ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಸರ್ಕಾರಿ ಶಾಲೆಯ ಆಸ್ತಿ ಕೈತಪ್ಪುತ್ತಿರುವುದನ್ನು ಅರಿತ ಆ ಶಾಲೆಯ ಮುಖ್ಯ ಶಿಕ್ಷಕಿ ಶೀಲಾ ರಾಣಿ ಅವರು, ಈ ವಿಷಯವನ್ನು ಇಲಾಖೆಯ ಗಮನಕ್ಕೆ ತಂದು ಶಾಲೆಯನ್ನು ಉಳಿಸಿಕೊಳ್ಳಲು ನಿರಂತರವಾಗಿ ಶ್ರಮಿಸಿದರು. ಶಾಲಾ ಕೆಲಸದ ಬಿಡುವಿನ ಸಮಯದಲ್ಲಿ ಕಚೇರಿಗಳಿಗೆ ಅಲೆದು, ತಾವು ಸಂಗ್ರಹಿಸಿದ ದಾಖಲೆಗಳನ್ನು ನೀಡಿ ಇದು ಸರ್ಕಾರಿ ಶಾಲೆಯ ಜಾಗ ಎಂದು ಸಾಬೀತುಪಡಿಸಿದರು.