ಸೋಮವಾರ ನಡೆದ ಮಾತುಕತೆಯ ಸಂದರ್ಭದಲ್ಲಿ ಟಿಎಲ್ಪಿ ನಾಯಕರು ಫ್ರಾನ್ಸ್ ರಾಯಭಾರಿಯನ್ನು ಹೊರಹಾಕುವುದು, ಟಿಎಲ್ಪಿ ಮುಖ್ಯಸ್ಥ ಸಾದ್ ರಾಜ್ವಿಯನ್ನು ಬಿಡುಗಡೆ ಮಾಡುವುದು, ಟಿಎಲ್ಪಿ ಮೇಲಿನ ನಿಷೇಧ ಹಿಂತೆಗೆದುಕೊಳ್ಳುವುದು ಹಾಗೂ ಸಂಘಟನೆಯ ಎಲ್ಲಾ ಕಾರ್ಯಕರ್ತರನ್ನು ಬಿಡುಗಡೆ ಮಾಡಿ, ಅವರ ವಿರುದ್ಧದ ಎಫ್ಐಆರ್ ರದ್ದುಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಒಂದೇ ವೇಳೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮಂಗಳವಾರ ಪ್ರತಿಭಟನೆ ಕರೆ ನೀಡುವುದಾಗಿಯೂ ಟಿಎಲ್ಪಿ ಬೆದರಿಕೆಯೊಡ್ಡಿದೆ.