<p><strong>ವಾಷಿಂಗ್ಟನ್: </strong>ಕೋವಿಡ್-19 ಭೀಕರ ಪರಿಸ್ಥಿತಿ ಎದುರಿಸುತ್ತಿರುವ ಭಾರತಕ್ಕೆ ತುರ್ತಾಗಿ ಹೆಚ್ಚುವರಿ ನಿಧಿ ಬಿಡುಗಡೆಗೆ ಅಮೆರಿಕದ ಕಾಂಗ್ರೆಸ್ನ ಭಾರತ-ಅಮೆರಿಕನ್ ಮಹಿಳಾ ಸದಸ್ಯೆ ಪ್ರಮೀಳಾ ಜಯಪಾಲ್ ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.</p>.<p>‘ಭಾರತಕ್ಕೆ ನಮ್ಮ ನೆರವಿನ ಅಗತ್ಯವಿದೆ. ಕೋವಿಡ್ ಸವಾಲನ್ನು ಎದುರಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ಇದು ಜಾಗತಿಕ ಸಾಂಕ್ರಾಮಿಕ ಮತ್ತು ನಾವು ಎಲ್ಲೆಡೆ ವೈರಸ್ ಅನ್ನು ತಡೆಗಟ್ಟುವವರೆಗೂ ನಾವು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಜಯಪಾಲ್ ಹೇಳಿದ್ದಾರೆ.</p>.<p>ಕೋವಿಡ್ ಉಲ್ಬಣಕ್ಕೂ ಮೊದಲು ತಮ್ಮ ಕುಟುಂಬ ಭೇಟಿಗಾಗಿ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಜಯಪಾಲ್, ಸಂಗ್ರಹಿಸಿದ ಎಲ್ಲ ಹಣವು ಮೂರು ಪ್ರಮುಖ ಉಪಕ್ರಮಗಳಿಗೆ ಬಳಕೆಯಾಗಲಿದೆ ಎಂದು ಹೇಳಿದ್ದರು.</p>.<p>ಮೊದಲನೆಯದು ವಿಷ್ ಫೌಂಡೇಶನ್. ಇದು ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು 24 ಗಂಟೆ ಕೆಲಸ ಮಾಡುತ್ತಿದೆ. ಎರಡನೆಯದು ಗಿವ್ಇಂಡಿಯಾ, ಇದು ಪ್ರೀತಿಪಾತ್ರರನ್ನು ಕಳೆದುಕೊಂಡು ಬಡತನದಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಬೆಂಬಲಿಸುತ್ತದೆ. ಮನೆ ಆಧಾರ ಕಳೆದುಕೊಂಡವರಿಗೆ ನೇರ ನಗದು ₹ 30,000 ಪಾವತಿ ಮಾಡುತ್ತದೆ.</p>.<p>ಮೂರನೆಯದು ಎಡೆಲ್ಗೈವ್ ಫೌಂಡೇಶನ್, ಇದು ಗೂಂಜ್ ಮತ್ತು ಜನ್ ಸಾಹಸ್ ಸಂಸ್ಥೆಗಳ ಸಹಯೋಗದೊಂದಿಗೆ ವಲಸಿಗರು ಮತ್ತು ದುರ್ಬಲ ಜನರಿಗೆ ಆರ್ಥಿಕ ಬೆಂಬಲ, ಆಹಾರ ಮತ್ತು ಆರೋಗ್ಯ ಸರಬರಾಜುಗಳನ್ನು ಒದಗಿಸಲು ಕೆಲಸ ಮಾಡುತ್ತದೆ ಎಂದು ಭಾರತೀಯ-ಅಮೇರಿಕನ್ ಕಾಂಗ್ರೆಸ್ ಮಹಿಳೆ ಪ್ರಮಿಳಾ ಜಯಪಾಲ್ ಹೇಳಿದ್ದರು.</p>.<p>ತಮ್ಮ ಇತ್ತೀಚಿನ ಭಾರತದ ಭೇಟಿ ಬಗ್ಗೆ ಮಾತನಾಡುತ್ತಾ, ‘ಅಲ್ಲಿ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗತೊಡಗಿದ್ದವು. 80 ಮತ್ತು 90 ವರ್ಷ ವಯಸ್ಸಿನ ನನ್ನ ಹೆತ್ತವರಿಗೆ ಲಸಿಕೆಯ ಮೊದಲ ಡೋಸ್ ಪಡೆದ ಕೆಲವೇ ವಾರಗಳಲ್ಲಿ ಕೋವಿಡ್ ಪಾಸಿಟಿವ್ ಬಂದಿತ್ತು’ ಎಂದು ಹೇಳಿದರು.<br /><br />‘ಅವರಿಬ್ಬರೂ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡಿದ್ದಾರೆ. ಆದರೆ, ಅವರಿಗೆ ಲಸಿಕೆ ನೀಡದೇ ಇದ್ದಿದ್ದರೆ ಏನಾಗುತ್ತಿತ್ತೋ ಏನೋ ಎಂಬುದನ್ನು ಊಹಿಸಿಕೊಂಡರೆ ಎದೆ ನಡುಗತ್ತದೆ’ಎಂದು ಅವರು ಹೇಳಿದ್ದಾರೆ. .</p>.<p>ಭಾರತದ ಪರಿಸ್ಥಿತಿ ಭೀಕರವಾಗಿದೆ ಎಂದು ವಿವರಿಸಿದ ಜಯಪಾಲ್, ಪ್ರತಿದಿನ ಅಲ್ಲಿ ನೂರಾರು ಸಾವಿರ ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಡುತ್ತಿವೆ ಎಂದು ತಿಳಿಸಿದ್ದಾರೆ.</p>.<p>‘ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ. ಆಮ್ಲಜನಕ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ವೈದ್ಯರ ಭೇಟಿಗೆ ಮೊದಲೇ ಸಾಯುತ್ತಿದ್ದಾರೆ’ ಜಯಪಾಲ್ ಕಳವಳ ವ್ಯಕ್ತಪಡಿಸಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್: </strong>ಕೋವಿಡ್-19 ಭೀಕರ ಪರಿಸ್ಥಿತಿ ಎದುರಿಸುತ್ತಿರುವ ಭಾರತಕ್ಕೆ ತುರ್ತಾಗಿ ಹೆಚ್ಚುವರಿ ನಿಧಿ ಬಿಡುಗಡೆಗೆ ಅಮೆರಿಕದ ಕಾಂಗ್ರೆಸ್ನ ಭಾರತ-ಅಮೆರಿಕನ್ ಮಹಿಳಾ ಸದಸ್ಯೆ ಪ್ರಮೀಳಾ ಜಯಪಾಲ್ ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.</p>.<p>‘ಭಾರತಕ್ಕೆ ನಮ್ಮ ನೆರವಿನ ಅಗತ್ಯವಿದೆ. ಕೋವಿಡ್ ಸವಾಲನ್ನು ಎದುರಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ಇದು ಜಾಗತಿಕ ಸಾಂಕ್ರಾಮಿಕ ಮತ್ತು ನಾವು ಎಲ್ಲೆಡೆ ವೈರಸ್ ಅನ್ನು ತಡೆಗಟ್ಟುವವರೆಗೂ ನಾವು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಜಯಪಾಲ್ ಹೇಳಿದ್ದಾರೆ.</p>.<p>ಕೋವಿಡ್ ಉಲ್ಬಣಕ್ಕೂ ಮೊದಲು ತಮ್ಮ ಕುಟುಂಬ ಭೇಟಿಗಾಗಿ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಜಯಪಾಲ್, ಸಂಗ್ರಹಿಸಿದ ಎಲ್ಲ ಹಣವು ಮೂರು ಪ್ರಮುಖ ಉಪಕ್ರಮಗಳಿಗೆ ಬಳಕೆಯಾಗಲಿದೆ ಎಂದು ಹೇಳಿದ್ದರು.</p>.<p>ಮೊದಲನೆಯದು ವಿಷ್ ಫೌಂಡೇಶನ್. ಇದು ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು 24 ಗಂಟೆ ಕೆಲಸ ಮಾಡುತ್ತಿದೆ. ಎರಡನೆಯದು ಗಿವ್ಇಂಡಿಯಾ, ಇದು ಪ್ರೀತಿಪಾತ್ರರನ್ನು ಕಳೆದುಕೊಂಡು ಬಡತನದಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಬೆಂಬಲಿಸುತ್ತದೆ. ಮನೆ ಆಧಾರ ಕಳೆದುಕೊಂಡವರಿಗೆ ನೇರ ನಗದು ₹ 30,000 ಪಾವತಿ ಮಾಡುತ್ತದೆ.</p>.<p>ಮೂರನೆಯದು ಎಡೆಲ್ಗೈವ್ ಫೌಂಡೇಶನ್, ಇದು ಗೂಂಜ್ ಮತ್ತು ಜನ್ ಸಾಹಸ್ ಸಂಸ್ಥೆಗಳ ಸಹಯೋಗದೊಂದಿಗೆ ವಲಸಿಗರು ಮತ್ತು ದುರ್ಬಲ ಜನರಿಗೆ ಆರ್ಥಿಕ ಬೆಂಬಲ, ಆಹಾರ ಮತ್ತು ಆರೋಗ್ಯ ಸರಬರಾಜುಗಳನ್ನು ಒದಗಿಸಲು ಕೆಲಸ ಮಾಡುತ್ತದೆ ಎಂದು ಭಾರತೀಯ-ಅಮೇರಿಕನ್ ಕಾಂಗ್ರೆಸ್ ಮಹಿಳೆ ಪ್ರಮಿಳಾ ಜಯಪಾಲ್ ಹೇಳಿದ್ದರು.</p>.<p>ತಮ್ಮ ಇತ್ತೀಚಿನ ಭಾರತದ ಭೇಟಿ ಬಗ್ಗೆ ಮಾತನಾಡುತ್ತಾ, ‘ಅಲ್ಲಿ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗತೊಡಗಿದ್ದವು. 80 ಮತ್ತು 90 ವರ್ಷ ವಯಸ್ಸಿನ ನನ್ನ ಹೆತ್ತವರಿಗೆ ಲಸಿಕೆಯ ಮೊದಲ ಡೋಸ್ ಪಡೆದ ಕೆಲವೇ ವಾರಗಳಲ್ಲಿ ಕೋವಿಡ್ ಪಾಸಿಟಿವ್ ಬಂದಿತ್ತು’ ಎಂದು ಹೇಳಿದರು.<br /><br />‘ಅವರಿಬ್ಬರೂ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡಿದ್ದಾರೆ. ಆದರೆ, ಅವರಿಗೆ ಲಸಿಕೆ ನೀಡದೇ ಇದ್ದಿದ್ದರೆ ಏನಾಗುತ್ತಿತ್ತೋ ಏನೋ ಎಂಬುದನ್ನು ಊಹಿಸಿಕೊಂಡರೆ ಎದೆ ನಡುಗತ್ತದೆ’ಎಂದು ಅವರು ಹೇಳಿದ್ದಾರೆ. .</p>.<p>ಭಾರತದ ಪರಿಸ್ಥಿತಿ ಭೀಕರವಾಗಿದೆ ಎಂದು ವಿವರಿಸಿದ ಜಯಪಾಲ್, ಪ್ರತಿದಿನ ಅಲ್ಲಿ ನೂರಾರು ಸಾವಿರ ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಡುತ್ತಿವೆ ಎಂದು ತಿಳಿಸಿದ್ದಾರೆ.</p>.<p>‘ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ. ಆಮ್ಲಜನಕ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ವೈದ್ಯರ ಭೇಟಿಗೆ ಮೊದಲೇ ಸಾಯುತ್ತಿದ್ದಾರೆ’ ಜಯಪಾಲ್ ಕಳವಳ ವ್ಯಕ್ತಪಡಿಸಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>