ಕೆಲವು ಪ್ರತಿಭಟನಾಕಾರರನ್ನು ಪೊಲೀಸರು ಬೆನ್ನಟ್ಟುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಆಗ ಅಲ್ಲಿಗೆ ಬಂದ ಎಸ್ಪಿ ಅಖಿಲೇಶ್ ಎನ್ ಸಿಂಗ್, ‘ಎಲ್ಲಿಗೆ ಹೋಗುತ್ತಿದ್ದೀರಿ, ಈ ಗಲ್ಲಿಯನ್ನು ನಾನು ಸರಿ ಮಾಡುತ್ತೇನೆ’ ಎಂದು ಹೇಳಿದ್ದಾರೆ. ನಂತರ ಅಲ್ಲಿದ್ದ ಮೂವರ ಬಳಿ ತಿರುಗಿದ ಅವರು, ‘ಕಪ್ಪು ಮತ್ತು ಹಳದಿ ಬ್ಯಾಂಡ್ ಧರಿಸಿದವರಿಗೆ ಪಾಕಿಸ್ತಾನಕ್ಕೆ ಹೋಗಲು ಹೇಳಿ. ನೀವು ಇಲ್ಲಿನ ಆಹಾರ ತಿಂದು ಮತ್ತೊಂದು ಕಡೆಯವರನ್ನು ಹೊಗಳುತ್ತಿದ್ದೀರಿ. ಈ ಗಲ್ಲಿ ನನಗೆ ಚಿರಪರಿಚಿತ. ಒಂದು ವೇಳೆ ಏನಾದರೂ ಆದರೆ ನೀವು ಬೆಲೆ ತೆರೆಬೇಕಾದೀತು. ಪ್ರತಿಯೊಂದು ಮನೆಯಿಂದಲೂ ಒಬ್ಬೊಬ್ಬನನ್ನು ಬಂಧಿಸಬೇಕಾದೀತು’ ಎಂದು ಎಚ್ಚರಿಕೆ ನೀಡಿದ್ದಾರೆ.