<p><strong>ಬೆಂಗಳೂರು:</strong> ‘ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಹೇಳಿದ್ದ ಜಲಮಂಡಳಿಯ ಮೀಟರ್ ರೀಡರ್ ಹಾಗೂ ಗುತ್ತಿಗೆದಾರ, ನನ್ನಿಂದ ₹ 3.77 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಇ.ಎನ್. ಲಕ್ಷ್ಮಿನರಸಿಂಹಯ್ಯ ಎಂಬುವರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ.</p>.<p>‘ಕಾಮಾಕ್ಷಿಪಾಳ್ಯ ಪೇಟೆ ಚನ್ನಪ್ಪ ಕೈಗಾರಿಕಾ ಪ್ರದೇಶದಲ್ಲಿ ‘ಆದಿತ್ಯಾ ಕಾಂಪೋನೆಂಟ್ಸ್’ ಕಾರ್ಖಾನೆ ನಡೆಸುತ್ತಿರುವ ಲಕ್ಷ್ಮಿನರಸಿಂಹಯ್ಯ, ಮೇ 5ರಂದು ದೂರು ನೀಡಿದ್ದಾರೆ. ಮೀಟರ್ ರೀಡರ್ ನಾರಾಯಣ ಹಾಗೂ ಗುತ್ತಿಗೆದಾರ ಪ್ರಕಾಶ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಲಕ್ಷ್ಮಿನರಸಿಂಹಯ್ಯ ಅವರ ಕಾರ್ಖಾನೆಯಲ್ಲಿ ಎರಡು ಘಟಕಗಳಿವೆ. ಮೊದಲ ಘಟಕದಲ್ಲಿ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಇದೆ. ಎರಡನೇ ಘಟಕದಲ್ಲಿ ಸ್ವಂತ ಬೋರ್ವೆಲ್ ಇದ್ದು, ಅಲ್ಲಿಯೇ ಜಲಮಂಡಳಿಯಿಂದ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ನಾರಾಯಣ ಹೇಳಿದ್ದರು. ಆ ಕೆಲಸ ಮಾಡಿಕೊಡಲು ಗುತ್ತಿಗೆದಾರ ಪ್ರಕಾಶ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು.’</p>.<p>‘ಜಲಮಂಡಳಿಯದ್ದು ಎನ್ನಲಾದ ಪತ್ರವೊಂದನ್ನು ತೋರಿಸಿದ್ದ ಆರೋಪಿಗಳು, ₹ 3.77 ಲಕ್ಷ ಶುಲ್ಕ ಪಾವತಿ ಮಾಡುವಂತೆ ಹೇಳಿದ್ದರು. ಅದನ್ನು ನಂಬಿದ್ದ ಲಕ್ಷ್ಮಿನರಸಿಂಹಯ್ಯ, ಡಿ.ಡಿ ತೆಗೆಸಿ ಕೊಟ್ಟಿದ್ದರು. ಅಷ್ಟಾದರೂ ಆರೋಪಿಗಳು, ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಹೇಳಿದ್ದ ಜಲಮಂಡಳಿಯ ಮೀಟರ್ ರೀಡರ್ ಹಾಗೂ ಗುತ್ತಿಗೆದಾರ, ನನ್ನಿಂದ ₹ 3.77 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಇ.ಎನ್. ಲಕ್ಷ್ಮಿನರಸಿಂಹಯ್ಯ ಎಂಬುವರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ.</p>.<p>‘ಕಾಮಾಕ್ಷಿಪಾಳ್ಯ ಪೇಟೆ ಚನ್ನಪ್ಪ ಕೈಗಾರಿಕಾ ಪ್ರದೇಶದಲ್ಲಿ ‘ಆದಿತ್ಯಾ ಕಾಂಪೋನೆಂಟ್ಸ್’ ಕಾರ್ಖಾನೆ ನಡೆಸುತ್ತಿರುವ ಲಕ್ಷ್ಮಿನರಸಿಂಹಯ್ಯ, ಮೇ 5ರಂದು ದೂರು ನೀಡಿದ್ದಾರೆ. ಮೀಟರ್ ರೀಡರ್ ನಾರಾಯಣ ಹಾಗೂ ಗುತ್ತಿಗೆದಾರ ಪ್ರಕಾಶ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಲಕ್ಷ್ಮಿನರಸಿಂಹಯ್ಯ ಅವರ ಕಾರ್ಖಾನೆಯಲ್ಲಿ ಎರಡು ಘಟಕಗಳಿವೆ. ಮೊದಲ ಘಟಕದಲ್ಲಿ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಇದೆ. ಎರಡನೇ ಘಟಕದಲ್ಲಿ ಸ್ವಂತ ಬೋರ್ವೆಲ್ ಇದ್ದು, ಅಲ್ಲಿಯೇ ಜಲಮಂಡಳಿಯಿಂದ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ನಾರಾಯಣ ಹೇಳಿದ್ದರು. ಆ ಕೆಲಸ ಮಾಡಿಕೊಡಲು ಗುತ್ತಿಗೆದಾರ ಪ್ರಕಾಶ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು.’</p>.<p>‘ಜಲಮಂಡಳಿಯದ್ದು ಎನ್ನಲಾದ ಪತ್ರವೊಂದನ್ನು ತೋರಿಸಿದ್ದ ಆರೋಪಿಗಳು, ₹ 3.77 ಲಕ್ಷ ಶುಲ್ಕ ಪಾವತಿ ಮಾಡುವಂತೆ ಹೇಳಿದ್ದರು. ಅದನ್ನು ನಂಬಿದ್ದ ಲಕ್ಷ್ಮಿನರಸಿಂಹಯ್ಯ, ಡಿ.ಡಿ ತೆಗೆಸಿ ಕೊಟ್ಟಿದ್ದರು. ಅಷ್ಟಾದರೂ ಆರೋಪಿಗಳು, ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>