ಎರಡು ದಿನಗಳ ಜಪಾನ್ ಪ್ರವಾಸದ ಮೊದಲ ದಿನ ಟೋಕಿಯೊದಲ್ಲಿ ಭಾರತೀಯ ಸಮುದಾಯವನ್ನುಉದ್ದೇಶಿಸಿ ಮಾತನಾಡಿದ ಅವರು, ‘ಭಗವಾನ್ ಬುದ್ಧ ತೋರಿದ ಹಾದಿಯಲ್ಲಿ ಇಂದಿನ ಜಗತ್ತು ಸಾಗಬೇಕಾದ ಅಗತ್ಯವಿದೆ. ಭಯೋತ್ಪಾದನೆ, ಅರಾಜಕತೆ, ಹಿಂಸಾಚಾರ, ಪ್ರಾಕೃತಿಕ ಬದಲಾವಣೆ ಮುಂತಾದ ಜಗತ್ತು ಎದುರಿಸುತ್ತಿರುವ ಸವಾಲುಗಳ ನಡುವೆ ಮಾನವೀಯತೆಯನ್ನು ಕಾಪಾಡಲು ಇರುವ ಮಾರ್ಗ ಇದಾಗಿದೆ’ಎಂದು ಹೇಳಿದರು.