<p>ಭಾರತೀಯ ಮಹಿಳೆಯರಲ್ಲಿ ಕೂದಲುದರಲು ಮುಖ್ಯ ಕಾರಣವೆಂದರೆ ಹೈಪೊ ಥೈರಾಡಿಸಂ ಹಾಗೂ ಅಪೌಷ್ಟಿಕತನ ಎಂದು ಹೇಳಬಹುದು. ಈ ಎರಡೂ ಅಂಶಗಳಿಗೆ ಚಿಕಿತ್ಸೆ ಮತ್ತು ಆರೈಕೆ ಇದ್ದಲ್ಲಿ ಕೂದಲುದುರುವುದನ್ನು ತಡೆಯಬಹುದು.</p>.<p><strong>ಇತರ ಕಾರಣಗಳೆಂದರೆ...</strong><br /> <strong>ಬೋಳುತನ</strong>: ತಲೆಯಲ್ಲಿ ಅಲ್ಲಲ್ಲೇ ಕೂದಲು ಉದುರುತ್ತ ಹೋಗುವುದು. ಮೊದಲು ಈ ಪ್ರದೇಶ ಪ್ಯಾಚ್ಗಳಂತೆ ಕಂಡರೂ ಆರು ತಿಂಗಳ ಅವಧಿಯಲ್ಲಿ ಬೋಳುತನ ಎದ್ದು ಕಾಣುತ್ತದೆ.<br /> <br /> <strong>ಫಂಗಲ್ ಸೋಂಕು</strong>: ಮಕ್ಕಳಲ್ಲಿ ಈ ಸೋಂಕು ಕಂಡು ಬರುತ್ತದೆ. ಸೋಂಕಿತ ಪ್ರದೇಶವು ಕೆಂಪಾಗಿದ್ದು, ಕೆರೆತದಿಂದ ಕೂಡಿರುತ್ತದೆ. ಆ ಪ್ರದೇಶದ ಕೂದಲು ಉದುರಿ ಹೋಗುತ್ತವೆ. ಆದರೆ ಸೋಂಕು ವಿರೋಧಿ ಚಿಕಿತ್ಸೆ ನೀಡಿದ ನಂತರ ಖಂಡಿತವಾಗಿಯೂ ಆ ಪ್ರದೇಶದಲ್ಲಿ ಮತ್ತೆ ಕೂದಲು ಹುಟ್ಟುತ್ತವೆ ಹಾಗೂ ಬೆಳೆಯುತ್ತವೆ. <br /> <br /> <strong>ಗರ್ಭಾವಸ್ಥೆ:</strong> ಗರ್ಭಾವಸ್ಥೆಯಲ್ಲಿ ಕೂದಲು ಅತಿ ಹೊಳಪಿನಿಂದ ಹಾಗೂ ದಟ್ಟವಾಗಿ ಕಾಣುತ್ತವೆ. ಮಹಿಳೆಯ ಹಾರ್ಮೋನುಗಳಲ್ಲಿ ಆಗುವ ಏರುಪೇರಿನಿಂದಾಗಿ ಹೀಗೆ ಕಾಣಿಸುತ್ತದೆ. ಆದರೆ ಹೆರಿಗೆಯ ನಂತರ ಮತ್ತೆ ಕೂದಲುದುರುತ್ತವೆ. ಇದಕ್ಕೂ ಹಾರ್ಮೋನುಗಳ ಸ್ಥಿತಿಯೇ ಕಾರಣ. 2–3 ವರ್ಷಗಳ ಅವಧಿಯಲ್ಲಿ ಕೂದಲು ಮತ್ತೆ ಮಾಮೂಲಿ ಸ್ಥಿತಿಗೆ ಮರಳುತ್ತದೆ. <br /> <br /> <strong>ಗರ್ಭ ನಿರೋಧಕ ಮಾತ್ರೆಗಳ ಸೇವನೆ: </strong>ನಿರಂತರವಾಗಿ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಕೂದಲು ಬೆಳೆಯುವುದು ಕ್ಷೀಣಗೊಳ್ಳುತ್ತದೆ. ಕ್ರಮೇಣ ಉದುರುವ ಸಾಧ್ಯತೆಯೂ ಇರುತ್ತದೆ.<br /> <br /> <strong>ಕಟ್ಟುನಿಟ್ಟಿನ ಡಯಟ್</strong>: ತೂಕ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಡಯಟ್ ಕೈಗೊಂಡಿದ್ದರೆ, ಪ್ರೋಟಿನ್ನ ಕೊರತೆಯುಂಟಾದಲ್ಲಿ ಕೂದಲು ಉದುರಬಹುದು. ಡಯಟ್ ಸಂದರ್ಭದಲ್ಲಿ ಸಪ್ಲಿಮೆಂಟ್ ಸೇವಿಸುವುದು ಉತ್ತಮ.<br /> <br /> <strong>ಬಿಗಿಯಾದ ಕೇಶ ಶೈಲಿ: </strong>ಕೂದಲನ್ನು ಬಿಗಿಯಾಗಿ ಹೆಣೆಯುವುದು ಕೂದಲಿನ ಬುಡವನ್ನು ಶಿಥಿಲಗೊಳಿಸುತ್ತದೆ. ಆದಷ್ಟು ಸರಳ ಮತ್ತು ಸಡಿಲವಾದ ಕೇಶ ವಿನ್ಯಾಸ ಮಾಡಿಕೊಳ್ಳುವುದು ಕೂದಲಿನ ಆರೋಗ್ಯಕ್ಕೆ ಉತ್ತಮ.<br /> <br /> ಕೇಶ ವಿನ್ಯಾಸಕ್ಕೆ ಹೇರ್ಸ್ಟ್ರೇಟ್ನಿಂಗ್, ಗುಂಗುರು ಮಾಡಿಸಿಕೊಳ್ಳುವುದು, ಮೃದುಗೊಳಿಸುವ ಕೆಮಿಕಲ್ ಆಧಾರಿತ ಚಿಕಿತ್ಸೆಗಳಿಗೆ ಒಳಗಾಗುವುದರ ಪರಿಣಾಮವಾಗಿಯೂ ಕೂದಲುದುರುವ ಸಮಸ್ಯೆಯನ್ನು ಎದುರಿಸಬಹುದು. ಕ್ಯಾನ್ಸರ್ ಚಿಕಿತ್ಸೆಗೆ ಒಳಪಡುತ್ತಿದ್ದಲ್ಲಿ, ರೇಡಿಯೇಷನ್, ಔಷಧಿ ಅಥವಾ ಕೀಮೊಥೆರಪಿಗೆ ಒಳಪಟ್ಟಿದ್ದಲ್ಲಿ ಕೂದಲುದುರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.<br /> <br /> <strong>ಅತಿಯಾದ ಒತ್ತಡ: </strong>ಅತಿಯಾದ ಒತ್ತಡವೂ ಕೂದಲುದುರಲು ಕಾರಣವಾಗುತ್ತದೆ. ಅದು ದೈಹಿಕವಾಗಿರಬಹುದು. ಮಾನಸಿಕ ಒತ್ತಡವಾಗಿರಬಹುದು.<br /> <br /> <strong>ಚಿಕಿತ್ಸೆ:</strong> ಪೌಷ್ಟಿಕಾಂಶಗಳ ಮರು ಪೂರೈಕೆ ಚಿಕಿತ್ಸೆಯ ಒಂದು ಅಂಶವಾಗಬಹುದು. ಹಾರ್ಮೋನುಗಳಿಗಾಗಿಯೂ ಚಿಕಿತ್ಸೆ ಪಡೆಯಬಹುದು. ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವುದರಿಂದ ಕೂದಲಿನ ಬುಡಕ್ಕೆ ರಕ್ತ ಸರಬರಾಜು ಸರಾಗವಾಗಿ, ಕೂದಲು ಶಕ್ತವಾಗಿ. ನಿರಂತರ ಬೆಳವಣಿಗೆ ಕಾಣಬಹುದು.<br /> <br /> ಕೂದಲಿನ ಸಾಂದ್ರತೆ ಕ್ಷೀಣಿಸಿದ್ದಲ್ಲಿ, ನಿಮ್ಮ ಮುಖದ ಆಕಾರಕ್ಕೆ ಹೊಂದುವ ಕೇಶ ವಿನ್ಯಾಶ ಮಾಡಿಸಿಕೊಳ್ಳಬಹುದು. ಬೋಳುತನ ಮರೆಮಾಚಲು ವಿಗ್ ಮೊರೆ ಹೋಗಬಹುದು. ಅಥವಾ ಕೂದಲು ಕಸಿ ಸಹ ಮಾಡಿಸಿಕೊಳ್ಳಬಹುದು. ಪರಿಹಾರವು ಸಮಸ್ಯೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಪ್ರತಿ ಪರಿಹಾರಕ್ಕೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಅತ್ಯಗತ್ಯ.<br /> <br /> <strong>ಮನೆ ಚಿಕಿತ್ಸೆ</strong>: ಕೂದಲಿನ ಬುಡಕ್ಕೆ ಉಗುರು ಬಿಸಿ ಎಣ್ಣೆಯಿಂದ ವಾರಕ್ಕೆ ಒಮ್ಮೆ ಮಸಾಜ್ ಮಾಡಿ, ತಲೆ ಸ್ನಾನ ಮಾಡಬೇಕು. ಕನಿಷ್ಠ ಮೂರು ತಿಂಗಳವರೆಗಾದರೂ ಈ ಆರೈಕೆ ಮಾಡಬೇಕು. ತಲೆಗೆ ಎಣ್ಣೆ ಲೇಪಿಸಿದ ನಂತರ ಮೂರು ಗಂಟೆಗಿಂತ ಹೆಚ್ಚುಕಾಲ ಬಿಡಬಾರದು.<br /> ಕೂದಲುದುರುತ್ತಿದ್ದರೆ ಹಣ್ಣಾಗಿರುವ ಬಾಳೆಹಣ್ಣಿಗೆ ನಿಂಬೆರಸ ಸೇರಿಸಿ, ಹೇರ್ ಪ್ಯಾಕ್ ಮಾಡಿಕೊಳ್ಳಬೇಕು. 15 ನಿಮಿಷಗಳ ನಂತರ ಸೂಕ್ತ ಶಾಂಪೂವಿನಿಂದ ತಲೆ ತೊಳೆಯಿರಿ.<br /> <br /> ತಲೆಹೊಟ್ಟಿಗೆ ಬಾಚಣಿಕೆಯಿಂದ ಕೂದಲು ಬೇರ್ಪಡಿಸುತ್ತ ತಲೆ ಬುರುಡೆಗೆ ಮೊಸರು ಹಾಗೂ ನಿಂಬೆ ರಸ ಲೇಪಿಸಬೇಕು. 10 ನಿಮಿಷಗಳ ನಂತರ ತೊಳೆಯಿರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾರತೀಯ ಮಹಿಳೆಯರಲ್ಲಿ ಕೂದಲುದರಲು ಮುಖ್ಯ ಕಾರಣವೆಂದರೆ ಹೈಪೊ ಥೈರಾಡಿಸಂ ಹಾಗೂ ಅಪೌಷ್ಟಿಕತನ ಎಂದು ಹೇಳಬಹುದು. ಈ ಎರಡೂ ಅಂಶಗಳಿಗೆ ಚಿಕಿತ್ಸೆ ಮತ್ತು ಆರೈಕೆ ಇದ್ದಲ್ಲಿ ಕೂದಲುದುರುವುದನ್ನು ತಡೆಯಬಹುದು.</p>.<p><strong>ಇತರ ಕಾರಣಗಳೆಂದರೆ...</strong><br /> <strong>ಬೋಳುತನ</strong>: ತಲೆಯಲ್ಲಿ ಅಲ್ಲಲ್ಲೇ ಕೂದಲು ಉದುರುತ್ತ ಹೋಗುವುದು. ಮೊದಲು ಈ ಪ್ರದೇಶ ಪ್ಯಾಚ್ಗಳಂತೆ ಕಂಡರೂ ಆರು ತಿಂಗಳ ಅವಧಿಯಲ್ಲಿ ಬೋಳುತನ ಎದ್ದು ಕಾಣುತ್ತದೆ.<br /> <br /> <strong>ಫಂಗಲ್ ಸೋಂಕು</strong>: ಮಕ್ಕಳಲ್ಲಿ ಈ ಸೋಂಕು ಕಂಡು ಬರುತ್ತದೆ. ಸೋಂಕಿತ ಪ್ರದೇಶವು ಕೆಂಪಾಗಿದ್ದು, ಕೆರೆತದಿಂದ ಕೂಡಿರುತ್ತದೆ. ಆ ಪ್ರದೇಶದ ಕೂದಲು ಉದುರಿ ಹೋಗುತ್ತವೆ. ಆದರೆ ಸೋಂಕು ವಿರೋಧಿ ಚಿಕಿತ್ಸೆ ನೀಡಿದ ನಂತರ ಖಂಡಿತವಾಗಿಯೂ ಆ ಪ್ರದೇಶದಲ್ಲಿ ಮತ್ತೆ ಕೂದಲು ಹುಟ್ಟುತ್ತವೆ ಹಾಗೂ ಬೆಳೆಯುತ್ತವೆ. <br /> <br /> <strong>ಗರ್ಭಾವಸ್ಥೆ:</strong> ಗರ್ಭಾವಸ್ಥೆಯಲ್ಲಿ ಕೂದಲು ಅತಿ ಹೊಳಪಿನಿಂದ ಹಾಗೂ ದಟ್ಟವಾಗಿ ಕಾಣುತ್ತವೆ. ಮಹಿಳೆಯ ಹಾರ್ಮೋನುಗಳಲ್ಲಿ ಆಗುವ ಏರುಪೇರಿನಿಂದಾಗಿ ಹೀಗೆ ಕಾಣಿಸುತ್ತದೆ. ಆದರೆ ಹೆರಿಗೆಯ ನಂತರ ಮತ್ತೆ ಕೂದಲುದುರುತ್ತವೆ. ಇದಕ್ಕೂ ಹಾರ್ಮೋನುಗಳ ಸ್ಥಿತಿಯೇ ಕಾರಣ. 2–3 ವರ್ಷಗಳ ಅವಧಿಯಲ್ಲಿ ಕೂದಲು ಮತ್ತೆ ಮಾಮೂಲಿ ಸ್ಥಿತಿಗೆ ಮರಳುತ್ತದೆ. <br /> <br /> <strong>ಗರ್ಭ ನಿರೋಧಕ ಮಾತ್ರೆಗಳ ಸೇವನೆ: </strong>ನಿರಂತರವಾಗಿ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಕೂದಲು ಬೆಳೆಯುವುದು ಕ್ಷೀಣಗೊಳ್ಳುತ್ತದೆ. ಕ್ರಮೇಣ ಉದುರುವ ಸಾಧ್ಯತೆಯೂ ಇರುತ್ತದೆ.<br /> <br /> <strong>ಕಟ್ಟುನಿಟ್ಟಿನ ಡಯಟ್</strong>: ತೂಕ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಡಯಟ್ ಕೈಗೊಂಡಿದ್ದರೆ, ಪ್ರೋಟಿನ್ನ ಕೊರತೆಯುಂಟಾದಲ್ಲಿ ಕೂದಲು ಉದುರಬಹುದು. ಡಯಟ್ ಸಂದರ್ಭದಲ್ಲಿ ಸಪ್ಲಿಮೆಂಟ್ ಸೇವಿಸುವುದು ಉತ್ತಮ.<br /> <br /> <strong>ಬಿಗಿಯಾದ ಕೇಶ ಶೈಲಿ: </strong>ಕೂದಲನ್ನು ಬಿಗಿಯಾಗಿ ಹೆಣೆಯುವುದು ಕೂದಲಿನ ಬುಡವನ್ನು ಶಿಥಿಲಗೊಳಿಸುತ್ತದೆ. ಆದಷ್ಟು ಸರಳ ಮತ್ತು ಸಡಿಲವಾದ ಕೇಶ ವಿನ್ಯಾಸ ಮಾಡಿಕೊಳ್ಳುವುದು ಕೂದಲಿನ ಆರೋಗ್ಯಕ್ಕೆ ಉತ್ತಮ.<br /> <br /> ಕೇಶ ವಿನ್ಯಾಸಕ್ಕೆ ಹೇರ್ಸ್ಟ್ರೇಟ್ನಿಂಗ್, ಗುಂಗುರು ಮಾಡಿಸಿಕೊಳ್ಳುವುದು, ಮೃದುಗೊಳಿಸುವ ಕೆಮಿಕಲ್ ಆಧಾರಿತ ಚಿಕಿತ್ಸೆಗಳಿಗೆ ಒಳಗಾಗುವುದರ ಪರಿಣಾಮವಾಗಿಯೂ ಕೂದಲುದುರುವ ಸಮಸ್ಯೆಯನ್ನು ಎದುರಿಸಬಹುದು. ಕ್ಯಾನ್ಸರ್ ಚಿಕಿತ್ಸೆಗೆ ಒಳಪಡುತ್ತಿದ್ದಲ್ಲಿ, ರೇಡಿಯೇಷನ್, ಔಷಧಿ ಅಥವಾ ಕೀಮೊಥೆರಪಿಗೆ ಒಳಪಟ್ಟಿದ್ದಲ್ಲಿ ಕೂದಲುದುರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.<br /> <br /> <strong>ಅತಿಯಾದ ಒತ್ತಡ: </strong>ಅತಿಯಾದ ಒತ್ತಡವೂ ಕೂದಲುದುರಲು ಕಾರಣವಾಗುತ್ತದೆ. ಅದು ದೈಹಿಕವಾಗಿರಬಹುದು. ಮಾನಸಿಕ ಒತ್ತಡವಾಗಿರಬಹುದು.<br /> <br /> <strong>ಚಿಕಿತ್ಸೆ:</strong> ಪೌಷ್ಟಿಕಾಂಶಗಳ ಮರು ಪೂರೈಕೆ ಚಿಕಿತ್ಸೆಯ ಒಂದು ಅಂಶವಾಗಬಹುದು. ಹಾರ್ಮೋನುಗಳಿಗಾಗಿಯೂ ಚಿಕಿತ್ಸೆ ಪಡೆಯಬಹುದು. ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವುದರಿಂದ ಕೂದಲಿನ ಬುಡಕ್ಕೆ ರಕ್ತ ಸರಬರಾಜು ಸರಾಗವಾಗಿ, ಕೂದಲು ಶಕ್ತವಾಗಿ. ನಿರಂತರ ಬೆಳವಣಿಗೆ ಕಾಣಬಹುದು.<br /> <br /> ಕೂದಲಿನ ಸಾಂದ್ರತೆ ಕ್ಷೀಣಿಸಿದ್ದಲ್ಲಿ, ನಿಮ್ಮ ಮುಖದ ಆಕಾರಕ್ಕೆ ಹೊಂದುವ ಕೇಶ ವಿನ್ಯಾಶ ಮಾಡಿಸಿಕೊಳ್ಳಬಹುದು. ಬೋಳುತನ ಮರೆಮಾಚಲು ವಿಗ್ ಮೊರೆ ಹೋಗಬಹುದು. ಅಥವಾ ಕೂದಲು ಕಸಿ ಸಹ ಮಾಡಿಸಿಕೊಳ್ಳಬಹುದು. ಪರಿಹಾರವು ಸಮಸ್ಯೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಪ್ರತಿ ಪರಿಹಾರಕ್ಕೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಅತ್ಯಗತ್ಯ.<br /> <br /> <strong>ಮನೆ ಚಿಕಿತ್ಸೆ</strong>: ಕೂದಲಿನ ಬುಡಕ್ಕೆ ಉಗುರು ಬಿಸಿ ಎಣ್ಣೆಯಿಂದ ವಾರಕ್ಕೆ ಒಮ್ಮೆ ಮಸಾಜ್ ಮಾಡಿ, ತಲೆ ಸ್ನಾನ ಮಾಡಬೇಕು. ಕನಿಷ್ಠ ಮೂರು ತಿಂಗಳವರೆಗಾದರೂ ಈ ಆರೈಕೆ ಮಾಡಬೇಕು. ತಲೆಗೆ ಎಣ್ಣೆ ಲೇಪಿಸಿದ ನಂತರ ಮೂರು ಗಂಟೆಗಿಂತ ಹೆಚ್ಚುಕಾಲ ಬಿಡಬಾರದು.<br /> ಕೂದಲುದುರುತ್ತಿದ್ದರೆ ಹಣ್ಣಾಗಿರುವ ಬಾಳೆಹಣ್ಣಿಗೆ ನಿಂಬೆರಸ ಸೇರಿಸಿ, ಹೇರ್ ಪ್ಯಾಕ್ ಮಾಡಿಕೊಳ್ಳಬೇಕು. 15 ನಿಮಿಷಗಳ ನಂತರ ಸೂಕ್ತ ಶಾಂಪೂವಿನಿಂದ ತಲೆ ತೊಳೆಯಿರಿ.<br /> <br /> ತಲೆಹೊಟ್ಟಿಗೆ ಬಾಚಣಿಕೆಯಿಂದ ಕೂದಲು ಬೇರ್ಪಡಿಸುತ್ತ ತಲೆ ಬುರುಡೆಗೆ ಮೊಸರು ಹಾಗೂ ನಿಂಬೆ ರಸ ಲೇಪಿಸಬೇಕು. 10 ನಿಮಿಷಗಳ ನಂತರ ತೊಳೆಯಿರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>