<p><strong>ಬೆಂಗಳೂರು</strong>: ರೈಲು ವೇಗವಾಗಿ ಚಲಿಸುವಾಗ ಬಾಲಕನೊಬ್ಬ ರೈಲು ಹಳಿಯಲ್ಲಿ ಮಲಗಿ ಅಪಾಯಕಾರಿ ಸಾಹಸ ಪ್ರದರ್ಶಿಸಿ ಪೊಲೀಸ್ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ಒಡಿಶಾದಲ್ಲಿ ಇತ್ತೀಚೆಗೆ ನಡೆದಿದೆ.</p><p>ಘಟನೆಗೆ ಸಂಬಂಧಿಸಿದಂತೆ ಆರ್ಪಿಎಫ್ ಪ್ರಕರಣ ದಾಖಲಿಸಿಕೊಂಡು ಬಾಲಕರಿಬ್ಬರನ್ನು ವಶಕ್ಕೆ ಪಡೆದಿದೆ.</p><p>ಈ ಕುರಿತ ಎಚ್ಚರಿಕೆ ವಿಡಿಯೊ ಹಂಚಿಕೊಂಡಿರುವ ಆರ್ಪಿಎಫ್, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಸಂಬಂಧಿಸಿದ ಬಾಲಕರಿಗೆ ಕಾನೂನು ಪ್ರಕಾರ ಬಿಸಿ ಮುಟ್ಟುತ್ತದೆ. ಘಟನೆಯಲ್ಲಿ ಬಾಲಕರಿಗೆ ಗಾಯಗಳಾಗಿಲ್ಲ. ಆದರೆ, ಪಾಲಕರು, ಶಿಕ್ಷಕರು ಮಕ್ಕಳ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಿ. ಇಂತಹ ಕೃತ್ಯಗಳಲ್ಲಿ ಭಾಗಿಯಾಗದಿರುವಂತೆ ಸರಿಯಾದ ಶಿಕ್ಷಣ ನೀಡಿ ಎಂದು ಸಲಹೆ ನೀಡಿದೆ.</p><p>ಒಡಿಶಾದ ಬೌದ್ಧ ಜಿಲ್ಲೆಯ ಪುರಾನಾಪಾನಿ ರೈಲು ನಿಲ್ದಾಣದ ಬಳಿಯ ತಾಲುಪಾಲಿ ಬಳಿ ಘಟನೆ ನಡೆದಿತ್ತು. ಬಾಲಕನೊಬ್ಬ ರೈಲು ಬರುವಾಗ ಹಳಿಯಲ್ಲಿ ಮಲಗಿ ರೈಲು ಹೋದ ಮೇಲೆ ಎದ್ದೇಳುತ್ತಾನೆ. ರೀಲ್ಸ್ ವಿಡಿಯೊಗಳಿಗಾಗಿ ಇನ್ನೊಬ್ಬ ಬಾಲಕ ಈ ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದ ಎಂದು ಒಡಿಶಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.</p><p>ಬಾಲಕರ ವರ್ತನೆ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ‘ಅಪಾಯಕಾರಿ ಸಾಹಸ ಮಾಡದಿರಿ. ಕಾನೂನುಗಳನ್ನು ಗೌರವಿಸಿ’ ಎಂದು ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರೈಲು ವೇಗವಾಗಿ ಚಲಿಸುವಾಗ ಬಾಲಕನೊಬ್ಬ ರೈಲು ಹಳಿಯಲ್ಲಿ ಮಲಗಿ ಅಪಾಯಕಾರಿ ಸಾಹಸ ಪ್ರದರ್ಶಿಸಿ ಪೊಲೀಸ್ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ಒಡಿಶಾದಲ್ಲಿ ಇತ್ತೀಚೆಗೆ ನಡೆದಿದೆ.</p><p>ಘಟನೆಗೆ ಸಂಬಂಧಿಸಿದಂತೆ ಆರ್ಪಿಎಫ್ ಪ್ರಕರಣ ದಾಖಲಿಸಿಕೊಂಡು ಬಾಲಕರಿಬ್ಬರನ್ನು ವಶಕ್ಕೆ ಪಡೆದಿದೆ.</p><p>ಈ ಕುರಿತ ಎಚ್ಚರಿಕೆ ವಿಡಿಯೊ ಹಂಚಿಕೊಂಡಿರುವ ಆರ್ಪಿಎಫ್, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಸಂಬಂಧಿಸಿದ ಬಾಲಕರಿಗೆ ಕಾನೂನು ಪ್ರಕಾರ ಬಿಸಿ ಮುಟ್ಟುತ್ತದೆ. ಘಟನೆಯಲ್ಲಿ ಬಾಲಕರಿಗೆ ಗಾಯಗಳಾಗಿಲ್ಲ. ಆದರೆ, ಪಾಲಕರು, ಶಿಕ್ಷಕರು ಮಕ್ಕಳ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಿ. ಇಂತಹ ಕೃತ್ಯಗಳಲ್ಲಿ ಭಾಗಿಯಾಗದಿರುವಂತೆ ಸರಿಯಾದ ಶಿಕ್ಷಣ ನೀಡಿ ಎಂದು ಸಲಹೆ ನೀಡಿದೆ.</p><p>ಒಡಿಶಾದ ಬೌದ್ಧ ಜಿಲ್ಲೆಯ ಪುರಾನಾಪಾನಿ ರೈಲು ನಿಲ್ದಾಣದ ಬಳಿಯ ತಾಲುಪಾಲಿ ಬಳಿ ಘಟನೆ ನಡೆದಿತ್ತು. ಬಾಲಕನೊಬ್ಬ ರೈಲು ಬರುವಾಗ ಹಳಿಯಲ್ಲಿ ಮಲಗಿ ರೈಲು ಹೋದ ಮೇಲೆ ಎದ್ದೇಳುತ್ತಾನೆ. ರೀಲ್ಸ್ ವಿಡಿಯೊಗಳಿಗಾಗಿ ಇನ್ನೊಬ್ಬ ಬಾಲಕ ಈ ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದ ಎಂದು ಒಡಿಶಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.</p><p>ಬಾಲಕರ ವರ್ತನೆ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ‘ಅಪಾಯಕಾರಿ ಸಾಹಸ ಮಾಡದಿರಿ. ಕಾನೂನುಗಳನ್ನು ಗೌರವಿಸಿ’ ಎಂದು ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>