<p>ಕೈಕಮಾಂಡಿನಿಂದ ನಮ್ಮ ಮಾಜಿ ಸಿಎಮ್ಮಯ್ಯರಿಗೆ ಬೆಳ್ಳಂಬೆಳಿಗ್ಗೆ ತುರ್ತು ಬುಲಾವ್ ಬಂತು. ಗೊರಕೆ ಹೊಡೆಯುತ್ತಲೇ ವಿಮಾನ ಹತ್ತಿದ ಮಾಜಿ ಸಿಎಮ್ಮಯ್ಯ ಕೆಲವೇ ಗಂಟೆಗಳಲ್ಲಿ ರಾಯಲ್ ಗಾಂಧಿ ಮುಂದೆ ಕುಳಿತಿದ್ದರು.</p>.<p>‘ಏನಿಲ್ಲ ಸಿಎಮ್ಮಯ್ಯಾಜೀ… ರಾತ್ರಿ ಒಂದು ಅದ್ಭುತ ಕನಸು ಬಿತ್ತು. ಅದರಲ್ಲಿ, ಬರುವ ಲೋಕಸಭೆ ಚುನಾವಣೆಯಲ್ಲಿ ನಾವು ಪ್ರಚಂಡ ಬಹುಮತದಿಂದ ಗೆಲ್ಲುವ ದೃಶ್ಯವನ್ನು ತ್ರಿ-ಡಿ ಯಲ್ಲಿ ನೋಡಿದಂತಾಯಿತು’.</p>.<p>‘ಓಹ್! ಅದು ನಿಜಕ್ಕೂ ಅದ್ಭುತ ಕನಸು ರಾಯಲ್ಜೀ! ಆದರೆ ಹಾಗೇ ಸುಖಾಸುಮ್ಮನೆ ಗೆಲ್ಲುವುದೆಂದರೆ ಹೇಗೆ? ಈ ಕನಸು ಮತ್ತು ಜ್ಯೋತಿಷಿಗಳನ್ನು ನಂಬುವ ಹಾಗಿಲ್ಲ‘.</p>.<p>‘ಇಲ್ಲ, ಸಿಎಮ್ಮಯ್ಯಜೀ… ಹಾಗೇ ಆರಾಮವಾಗಿ ಗೆದ್ದ ಕನಸೇನಲ್ಲ. ನಾವು ಹಿಂದುತ್ವವನ್ನು ಮುಂದಿಟ್ಟುಕೊಂಡು ಗೆದ್ದದ್ದು!’</p>.<p>‘ಅಂದರೆ ನೀವು ಹೇಳೋದು... ಮೃದು ಹಿಂದುತ್ವದ ಬಗ್ಗೆ…?’</p>.<p>‘ನೋ ನೋ! ಇದು ಬಾಜಪ್ಪರು ಉಪಯೋಗಿಸುತ್ತಿದ್ದ ಹಿಂದುತ್ವ. ನಮ್ಮ ಕುತಂತ್ರರೂರ್ಜೀ ಅದನ್ನು ಅಲ್ಲಿಂದ ಅಪಹರಿಸಿದ್ದಾರೆ’.</p>.<p>‘ಅಯ್ಯೋ! ಆ ಹಿಂದುತ್ವ ಬಹಳ ಡೇಂಜರು! ಬೇಡ, ರಾಯಲ್ಜೀ… ನಮಗೆ ಮೃದು ಹಿಂದುತ್ವ ಸಾಕು’.</p>.<p>‘ನೋಡಿ, ನಿಮಗೆ ಕೇಂದ್ರ ಸಚಿವರಾಗಬೇಕೋ ಬೇಡವೋ?’</p>.<p>‘ಖಂಡಿತ! ವಿತ್ತ ಸಚಿವನಾಗಬೇಕೂಂತ ತುಂಬಾ ಆಸೆಯಿದೆ’.</p>.<p>‘ಹಾಗಾದ್ರೆ ಸುಮ್ಮನೆ ಗುಟುರುಗಿಟುರು ಅನ್ನದೆ ನನ್ನ ಮಾತು ಕೇಳಿ. ನಮ್ಮ ಪಕ್ಷ ಬಾಜಪ್ಪರ ಹಿಂದುತ್ವ ತಂತ್ರ ಬಳಸಿ ಹಿಂದೂಗಳನ್ನು ಬುಟ್ಟಿಗೆ ಹಾಕಿಕೊಳ್ಳೋಕೆ ನಾನಂತೂ ನಿರ್ಧರಿಸಿದ್ದೇನೆ’.</p>.<p>‘ಅದಕ್ಕೆ ಬೇಕಾದ ಸೂತ್ರಗಳೇನಾದರೂ ಕನಸಿನಲ್ಲಿ ಕಂಡಿದ್ದೀರಾ?’</p>.<p>‘ಸಿಎಮ್ಮಯ್ಯಾಜೀ, ತಮಾಷೆ ಮಾಡ್ತೀರೇನು? ಈಚೆಗೆ ನಾನು ಹೊಸ ಹೊಸ ಯೋಚನೆಗಳಿಗೆ ಬೇರೆಯವರ ತಲೆಯನ್ನು ಬಳಸಿಕೊಳ್ಳುತಿಲ್ಲ ಎಂದು ನಿಮಗೆ ಗೊತ್ತಿರಲಿ’.</p>.<p>‘ವೋಟಿಗಾಗಿ ದೇವಾಲಯಗಳಿಗೆ ಓಟ ಬಿಟ್ಟರೆ… ಗೆಲ್ಲಲು ಇನ್ಯಾವ ಸೂತ್ರವಿದೆ?’</p>.<p>‘ನಾನು ಬರೀ ದೇವಾಲಯಗಳಿಗೆ ಓಡಿದರೆ ಸಾಲದು. ನಮ್ಮ ಚುನಾವಣಾ ಪ್ರಣಾಳಿಕೆಯ ಪ್ರಮುಖ ಭರವಸೆಯೇ- ‘ನಾವು ರಾಮ ಮಂದಿರ ಕಟ್ಟುತ್ತೇವೆ!’</p>.<p>‘ಓ ಮೈ ಗಾಡ್! ನಮ್ಮ ಮುಸ್ಲಿಂ ವೋಟು ಬ್ಯಾಂಕಿನ ಗತಿ? ಬೇಡ, ಇದು ತಪ್ಪುಹೆಜ್ಜೆ!’</p>.<p>‘ರೀ! ನೀವು ವಿತ್ತ ಸಚಿವ ಆಗಬೇಕೋ ಬೇಡವೋ?’</p>.<p>‘ಆಗಬೇಕು... ಆದರೂ...’</p>.<p>‘ಹಾಗಾದ್ರೆ ಸುಮ್ನೆ ಕೋಲೆ ಬಸವನಂತೆ ಕೇಳಿ! ರಾಮ ಮಂದಿರ ಅಷ್ಟೇ ಅಲ್ಲ, ಅದರ ಪಕ್ಕದಲ್ಲೇ ಸರ್ದಾರ್ ಪ್ರತಿಮೆಗಿಂತ ಮೂರು ಪಟ್ಟು ದೊಡ್ಡ ಆಂಜನೇಯನ ಪ್ರತಿಮೆಯ ಸ್ಥಾಪನೆ ಕೂಡಾ ಇನ್ನೊಂದು ಭರವಸೆ. ಅವನು ಪರಿಶಿಷ್ಟ ಜಾತಿಗೆ ಸೇರಿದವನೂ ಆಗಿರುವುದರಿಂದ ಮತಗಳಿಕೆ ಸುಲಭ’.</p>.<p>‘ಯಾರು, ನಮ್ಮ ಮಾಜಿ ಸಚಿವ ಆಂಜನೇಯನೇ?’</p>.<p>‘ಅವರಲ್ರೀ! ಮೊನ್ನೆ ಬಾಜಪ್ಪರು ಆಂಜನೇಯ ಒಬ್ಬ ದಲಿತ ಅಂದಿದ್ದು ಗೊತ್ತಿಲ್ವಾ?’</p>.<p>ಓಹ್! ಹಾಗಾದರೆ ನಿಮ್ಮನ್ನು ಹನುಮಾನ್ ಭಕ್ತ ಎಂದು ಪ್ರಚಾರ ಮಾಡಬಹುದು!’</p>.<p>‘ನನ್ನನ್ನು ಈಗಾಗಲೇ ಜನ ಶಿವಭಕ್ತ ಎಂದು ಗುರುತಿಸಿದ್ದಾರಲ್ರೀ…’</p>.<p>‘ಹಾಗನ್ನಬೇಡಿ! ಎಲ್ಲಾ ಹಿಂದೂಗಳಂತೆ ಎಲ್ಲಾ ದೇವರಿಗೆ ನಿಮ್ಮ ಭಕ್ತಿ ಹಂಚದಿದ್ದರೆ, ನೀವೊಬ್ಬ ಹಿಂದೂವೇ ಅಲ್ಲ ಎಂಬ ಗುಮಾನಿ ಬಲವಾಗುತ್ತದೆ!‘</p>.<p>‘ಸರಿ, ಭಜರಂಗ ಬಲಿ ಕೀ ಜೈ!’</p>.<p>‘ಈಗಾಗಲೇ ಜನರು ನಿಮ್ಮನ್ನು ಆಜನ್ಮ ಬ್ರಹ್ಮಚಾರಿ ಎಂದು ತಿಳಿದುಕೊಂಡಿದ್ದಾರೆ. ನೀವೊಬ್ಬ ಹನುಮಾನ್ ಭಕ್ತ ಎಂದು ಗೊತ್ತಾದರೆ ಅವರಿಗೆ ನಿಮ್ಮ ಮೇಲೆ ಅಭಿಮಾನ ಇಮ್ಮಡಿಯಾಗುತ್ತದೆ’.</p>.<p>‘ಹೌದಲ್ಲ! ಹನುಮಾನ್ ಭಕ್ತನಾಗಿರುವುದರಿಂದ ನಾನು ರಾಮ ಮಂದಿರ ಕಟ್ಟೇ ಕಟ್ಟುತ್ತೇನೆ ಎಂದು ಜನ ದೃಢವಾಗಿ ನಂಬುತ್ತಾರೆ. ಜೈ ಭಜರಂಗ ಬಲಿಕೀ ಜೈ!’</p>.<p>‘ನಿಜ, ಜೈ ಭಜರಂಗ ಬಲಿಕೀ ಜೈ ಎಂಬ ಘೋಷ ವಾಕ್ಯವನ್ನು ಪ್ರತೀ ಭಾಷಣದ ಅಂತ್ಯದಲ್ಲಿ ಹೇಳಿದರೆ ಚೆನ್ನಾಗಿರುತ್ತೆ!’</p>.<p>‘ಅದಕ್ಕೇನಂತೆ? ಅದೂ ಹೇಳೋಣ. ಅಂದಹಾಗೆ ಬೆಂಗಳೂರು ರಾಜ್ಯದಲ್ಲಿ ಕೂಡಲೇ ವಿಷ್ಣು ಮಂದಿರ ನಿರ್ಮಿಸಲು ಹೇಳಿ. ವಿಷ್ಣು ಭಕ್ತರ ಮತ ಸಿಗಬೇಕಲ್ಲ’.</p>.<p>‘ಅದು ಬಿಟ್ಬಿಡಿ, ಆ ವಿಷ್ಣು ದೇವರಲ್ಲ. ಅದೆಲ್ಲಾ ಸರಿ, ನೀವು ಬಾಜಪ್ಪರ ಹಿಂದುತ್ವವನ್ನು ಹೀಗೆ ಸಾರಾಸಗಟಾಗಿ ಬಳಸುವಾಗ ಅವರೇನು ಸುಮ್ಮನಿರುತ್ತಾರೆಯೇ?’</p>.<p>‘ಅವರಿಗೆ ಈಗ ಹಿಂದುತ್ವವೇ ಬೇಡ. ಸಂಘ, ಸಂತರ ಸಹವಾಸವೂ ಸಾಕೆನಿಸಿದೆಯಂತೆ. ಯಾಕೆಂದರೆ ಅವರದ್ದು ಈಗ ಮೋದಿತ್ವ!’</p>.<p>‘ಯಸ್! ಹಾಗಾದರೆ ರಾಯಲ್ಜೀ, ಒಂದು ವಾರ ನಮ್ಮ ಹಳ್ಳಿಗೆ ಬನ್ನಿ. ಸಗಣಿ ಎತ್ತೋಕೆ ಕಲಿಸ್ತೀನಿ’.</p>.<p>‘ಅದ್ಯಾಕ್ರೀ?’</p>.<p>‘ನೀವೊಬ್ಬ ಗೋರಕ್ಷಕ ಎಂದೂ ಬಿಂಬಿಸಬೇಕಲ್ಲ...!’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೈಕಮಾಂಡಿನಿಂದ ನಮ್ಮ ಮಾಜಿ ಸಿಎಮ್ಮಯ್ಯರಿಗೆ ಬೆಳ್ಳಂಬೆಳಿಗ್ಗೆ ತುರ್ತು ಬುಲಾವ್ ಬಂತು. ಗೊರಕೆ ಹೊಡೆಯುತ್ತಲೇ ವಿಮಾನ ಹತ್ತಿದ ಮಾಜಿ ಸಿಎಮ್ಮಯ್ಯ ಕೆಲವೇ ಗಂಟೆಗಳಲ್ಲಿ ರಾಯಲ್ ಗಾಂಧಿ ಮುಂದೆ ಕುಳಿತಿದ್ದರು.</p>.<p>‘ಏನಿಲ್ಲ ಸಿಎಮ್ಮಯ್ಯಾಜೀ… ರಾತ್ರಿ ಒಂದು ಅದ್ಭುತ ಕನಸು ಬಿತ್ತು. ಅದರಲ್ಲಿ, ಬರುವ ಲೋಕಸಭೆ ಚುನಾವಣೆಯಲ್ಲಿ ನಾವು ಪ್ರಚಂಡ ಬಹುಮತದಿಂದ ಗೆಲ್ಲುವ ದೃಶ್ಯವನ್ನು ತ್ರಿ-ಡಿ ಯಲ್ಲಿ ನೋಡಿದಂತಾಯಿತು’.</p>.<p>‘ಓಹ್! ಅದು ನಿಜಕ್ಕೂ ಅದ್ಭುತ ಕನಸು ರಾಯಲ್ಜೀ! ಆದರೆ ಹಾಗೇ ಸುಖಾಸುಮ್ಮನೆ ಗೆಲ್ಲುವುದೆಂದರೆ ಹೇಗೆ? ಈ ಕನಸು ಮತ್ತು ಜ್ಯೋತಿಷಿಗಳನ್ನು ನಂಬುವ ಹಾಗಿಲ್ಲ‘.</p>.<p>‘ಇಲ್ಲ, ಸಿಎಮ್ಮಯ್ಯಜೀ… ಹಾಗೇ ಆರಾಮವಾಗಿ ಗೆದ್ದ ಕನಸೇನಲ್ಲ. ನಾವು ಹಿಂದುತ್ವವನ್ನು ಮುಂದಿಟ್ಟುಕೊಂಡು ಗೆದ್ದದ್ದು!’</p>.<p>‘ಅಂದರೆ ನೀವು ಹೇಳೋದು... ಮೃದು ಹಿಂದುತ್ವದ ಬಗ್ಗೆ…?’</p>.<p>‘ನೋ ನೋ! ಇದು ಬಾಜಪ್ಪರು ಉಪಯೋಗಿಸುತ್ತಿದ್ದ ಹಿಂದುತ್ವ. ನಮ್ಮ ಕುತಂತ್ರರೂರ್ಜೀ ಅದನ್ನು ಅಲ್ಲಿಂದ ಅಪಹರಿಸಿದ್ದಾರೆ’.</p>.<p>‘ಅಯ್ಯೋ! ಆ ಹಿಂದುತ್ವ ಬಹಳ ಡೇಂಜರು! ಬೇಡ, ರಾಯಲ್ಜೀ… ನಮಗೆ ಮೃದು ಹಿಂದುತ್ವ ಸಾಕು’.</p>.<p>‘ನೋಡಿ, ನಿಮಗೆ ಕೇಂದ್ರ ಸಚಿವರಾಗಬೇಕೋ ಬೇಡವೋ?’</p>.<p>‘ಖಂಡಿತ! ವಿತ್ತ ಸಚಿವನಾಗಬೇಕೂಂತ ತುಂಬಾ ಆಸೆಯಿದೆ’.</p>.<p>‘ಹಾಗಾದ್ರೆ ಸುಮ್ಮನೆ ಗುಟುರುಗಿಟುರು ಅನ್ನದೆ ನನ್ನ ಮಾತು ಕೇಳಿ. ನಮ್ಮ ಪಕ್ಷ ಬಾಜಪ್ಪರ ಹಿಂದುತ್ವ ತಂತ್ರ ಬಳಸಿ ಹಿಂದೂಗಳನ್ನು ಬುಟ್ಟಿಗೆ ಹಾಕಿಕೊಳ್ಳೋಕೆ ನಾನಂತೂ ನಿರ್ಧರಿಸಿದ್ದೇನೆ’.</p>.<p>‘ಅದಕ್ಕೆ ಬೇಕಾದ ಸೂತ್ರಗಳೇನಾದರೂ ಕನಸಿನಲ್ಲಿ ಕಂಡಿದ್ದೀರಾ?’</p>.<p>‘ಸಿಎಮ್ಮಯ್ಯಾಜೀ, ತಮಾಷೆ ಮಾಡ್ತೀರೇನು? ಈಚೆಗೆ ನಾನು ಹೊಸ ಹೊಸ ಯೋಚನೆಗಳಿಗೆ ಬೇರೆಯವರ ತಲೆಯನ್ನು ಬಳಸಿಕೊಳ್ಳುತಿಲ್ಲ ಎಂದು ನಿಮಗೆ ಗೊತ್ತಿರಲಿ’.</p>.<p>‘ವೋಟಿಗಾಗಿ ದೇವಾಲಯಗಳಿಗೆ ಓಟ ಬಿಟ್ಟರೆ… ಗೆಲ್ಲಲು ಇನ್ಯಾವ ಸೂತ್ರವಿದೆ?’</p>.<p>‘ನಾನು ಬರೀ ದೇವಾಲಯಗಳಿಗೆ ಓಡಿದರೆ ಸಾಲದು. ನಮ್ಮ ಚುನಾವಣಾ ಪ್ರಣಾಳಿಕೆಯ ಪ್ರಮುಖ ಭರವಸೆಯೇ- ‘ನಾವು ರಾಮ ಮಂದಿರ ಕಟ್ಟುತ್ತೇವೆ!’</p>.<p>‘ಓ ಮೈ ಗಾಡ್! ನಮ್ಮ ಮುಸ್ಲಿಂ ವೋಟು ಬ್ಯಾಂಕಿನ ಗತಿ? ಬೇಡ, ಇದು ತಪ್ಪುಹೆಜ್ಜೆ!’</p>.<p>‘ರೀ! ನೀವು ವಿತ್ತ ಸಚಿವ ಆಗಬೇಕೋ ಬೇಡವೋ?’</p>.<p>‘ಆಗಬೇಕು... ಆದರೂ...’</p>.<p>‘ಹಾಗಾದ್ರೆ ಸುಮ್ನೆ ಕೋಲೆ ಬಸವನಂತೆ ಕೇಳಿ! ರಾಮ ಮಂದಿರ ಅಷ್ಟೇ ಅಲ್ಲ, ಅದರ ಪಕ್ಕದಲ್ಲೇ ಸರ್ದಾರ್ ಪ್ರತಿಮೆಗಿಂತ ಮೂರು ಪಟ್ಟು ದೊಡ್ಡ ಆಂಜನೇಯನ ಪ್ರತಿಮೆಯ ಸ್ಥಾಪನೆ ಕೂಡಾ ಇನ್ನೊಂದು ಭರವಸೆ. ಅವನು ಪರಿಶಿಷ್ಟ ಜಾತಿಗೆ ಸೇರಿದವನೂ ಆಗಿರುವುದರಿಂದ ಮತಗಳಿಕೆ ಸುಲಭ’.</p>.<p>‘ಯಾರು, ನಮ್ಮ ಮಾಜಿ ಸಚಿವ ಆಂಜನೇಯನೇ?’</p>.<p>‘ಅವರಲ್ರೀ! ಮೊನ್ನೆ ಬಾಜಪ್ಪರು ಆಂಜನೇಯ ಒಬ್ಬ ದಲಿತ ಅಂದಿದ್ದು ಗೊತ್ತಿಲ್ವಾ?’</p>.<p>ಓಹ್! ಹಾಗಾದರೆ ನಿಮ್ಮನ್ನು ಹನುಮಾನ್ ಭಕ್ತ ಎಂದು ಪ್ರಚಾರ ಮಾಡಬಹುದು!’</p>.<p>‘ನನ್ನನ್ನು ಈಗಾಗಲೇ ಜನ ಶಿವಭಕ್ತ ಎಂದು ಗುರುತಿಸಿದ್ದಾರಲ್ರೀ…’</p>.<p>‘ಹಾಗನ್ನಬೇಡಿ! ಎಲ್ಲಾ ಹಿಂದೂಗಳಂತೆ ಎಲ್ಲಾ ದೇವರಿಗೆ ನಿಮ್ಮ ಭಕ್ತಿ ಹಂಚದಿದ್ದರೆ, ನೀವೊಬ್ಬ ಹಿಂದೂವೇ ಅಲ್ಲ ಎಂಬ ಗುಮಾನಿ ಬಲವಾಗುತ್ತದೆ!‘</p>.<p>‘ಸರಿ, ಭಜರಂಗ ಬಲಿ ಕೀ ಜೈ!’</p>.<p>‘ಈಗಾಗಲೇ ಜನರು ನಿಮ್ಮನ್ನು ಆಜನ್ಮ ಬ್ರಹ್ಮಚಾರಿ ಎಂದು ತಿಳಿದುಕೊಂಡಿದ್ದಾರೆ. ನೀವೊಬ್ಬ ಹನುಮಾನ್ ಭಕ್ತ ಎಂದು ಗೊತ್ತಾದರೆ ಅವರಿಗೆ ನಿಮ್ಮ ಮೇಲೆ ಅಭಿಮಾನ ಇಮ್ಮಡಿಯಾಗುತ್ತದೆ’.</p>.<p>‘ಹೌದಲ್ಲ! ಹನುಮಾನ್ ಭಕ್ತನಾಗಿರುವುದರಿಂದ ನಾನು ರಾಮ ಮಂದಿರ ಕಟ್ಟೇ ಕಟ್ಟುತ್ತೇನೆ ಎಂದು ಜನ ದೃಢವಾಗಿ ನಂಬುತ್ತಾರೆ. ಜೈ ಭಜರಂಗ ಬಲಿಕೀ ಜೈ!’</p>.<p>‘ನಿಜ, ಜೈ ಭಜರಂಗ ಬಲಿಕೀ ಜೈ ಎಂಬ ಘೋಷ ವಾಕ್ಯವನ್ನು ಪ್ರತೀ ಭಾಷಣದ ಅಂತ್ಯದಲ್ಲಿ ಹೇಳಿದರೆ ಚೆನ್ನಾಗಿರುತ್ತೆ!’</p>.<p>‘ಅದಕ್ಕೇನಂತೆ? ಅದೂ ಹೇಳೋಣ. ಅಂದಹಾಗೆ ಬೆಂಗಳೂರು ರಾಜ್ಯದಲ್ಲಿ ಕೂಡಲೇ ವಿಷ್ಣು ಮಂದಿರ ನಿರ್ಮಿಸಲು ಹೇಳಿ. ವಿಷ್ಣು ಭಕ್ತರ ಮತ ಸಿಗಬೇಕಲ್ಲ’.</p>.<p>‘ಅದು ಬಿಟ್ಬಿಡಿ, ಆ ವಿಷ್ಣು ದೇವರಲ್ಲ. ಅದೆಲ್ಲಾ ಸರಿ, ನೀವು ಬಾಜಪ್ಪರ ಹಿಂದುತ್ವವನ್ನು ಹೀಗೆ ಸಾರಾಸಗಟಾಗಿ ಬಳಸುವಾಗ ಅವರೇನು ಸುಮ್ಮನಿರುತ್ತಾರೆಯೇ?’</p>.<p>‘ಅವರಿಗೆ ಈಗ ಹಿಂದುತ್ವವೇ ಬೇಡ. ಸಂಘ, ಸಂತರ ಸಹವಾಸವೂ ಸಾಕೆನಿಸಿದೆಯಂತೆ. ಯಾಕೆಂದರೆ ಅವರದ್ದು ಈಗ ಮೋದಿತ್ವ!’</p>.<p>‘ಯಸ್! ಹಾಗಾದರೆ ರಾಯಲ್ಜೀ, ಒಂದು ವಾರ ನಮ್ಮ ಹಳ್ಳಿಗೆ ಬನ್ನಿ. ಸಗಣಿ ಎತ್ತೋಕೆ ಕಲಿಸ್ತೀನಿ’.</p>.<p>‘ಅದ್ಯಾಕ್ರೀ?’</p>.<p>‘ನೀವೊಬ್ಬ ಗೋರಕ್ಷಕ ಎಂದೂ ಬಿಂಬಿಸಬೇಕಲ್ಲ...!’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>