<p>ಬಾಗಲಕೋಟೆ: ಆರೋಗ್ಯ ಸೇವೆಗಳನ್ನು ಸಂಪರ್ಕಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 'ಆರೋಗ್ಯ ಸೇತು' ಆ್ಯಪ್ಅಭಿವೃದ್ಧಿಪಡಿಸಿದೆ. ಈ ಆ್ಯಪ್ಗೆಟ್ರ್ಯಾಕರ್ ಅಳವಡಿಸಲಾಗಿದ್ದು, ಸೋಂಕಿತರು ಹತ್ತಿರ ಬಂದರೆ ಎಚ್ಚರಿಕೆಯ ಸೂಚನೆ ನೀಡಲಿದೆ.</p>.<p>ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಕೋವಿಡ್–19 ಸೋಂಕಿತರಿಂದ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮನವಿ ಮಾಡಿದ್ದಾರೆ.</p>.<p>ಕೋವಿಡ್-19 ವಿರುದ್ಧದ ಸಂಯೋಜಿತ ಹೋರಾಟದಲ್ಲಿ ಈ ಸಾಂಕ್ರಾಮಿಕ ರೋಗ ತಡೆಗಟ್ಟಲು ಸಂಬಂಧಿಸಿದ ಸೋಂಕಿನ ಅಪಾಯ, ಉತ್ತಮ ಅಭ್ಯಾಸಗಳು ಮತ್ತು ಸಂಬಂಧಿತ ವೈದ್ಯಕೀಯ ಸಲಹೆಗಳನ್ನು ಬಳಕೆದಾರರಿಗೆ ತಲುಪಿಸಲು ಮತ್ತು ತಿಳಿಸಲು ಅಪ್ಲಿಕೇಶನ್ ಸಹಾಯಕಾರಿಯಾಗಿದೆ ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.</p>.<p>ಎನ್ಐಸಿಯ ಮಾರ್ಗದರ್ಶನದಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ಮೂಲಕ ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಅಪ್ಲಿಕೇಶನ್ ವಿನ್ಯಾಸದಿಂದ ಗೌಪ್ಯತೆ-ಮೊದಲನೆಯದು ಮತ್ತು ಪ್ರಸ್ತುತ 11 ಭಾಗಗಳಲ್ಲಿ ಲಭ್ಯವಿದೆ. ಅಪ್ಲಿಕೇಶನ್ ಹೆಚ್ಚು ಸ್ಕೇಲೇಬಲ್ ವಿನ್ಯಾಸವನ್ನು ಹೊಂದಿದೆ.</p>.<p>ಮತ್ತು 1ನೇ ದಿನದಿಂದ ಪ್ಯಾನ್-ಇಂಡಿಯಾ ರೋಲ್ ಮಾಡಲು ಸಿದ್ಧವಾಗಿದೆ. ಆರೋಗ್ಯ ಸೇತು ನೆರವು ಪಡೆದು ನಮ್ಮನ್ನು ಮತ್ತು ನಮ್ಮ ಕುಟುಂಬ ಮತ್ತು ಪ್ರೀತಿ ಪಾತ್ರರನ್ನು ರಕ್ಷಿಸಲು ಒಂದು ಹೆಜ್ಜೆ ಇಡಬೇಕಾಗಿದೆ ಎಂದು ಕಿವಿಮಾತು ಹೇಳಿರುವ ಅವರು, ಎಲ್ಲರೂ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ.</p>.<p><strong>ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ...</strong></p>.<p>ಈ ಅಪ್ಲಿಕೇಶನ್ttps://apps.apple.com/in/app/aarogyasetu/id1505825357 ಯಾವುದೇ ಐಒಎಸ್ ಅಥವಾ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗೆ ಡೌನ್ಲೋಡ್ ಮಾಡಬಹುದಾಗಿದೆ. ಬ್ಲೂಟೂತ್ ಮತ್ತು ಲೊಕೇಶನ್ ಆನ್ ಮಾಡಿರಬೇಕು. ಸೆಟ್ ಲೊಕೇಷನ್ ಎಂದಿರುವದನ್ನು ಆಲ್ವೇಸ್ ಎಂದು ಕೊಡಬೇಕು ಎಂದು ಟಿ.ಎಂ.ವಿಜಯಭಾಸ್ಕರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗಲಕೋಟೆ: ಆರೋಗ್ಯ ಸೇವೆಗಳನ್ನು ಸಂಪರ್ಕಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 'ಆರೋಗ್ಯ ಸೇತು' ಆ್ಯಪ್ಅಭಿವೃದ್ಧಿಪಡಿಸಿದೆ. ಈ ಆ್ಯಪ್ಗೆಟ್ರ್ಯಾಕರ್ ಅಳವಡಿಸಲಾಗಿದ್ದು, ಸೋಂಕಿತರು ಹತ್ತಿರ ಬಂದರೆ ಎಚ್ಚರಿಕೆಯ ಸೂಚನೆ ನೀಡಲಿದೆ.</p>.<p>ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ ಕೋವಿಡ್–19 ಸೋಂಕಿತರಿಂದ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮನವಿ ಮಾಡಿದ್ದಾರೆ.</p>.<p>ಕೋವಿಡ್-19 ವಿರುದ್ಧದ ಸಂಯೋಜಿತ ಹೋರಾಟದಲ್ಲಿ ಈ ಸಾಂಕ್ರಾಮಿಕ ರೋಗ ತಡೆಗಟ್ಟಲು ಸಂಬಂಧಿಸಿದ ಸೋಂಕಿನ ಅಪಾಯ, ಉತ್ತಮ ಅಭ್ಯಾಸಗಳು ಮತ್ತು ಸಂಬಂಧಿತ ವೈದ್ಯಕೀಯ ಸಲಹೆಗಳನ್ನು ಬಳಕೆದಾರರಿಗೆ ತಲುಪಿಸಲು ಮತ್ತು ತಿಳಿಸಲು ಅಪ್ಲಿಕೇಶನ್ ಸಹಾಯಕಾರಿಯಾಗಿದೆ ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.</p>.<p>ಎನ್ಐಸಿಯ ಮಾರ್ಗದರ್ಶನದಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ಮೂಲಕ ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಅಪ್ಲಿಕೇಶನ್ ವಿನ್ಯಾಸದಿಂದ ಗೌಪ್ಯತೆ-ಮೊದಲನೆಯದು ಮತ್ತು ಪ್ರಸ್ತುತ 11 ಭಾಗಗಳಲ್ಲಿ ಲಭ್ಯವಿದೆ. ಅಪ್ಲಿಕೇಶನ್ ಹೆಚ್ಚು ಸ್ಕೇಲೇಬಲ್ ವಿನ್ಯಾಸವನ್ನು ಹೊಂದಿದೆ.</p>.<p>ಮತ್ತು 1ನೇ ದಿನದಿಂದ ಪ್ಯಾನ್-ಇಂಡಿಯಾ ರೋಲ್ ಮಾಡಲು ಸಿದ್ಧವಾಗಿದೆ. ಆರೋಗ್ಯ ಸೇತು ನೆರವು ಪಡೆದು ನಮ್ಮನ್ನು ಮತ್ತು ನಮ್ಮ ಕುಟುಂಬ ಮತ್ತು ಪ್ರೀತಿ ಪಾತ್ರರನ್ನು ರಕ್ಷಿಸಲು ಒಂದು ಹೆಜ್ಜೆ ಇಡಬೇಕಾಗಿದೆ ಎಂದು ಕಿವಿಮಾತು ಹೇಳಿರುವ ಅವರು, ಎಲ್ಲರೂ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ.</p>.<p><strong>ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ...</strong></p>.<p>ಈ ಅಪ್ಲಿಕೇಶನ್ttps://apps.apple.com/in/app/aarogyasetu/id1505825357 ಯಾವುದೇ ಐಒಎಸ್ ಅಥವಾ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗೆ ಡೌನ್ಲೋಡ್ ಮಾಡಬಹುದಾಗಿದೆ. ಬ್ಲೂಟೂತ್ ಮತ್ತು ಲೊಕೇಶನ್ ಆನ್ ಮಾಡಿರಬೇಕು. ಸೆಟ್ ಲೊಕೇಷನ್ ಎಂದಿರುವದನ್ನು ಆಲ್ವೇಸ್ ಎಂದು ಕೊಡಬೇಕು ಎಂದು ಟಿ.ಎಂ.ವಿಜಯಭಾಸ್ಕರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>