<p><strong>ಬೆಂಗಳೂರು</strong>: ಹಿಂದೂ ಪರ ಗುಂಪೊಂದು ರಸ್ತೆ ಬದಿ ಕ್ರಿಸ್ಮಸ್ ಸಂತಾ ಟೋಪಿಗಳನ್ನು ಮಾರುತ್ತಿದ್ದ ಬಡಪಾಯಿ ವ್ಯಾಪಾರಿಗಳಿಗೆ ಧಮಕಿ ಹಾಕಿ ಪುಂಡಾಟ ಮೆರೆದಿರುವ ಘಟನೆ ಒಡಿಶಾದಲ್ಲಿ ಈಚೆಗೆ ನಡೆದಿರುವುದು ವರದಿಯಾಗಿದೆ.</p><p>ಒಡಿಶಾದ ಭುವನೇಶ್ವರದಲ್ಲಿ ನಡೆದಿರುವ ಈ ಘಟನೆಯ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಆಟಾಟೋಪ ಮೆರೆದಿರುವ ವ್ಯಕ್ತಿಗಳ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.</p><p>ಕಾರಿನಲ್ಲಿ ಬಂದ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಸಂತಾ ಟೋಪಿ ಮಾರುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಉದ್ದೇಶಿಸಿ ಇದು ಹಿಂದೂ ರಾಷ್ಟ್ರ, ಇಲ್ಲಿ ಕ್ರಿಸ್ಮಸ್ ಟೋಪಿಗಳನ್ನು ಮಾರುವ ಹಾಗಿಲ್ಲ, ನಡೀರಿ ನಡೀರಿ ಇಲ್ಲಿಂದ ಎಂದು ಒತ್ತಾಯ ಮಾಡುತ್ತಾನೆ.</p><p>ಆಗ ವ್ಯಾಪಾರಿಗಳು, ಅಣ್ಣವರೇ, ನಾವು ರಾಜಸ್ಥಾನದಿಂದ ಬಂದಿದ್ದೇವೆ. ನಾವು ಸಹ ಹಿಂದೂಗಳು ಎನ್ನುತ್ತಾರೆ. ಆಗ ಆತ, ಹಾ ಹಾ, ಹಿಂದೂಗಳಾದರೆ ಹಿಂದೂಗಳ ತರ ಇರೀ, ಇಲ್ಲಿ ಪುರಿ ಜಗನ್ನಾಥನೇ ಬಾಸ್. ನೀವು ಬೇಕಾದರೆ ಜಗನ್ನಾಥನ ಮೂರ್ತಿ ಮಾರಾಟ ಮಾಡಿ ಎಂದು ಅರಚಾಡುತ್ತಾನೆ.</p><p>ಅರಚಾಡಿದ ವ್ಯಕ್ತಿಯ ಬೆಂಬಲಕ್ಕೆ ಕಾರಿನಲ್ಲಿದ್ದ ವ್ಯಕ್ತಿಗಳೂ ಇಳಿದು ಬಂದು ಬೆಂಬಲ ನೀಡುತ್ತಾರೆ. ವ್ಯಾಪಾರಿಗಳನ್ನು ಜಾಗ ಖಾಲಿ ಮಾಡಿ ಎಂದು ಮತ್ತೊಮ್ಮೆ ಒತ್ತಾಯ ಮಾಡುತ್ತಾರೆ.</p><p>ವಿಡಿಯೊ ಹಂಚಿಕೊಂಡು ಹಲವರು, ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಮಾಡೆಲ್ ಹೇಗಿದೆ ನೋಡಿ ಎಂದು ಖಂಡಿಸಿದ್ದಾರೆ.</p>.ಕ್ರಿಸ್ಮಸ್ ತಯಾರಿ ಜೋರು! 30 ಮಳಿಗೆಗಳ ಪ್ರದರ್ಶನ, ಐಫೆಲ್ ಟವರ್ ಆಕರ್ಷಣೆ.ವಿಡಿಯೊ: ರೈಲು ನಿಲ್ದಾಣದ ಹಳಿ ಮೇಲೆಯೇ ಥಾರ್ ಕಾರು ಚಲಾಯಿಸಿದ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹಿಂದೂ ಪರ ಗುಂಪೊಂದು ರಸ್ತೆ ಬದಿ ಕ್ರಿಸ್ಮಸ್ ಸಂತಾ ಟೋಪಿಗಳನ್ನು ಮಾರುತ್ತಿದ್ದ ಬಡಪಾಯಿ ವ್ಯಾಪಾರಿಗಳಿಗೆ ಧಮಕಿ ಹಾಕಿ ಪುಂಡಾಟ ಮೆರೆದಿರುವ ಘಟನೆ ಒಡಿಶಾದಲ್ಲಿ ಈಚೆಗೆ ನಡೆದಿರುವುದು ವರದಿಯಾಗಿದೆ.</p><p>ಒಡಿಶಾದ ಭುವನೇಶ್ವರದಲ್ಲಿ ನಡೆದಿರುವ ಈ ಘಟನೆಯ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಆಟಾಟೋಪ ಮೆರೆದಿರುವ ವ್ಯಕ್ತಿಗಳ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.</p><p>ಕಾರಿನಲ್ಲಿ ಬಂದ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಸಂತಾ ಟೋಪಿ ಮಾರುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಉದ್ದೇಶಿಸಿ ಇದು ಹಿಂದೂ ರಾಷ್ಟ್ರ, ಇಲ್ಲಿ ಕ್ರಿಸ್ಮಸ್ ಟೋಪಿಗಳನ್ನು ಮಾರುವ ಹಾಗಿಲ್ಲ, ನಡೀರಿ ನಡೀರಿ ಇಲ್ಲಿಂದ ಎಂದು ಒತ್ತಾಯ ಮಾಡುತ್ತಾನೆ.</p><p>ಆಗ ವ್ಯಾಪಾರಿಗಳು, ಅಣ್ಣವರೇ, ನಾವು ರಾಜಸ್ಥಾನದಿಂದ ಬಂದಿದ್ದೇವೆ. ನಾವು ಸಹ ಹಿಂದೂಗಳು ಎನ್ನುತ್ತಾರೆ. ಆಗ ಆತ, ಹಾ ಹಾ, ಹಿಂದೂಗಳಾದರೆ ಹಿಂದೂಗಳ ತರ ಇರೀ, ಇಲ್ಲಿ ಪುರಿ ಜಗನ್ನಾಥನೇ ಬಾಸ್. ನೀವು ಬೇಕಾದರೆ ಜಗನ್ನಾಥನ ಮೂರ್ತಿ ಮಾರಾಟ ಮಾಡಿ ಎಂದು ಅರಚಾಡುತ್ತಾನೆ.</p><p>ಅರಚಾಡಿದ ವ್ಯಕ್ತಿಯ ಬೆಂಬಲಕ್ಕೆ ಕಾರಿನಲ್ಲಿದ್ದ ವ್ಯಕ್ತಿಗಳೂ ಇಳಿದು ಬಂದು ಬೆಂಬಲ ನೀಡುತ್ತಾರೆ. ವ್ಯಾಪಾರಿಗಳನ್ನು ಜಾಗ ಖಾಲಿ ಮಾಡಿ ಎಂದು ಮತ್ತೊಮ್ಮೆ ಒತ್ತಾಯ ಮಾಡುತ್ತಾರೆ.</p><p>ವಿಡಿಯೊ ಹಂಚಿಕೊಂಡು ಹಲವರು, ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಮಾಡೆಲ್ ಹೇಗಿದೆ ನೋಡಿ ಎಂದು ಖಂಡಿಸಿದ್ದಾರೆ.</p>.ಕ್ರಿಸ್ಮಸ್ ತಯಾರಿ ಜೋರು! 30 ಮಳಿಗೆಗಳ ಪ್ರದರ್ಶನ, ಐಫೆಲ್ ಟವರ್ ಆಕರ್ಷಣೆ.ವಿಡಿಯೊ: ರೈಲು ನಿಲ್ದಾಣದ ಹಳಿ ಮೇಲೆಯೇ ಥಾರ್ ಕಾರು ಚಲಾಯಿಸಿದ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>