‘ನೋಟಿಸ್ಗೆ ವಿಭಾಗೀಯ ನ್ಯಾಯಪೀಠ ತಡೆ ನೀಡಿಲ್ಲ. ಈ ಹಂತದಲ್ಲಿ ತಡೆ ನೀಡುವುದಿಲ್ಲ’ ಎಂದು ನ್ಯಾಯಪೀಠ ಮಂಗಳವಾರ ತಿಳಿಸಿದ್ದು, ಬುಧವಾರ ಇದರ ಪ್ರತಿ ಲಭ್ಯವಾಗಿದೆ. ನ್ಯಾಯಮೂರ್ತಿಗಳಾದ ಅನುಪ್ ಜೆ. ಭಂಭಾನಿ ಮತ್ತು ಜಸ್ಮೀತ್ ಸಿಂಗ್ ಅವರ ರಜಾದಿನದ ನ್ಯಾಯಪೀಠ ವಿಚಾರಣೆ ನಡೆಸಿತು. ತನಿಖೆಯ ಭಾಗವಾಗಿ, ಜೂನ್ 4ರಂದು ಹೊಸ ನೋಟಿಸ್ ನೀಡಿರುವುದು ಕಾನೂನಿಗೆ ಅನುಗುಣವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ಅವರು ತಿಳಿಸಿದ್ದಾರೆ ಎಂದು ಪೀಠ ಹೇಳಿತು. ‘ವರದಿಯನ್ನು ಸಿದ್ಧಪಡಿಸಿದ ನಂತರ ಅದನ್ನು ಸಿಸಿಐಗೆ ರವಾನಿಸಲಾಗುವುದು’ ಎಂದು ಸಿಐಐ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತಿಳಿಸಿದರು. ವಿಚಾರಣೆಯ ಮುಂದಿನ ದಿನಾಂಕದ ಮೊದಲು ವರದಿ ಪೂರ್ಣಗೊಳ್ಳುವುದಿಲ್ಲ ಎಂದೂ ತಿಳಿಸಿದ್ದಾರೆ.