ಗಣಿಗಾರಿಕೆ... ಇದು ರಾಜ್ಯದ ಜನರನ್ನು ಆಗಾಗ್ಗೆ ಆತಂಕಕ್ಕೆ ದೂಡುವ ಉದ್ಯಮ. ಅವಘಡ ಸಂಭವಿಸಿದಾಗ ಎಲ್ಲರಿಗೂ ಇದು ಬೇಡವಾದ ಕ್ಷೇತ್ರ ಹಾಗೂ ಆಕ್ರೋಶಕ್ಕೆ ಒಳಗಾಗುವ ವ್ಯವಹಾರ. ಆದರೆ, ಒಳಗೊಳಗೆ ಎಲ್ಲರಿಗೂ ಬೇಕೇಬೇಕು. ಇದು ಗಣಿಗಾರಿಕೆ ಸರ್ಕಾರಕ್ಕೂ ಬೇಕು. ಸಕ್ರಮ ಗಣಿಗಾರಿಕೆ ನಿಯಮಾನುಸಾರ ನಡೆದರೆ ಅಷ್ಟೇನು ತೊಂದರೆಯೂ ಇರುವುದಿಲ್ಲ. ನಿಯಮಗಳನ್ನು ಪಾಲಿಸಿದರೆ ಆದಾಯ ಅಥವಾ ಲಾಭ ಕಡಿಮೆಯಾಗುತ್ತದೆ ಎಂದು ಅಕ್ರಮಕ್ಕೆ ಎಲ್ಲಿಲ್ಲದ ಮಣೆ. ಇದಕ್ಕೆ ರಾಜಕೀಯ ಪ್ರಭಾವದ ಒತ್ತಾಸೆಯೂ ಇದೆ