ ಶುಭಾಂಶು ಇರುವ ಅಂತರಿಕ್ಷಯಾನ ಮುಂದೂಡಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಕಳುಹಿಸುವ ಮಹತ್ವಾಕಾಂಕ್ಷೆಯ 'ಆ್ಯಕ್ಸಿಯಂ–4' ಯೋಜನೆಯಲ್ಲಿ ಸುರಕ್ಷತೆ ಹಾಗೂ ಪರಿಪೂರ್ಣತೆಗೆ ಆದ್ಯತೆ ನೀಡಲಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ. </p><p>'ಆ್ಯಕ್ಸಿಯಂ ಸ್ಪೇಸ್, ನಾಸಾ ಹಾಗೂ ಸ್ಪೇಸ್ಎಕ್ಸ್ ಜೊತೆ ಇಸ್ರೊ ನಿಕಟವಾಗಿ ಸಂಪರ್ಕದಲ್ಲಿದೆ. ಸುರಕ್ಷತೆ ಹಾಗೂ ಯೋಜನೆಯ ಪರಿಪೂರ್ಣತೆಗೆ ಆದ್ಯತೆ ನೀಡಲಾಗಿದೆ' ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.</p><p>ಸ್ಪೇಸ್ಎಕ್ಸ್ನ ಫಾಲ್ಕನ್ -9 ರಾಕೆಟ್ನಲ್ಲಿ ಸೋರಿಕೆಯಾಗಿದ್ದರಿಂದ ಶುಭಾಂಶು ಹಾಗೂ ಇತರೆ ನಾಲ್ವರ ಅಂತರಿಕ್ಷಯಾನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. </p><p>ಮಿಷನ್ನ ಪರೀಕ್ಷೆಯ ವೇಳೆ 'ಪ್ರೊಪಲ್ಷನ್ ವ್ಯವಸ್ಥೆ'ಯಲ್ಲಿ ದ್ರವ ಆಮ್ಲಜನಕ ಸೋರಿಕೆ ಪತ್ತೆಯಾದ ಕಾರಣ ಯೋಜನೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಉಡಾವಣೆಯ ಮುಂದಿನ ದಿನಾಂಕ ಮತ್ತು ಸಮಯ ಘೋಷಣೆಯಾಗಿಲ್ಲ.</p><p>ಇದರೊಂದಿಗೆ ನಾಲ್ಕನೇ ಬಾರಿ ಯೋಜನೆ ಮುಂದೂಡಲಾಗಿದೆ. ಈ ಹಿಂದೆ ಮೇ 29, ಜೂನ್ 8, ಜೂನ್ 1 ಹಾಗೂ ಜೂನ್ 11ರಂದು ನಿಗದಿಯಾಗಿತ್ತು. </p>.ಆಮ್ಲಜನಕ ವ್ಯವಸ್ಥೆಯಲ್ಲಿ ಸೋರಿಕೆ: ಶುಕ್ಲಾ ಅಂತರಿಕ್ಷಯಾನ ಮತ್ತೆ ಮುಂದೂಡಿಕೆ.Falcon-9 ರಾಕೆಟ್ನಲ್ಲಿ ಸೋರಿಕೆ; ಭಾರತದ ಶುಭಾಂಶು ಇರುವ ಅಂತರಿಕ್ಷಯಾನ ಮುಂದೂಡಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>