ಮುಂಬೈ: ದೇಶ ಕೋವಿಡ್ ಸಾಂಕ್ರಾಮಿಕದಿಂದ ತತ್ತರಿಸುತ್ತಿದೆ. ಕೊರೊನಾ ರೋಗಿಗಳು ಆಸ್ಪತ್ರೆಗಳಿಗೆ ತೆರಳುವುದು ಕಷ್ಟಕರವಾಗಿದೆ. ಹಲವೆಡೆ ಸರಿಯಾದ ಸಂದರ್ಭಕ್ಕೆ ಆಂಬುಲೆನ್ಸ್ ಬರದೆ ರೋಗಿಗಳು ಸಂಕಷ್ಟಕ್ಕೀಡಾದ ಬಗ್ಗೆ ವರದಿಗಳನ್ನು ಕೇಳಿದ್ದೇವೆ. ಹೀಗಾಗಿ, ಮುಂಬೈನ ವ್ಯಕ್ತಿಯೊಬ್ಬ ಕೋವಿಡ್ ರೋಗಿಗಳನ್ನು ಆಟೋದಲ್ಲಿ ಉಚಿತವಾಗಿ ಆಸ್ಪತ್ರೆಗಳಿಗೆ ಕರೆದೊಯ್ಯುವ ಪುಣ್ಯ ಕೆಲಸದಲ್ಲಿ ನಿರತರಾಗಿದ್ದಾರೆ.