ಈ ಕುರಿತು ಪತ್ರ ಬರೆದಿರುವ ಅವರು, ‘ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿದೆ. ಮೇ 4 ರಂದು ಒಂದೇ ದಿನದಲ್ಲಿ 4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಅಂದು 3,786 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದರು. ಇಲ್ಲಿವರೆಗೆ 2,26,188 ಮಂದಿ ಸೋಂಕಿನಿಂದಲೇ ಸತ್ತಿದ್ದಾರೆ. ಸೋಂಕು ಹೆಚ್ಚಾದಂತೆ ಆ ದೇಶದಲ್ಲಿ ಆರೋಗ್ಯ ವ್ಯವಸ್ಥೆ ಶಿಥಿಲಗೊಂಡಿದೆ. ಆಸ್ಪತ್ರೆಗಳು ಭರ್ತಿಯಾಗಿವೆ. ಹಾಸಿಗೆ ಕೊರತೆ ಎದುರಾಗಿದೆ. ಆಮ್ಲಜನಕದ ಪೂರೈಕೆಯ ಮೇಲೂ ಪರಿಣಾಮಬೀರಿದೆ. ಹೀಗಾಗಿ ಭಾರತಕ್ಕೆ ಆಮ್ಲಜನಕ, ಚಿಕಿತ್ಸಾ ಉಪಕರಣಗಳು ಮತ್ತು ಲಸಿಕೆಗಳ ಅಗತ್ಯವಿದೆ‘ ಎಂದು ವಿವರಿಸಿದ್ದಾರೆ.