<p><strong>ಕೊಲ್ಲಂ:</strong> ಕೇರಳದ ಕೊಲ್ಲಂ ಜಿಲ್ಲೆಯ ಗೋಕುಲ್ ಶ್ರೀಧರ್ ಎಂಬ ಯುವಕ ತನ್ನ ಅಮ್ಮನ ಪುನರ್ವಿವಾಹಕ್ಕೆ ಶುಭಕೋರಿ ಫೇಸ್ಬುಕ್ನಲ್ಲಿ ಬರೆದ ಬರಹವೊಂದು ವೈರಲ್ ಆಗಿದೆ.</p>.<p>ತನ್ನ ಅಮ್ಮನ ತ್ಯಾಗದ ಬಗ್ಗೆ ನೆನೆದ ಗೋಕುಲ್, ಆಕೆಯ ಮುಂದಿನ ಬದುಕು ಸಂಭ್ರಮದಿಂದ ಸಾಗಲಿ ಎಂದು ಬಯಸಿ, ಹಾರೈಸಿದ ಪೋಸ್ಟ್ ಇದಾಗಿದೆ.</p>.<p><strong>ಫೇಸ್ಬುಕ್ ಬರಹದಲ್ಲಿ ಏನಿದೆ?</strong><br />ನನ್ನಮ್ಮನ ಮದುವೆ ಮುಗೀತು<br />ಹೀಗೊಂದು ಬರಹ ಬರೆಯಬೇಕೋ ಎಂದು ನಾನು ತುಂಬಾ ಆಲೋಚಿಸಿದ್ದೆ.ಪುನರ್ವಿವಾಹ ಎಂಬುದನ್ನು ಸ್ವೀಕರಿಸುವ ಮನಸ್ಥಿತಿ ಇಲ್ಲದೇ ಇರುವ ಜನರು ಈ ಕಾಲದಲ್ಲಿದ್ದಾರೆ.</p>.<p>ಸಂದೇಹ, ತುಚ್ಛ ಭಾವ, ಅಸಹ್ಯದ ನೋಟಗಳಿಂದ ಯಾರೂ ನೋಡುವುದು ಬೇಡ. ಹಾಗೊಮ್ಮೆ ನೋಡಿದರೂ ಯಾರೂ ಇಲ್ಲಿ ಬಗ್ಗುವುದಿಲ್ಲ.</p>.<p>ನನಗಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹಿಳೆ ಆಕೆ.ಹಳೆಯ ದಾಂಪತ್ಯದಿಂದ ಹಲವಾರು ನೋವುಂಡಿದ್ದಳು. ಹೊಡೆತದಿಂದಆಕೆಯ ನೆತ್ತಿ ಒಡೆದುರಕ್ತ ಹರಿಯುವಾಗ ನಾನು ಆಕೆಯಲ್ಲಿ ಕೇಳಿದ್ದೆ, ಯಾಕೆ ಇಷ್ಟೊಂದು ಸಹಿಸುತ್ತಿದ್ದೀಯಾ? ಆಗ ಅಮ್ಮ ''ನಿನಗಾಗಿ ನಾನು ಬದುಕುತ್ತಿದ್ದೇನೆ. ನಾನು ಇದನ್ನು ಸಹಿಸಿಕೊಳ್ಳುತ್ತಿರುವುದು ಅದಕ್ಕಾಗಿಯೇ'' ಎಂದು ಹೇಳಿದ್ದು ನೆನಪಿದೆ.</p>.<p>ಅಂದು ನಾನು ಅಮ್ಮನ ಕೈ ಹಿಡಿದು ಮನೆಯಿಂದ ಹೊರನಡೆದಾಗ ನಿರ್ಧಾರವೊಂದನ್ನು ಕೈಗೊಂಡಿದ್ದೆ.ಈ ಗಳಿಗೆಬಗ್ಗೆ, ಇದು ಸಫಲವಾಗಬೇಕೆಂಬ ನಿರ್ಧಾರದ ಬಗ್ಗೆ.</p>.<p>ತನ್ನ ಯೌವನವನ್ನು ನನಗಾಗಿ ಮೀಸಲಿಟ್ಟ ನನ್ನ ಅಮ್ಮನಿಗೆ ಹಲವಾರು ಕನಸುಗಳನ್ನು ಪೂರೈಸುವುದಕ್ಕೆ, ಸಾಧನೆಗಳನ್ನು ಮಾಡುವುದಕ್ಕಿದೆ. ಇದರ ಬಗ್ಗೆ ಹೆಚ್ಚೇನೂ ಹೇಳಲಾರೆ, ಈ ಮದುವೆಯನ್ನು ಗುಟ್ಟಾಗಿ ಇಡುವುದು ಬೇಡ ಎಂದು ಅನಿಸಿತು.<br />ಅಮ್ಮಹ್ಯಾಪಿ ಮ್ಯಾರೀಡ್ ಲೈಫ್.</p>.<p>ಇದೀಗ ಇಂಜಿನಿಯರ್ ಆಗಿರುವ ಗೋಕುಲ್ಗೆ 23 ವರ್ಷ. ದಾಂಪತ್ಯದಲ್ಲಿ ನೋವುಂಡು ಆ ಸಂಬಂಧ ತೊರೆದು ಹೊರನಡೆದಾಗ ಗೋಕುಲ್ 10ನೇ ತರಗತಿಯಲ್ಲಿದ್ದ, ಶಿಕ್ಷಕಿಯಾಗಿದ್ದ ಅಮ್ಮ, ಈಗ ಕೆಲಸ ಬಿಟ್ಟಿದ್ದಾರೆ.</p>.<p>ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯ ನಾಯಕನಾಗಿರುವ ಗೋಕುಲ್ ಮನೋರಮಾ ಆನ್ಲೈನ್ ಜತೆ ಮಾತನಾಡಿದ್ದು, ತಾನು ಕೆಲಸದ ನೆಪದಲ್ಲಿ ದೂರ ಹೋದರೆ ಅಮ್ಮ ಒಬ್ಬಂಟಿಯಾಗುತ್ತಾಳೆ. ಹಾಗಾಗಿ ನಾನು ಪುನರ್ವಿವಾಹದ ಬಗ್ಗೆ ಆಕೆಯಲ್ಲಿ ಹೇಳುತ್ತಿದ್ದೆ. ಆಕೆ ಬೇಡ ಎನ್ನುತ್ತಿದ್ದಳು.ಆಕೆಯ ಸಹೋದ್ಯೋಗಿಗಳ ಕಡೆಯಿಂದಲೇ ಈ ವಿವಾಹ ಸಂಬಂಧ ಬಂದಿತ್ತು.ಆಕೆ ಮೊದಲು ಬೇಡ ಎಂದು ನಿರಾಕರಿಸಿದ್ದರೂ, ಆಮೇಲೆ ಒಪ್ಪಿಕೊಂಡಳು ಎಂದಿದ್ದಾರೆ.</p>.<p>ಫೇಸ್ಬುಕ್ ಪೋಸ್ಟ್ಗೆ ನೆಟ್ಟಿಗರಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.ವೈರಲ್ ಪೋಸ್ಟ್ ನಂತರ ಫೇಸ್ಬುಕ್ ಸ್ಟೇಟಸ್ ಅಪ್ಡೇಟ್ ಮಾಡಿರುವ ಗೋಕುಲ್, ಈ ನಾಡುಮತ್ತು ನಾಡಿನಜನರನ್ನು ನಾನು ತಪ್ಪಾಗಿ ಅರ್ಥೈಸಿಕೊಂಡಿದ್ದೆ. ಜತೆಗೆ ನಿಂತವರಿಗೂ, ಹಾರೈಸಿದವರಿಗೂ ಧನ್ಯವಾದಗಳು, ಅಮ್ಮ ಖುಷಿಯಾಗಿದ್ದಾರೆ ನಾನೂ ಎಂದು ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲ್ಲಂ:</strong> ಕೇರಳದ ಕೊಲ್ಲಂ ಜಿಲ್ಲೆಯ ಗೋಕುಲ್ ಶ್ರೀಧರ್ ಎಂಬ ಯುವಕ ತನ್ನ ಅಮ್ಮನ ಪುನರ್ವಿವಾಹಕ್ಕೆ ಶುಭಕೋರಿ ಫೇಸ್ಬುಕ್ನಲ್ಲಿ ಬರೆದ ಬರಹವೊಂದು ವೈರಲ್ ಆಗಿದೆ.</p>.<p>ತನ್ನ ಅಮ್ಮನ ತ್ಯಾಗದ ಬಗ್ಗೆ ನೆನೆದ ಗೋಕುಲ್, ಆಕೆಯ ಮುಂದಿನ ಬದುಕು ಸಂಭ್ರಮದಿಂದ ಸಾಗಲಿ ಎಂದು ಬಯಸಿ, ಹಾರೈಸಿದ ಪೋಸ್ಟ್ ಇದಾಗಿದೆ.</p>.<p><strong>ಫೇಸ್ಬುಕ್ ಬರಹದಲ್ಲಿ ಏನಿದೆ?</strong><br />ನನ್ನಮ್ಮನ ಮದುವೆ ಮುಗೀತು<br />ಹೀಗೊಂದು ಬರಹ ಬರೆಯಬೇಕೋ ಎಂದು ನಾನು ತುಂಬಾ ಆಲೋಚಿಸಿದ್ದೆ.ಪುನರ್ವಿವಾಹ ಎಂಬುದನ್ನು ಸ್ವೀಕರಿಸುವ ಮನಸ್ಥಿತಿ ಇಲ್ಲದೇ ಇರುವ ಜನರು ಈ ಕಾಲದಲ್ಲಿದ್ದಾರೆ.</p>.<p>ಸಂದೇಹ, ತುಚ್ಛ ಭಾವ, ಅಸಹ್ಯದ ನೋಟಗಳಿಂದ ಯಾರೂ ನೋಡುವುದು ಬೇಡ. ಹಾಗೊಮ್ಮೆ ನೋಡಿದರೂ ಯಾರೂ ಇಲ್ಲಿ ಬಗ್ಗುವುದಿಲ್ಲ.</p>.<p>ನನಗಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹಿಳೆ ಆಕೆ.ಹಳೆಯ ದಾಂಪತ್ಯದಿಂದ ಹಲವಾರು ನೋವುಂಡಿದ್ದಳು. ಹೊಡೆತದಿಂದಆಕೆಯ ನೆತ್ತಿ ಒಡೆದುರಕ್ತ ಹರಿಯುವಾಗ ನಾನು ಆಕೆಯಲ್ಲಿ ಕೇಳಿದ್ದೆ, ಯಾಕೆ ಇಷ್ಟೊಂದು ಸಹಿಸುತ್ತಿದ್ದೀಯಾ? ಆಗ ಅಮ್ಮ ''ನಿನಗಾಗಿ ನಾನು ಬದುಕುತ್ತಿದ್ದೇನೆ. ನಾನು ಇದನ್ನು ಸಹಿಸಿಕೊಳ್ಳುತ್ತಿರುವುದು ಅದಕ್ಕಾಗಿಯೇ'' ಎಂದು ಹೇಳಿದ್ದು ನೆನಪಿದೆ.</p>.<p>ಅಂದು ನಾನು ಅಮ್ಮನ ಕೈ ಹಿಡಿದು ಮನೆಯಿಂದ ಹೊರನಡೆದಾಗ ನಿರ್ಧಾರವೊಂದನ್ನು ಕೈಗೊಂಡಿದ್ದೆ.ಈ ಗಳಿಗೆಬಗ್ಗೆ, ಇದು ಸಫಲವಾಗಬೇಕೆಂಬ ನಿರ್ಧಾರದ ಬಗ್ಗೆ.</p>.<p>ತನ್ನ ಯೌವನವನ್ನು ನನಗಾಗಿ ಮೀಸಲಿಟ್ಟ ನನ್ನ ಅಮ್ಮನಿಗೆ ಹಲವಾರು ಕನಸುಗಳನ್ನು ಪೂರೈಸುವುದಕ್ಕೆ, ಸಾಧನೆಗಳನ್ನು ಮಾಡುವುದಕ್ಕಿದೆ. ಇದರ ಬಗ್ಗೆ ಹೆಚ್ಚೇನೂ ಹೇಳಲಾರೆ, ಈ ಮದುವೆಯನ್ನು ಗುಟ್ಟಾಗಿ ಇಡುವುದು ಬೇಡ ಎಂದು ಅನಿಸಿತು.<br />ಅಮ್ಮಹ್ಯಾಪಿ ಮ್ಯಾರೀಡ್ ಲೈಫ್.</p>.<p>ಇದೀಗ ಇಂಜಿನಿಯರ್ ಆಗಿರುವ ಗೋಕುಲ್ಗೆ 23 ವರ್ಷ. ದಾಂಪತ್ಯದಲ್ಲಿ ನೋವುಂಡು ಆ ಸಂಬಂಧ ತೊರೆದು ಹೊರನಡೆದಾಗ ಗೋಕುಲ್ 10ನೇ ತರಗತಿಯಲ್ಲಿದ್ದ, ಶಿಕ್ಷಕಿಯಾಗಿದ್ದ ಅಮ್ಮ, ಈಗ ಕೆಲಸ ಬಿಟ್ಟಿದ್ದಾರೆ.</p>.<p>ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯ ನಾಯಕನಾಗಿರುವ ಗೋಕುಲ್ ಮನೋರಮಾ ಆನ್ಲೈನ್ ಜತೆ ಮಾತನಾಡಿದ್ದು, ತಾನು ಕೆಲಸದ ನೆಪದಲ್ಲಿ ದೂರ ಹೋದರೆ ಅಮ್ಮ ಒಬ್ಬಂಟಿಯಾಗುತ್ತಾಳೆ. ಹಾಗಾಗಿ ನಾನು ಪುನರ್ವಿವಾಹದ ಬಗ್ಗೆ ಆಕೆಯಲ್ಲಿ ಹೇಳುತ್ತಿದ್ದೆ. ಆಕೆ ಬೇಡ ಎನ್ನುತ್ತಿದ್ದಳು.ಆಕೆಯ ಸಹೋದ್ಯೋಗಿಗಳ ಕಡೆಯಿಂದಲೇ ಈ ವಿವಾಹ ಸಂಬಂಧ ಬಂದಿತ್ತು.ಆಕೆ ಮೊದಲು ಬೇಡ ಎಂದು ನಿರಾಕರಿಸಿದ್ದರೂ, ಆಮೇಲೆ ಒಪ್ಪಿಕೊಂಡಳು ಎಂದಿದ್ದಾರೆ.</p>.<p>ಫೇಸ್ಬುಕ್ ಪೋಸ್ಟ್ಗೆ ನೆಟ್ಟಿಗರಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.ವೈರಲ್ ಪೋಸ್ಟ್ ನಂತರ ಫೇಸ್ಬುಕ್ ಸ್ಟೇಟಸ್ ಅಪ್ಡೇಟ್ ಮಾಡಿರುವ ಗೋಕುಲ್, ಈ ನಾಡುಮತ್ತು ನಾಡಿನಜನರನ್ನು ನಾನು ತಪ್ಪಾಗಿ ಅರ್ಥೈಸಿಕೊಂಡಿದ್ದೆ. ಜತೆಗೆ ನಿಂತವರಿಗೂ, ಹಾರೈಸಿದವರಿಗೂ ಧನ್ಯವಾದಗಳು, ಅಮ್ಮ ಖುಷಿಯಾಗಿದ್ದಾರೆ ನಾನೂ ಎಂದು ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>