<p class="title"><strong>ಕಾಬೂಲ್</strong>: ಅಫ್ಗಾನಿಸ್ತಾನದ ಕೆಲ ಪ್ರಾಂತ್ಯಗಳಲ್ಲಿ ಸ್ಥಗಿತಗೊಂಡಿರುವ ಕನಿಷ್ಠ 20 ಯೋಜನೆಗಳನ್ನು ಭಾರತವು ಮತ್ತೆ ವಹಿಸಿಕೊಂಡು ಪೂರ್ಣಗೊಳಿಸಲಿದೆ ಎಂದು ತಾಲಿಬಾನ್ ಆಡಳಿತ ವಿಶ್ವಾಸ ವ್ಯಕ್ತಪಡಿಸಿದೆ.</p>.<p class="title">2021ರ ಆಗಸ್ಟ್ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಭದ್ರತೆಯ ಕಾರಣಕ್ಕೆ ಭಾರತ ತನ್ನ ಅಧಿಕಾರಿಗಳನ್ನು ರಾಯಭಾರಿ ಕಚೇರಿಯಿಂದ ಹಿಂದಕ್ಕೆ ಕರೆಸಿಕೊಂಡಿತ್ತು. ಆದರೆ ಈಗ ಜೂನ್ನಲ್ಲಿ ಕಾಬೂಲ್ನಲ್ಲಿರುವ ರಾಯಭಾರ ಕಚೇರಿಯಲ್ಲಿ ತಾಂತ್ರಿಕ ತಂಡವನ್ನು ನಿಯೋಜಿಸುವ ಮೂಲಕ ಭಾರತ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಮರುಸ್ಥಾಪಿಸಿದೆ.</p>.<p class="title">ಭಾರತೀಯ ಪ್ರಭಾರ ಅಧಿಕಾರಿ ಭರತ್ ಕುಮಾರ್ ಅವರು ಅಫ್ಗಾನಿಸ್ತಾನದ ನಗರಾಭಿವೃದ್ಧಿ ಮತ್ತು ವಸತಿ ಸಚಿವಾಲಯ (ಎಂಯುಡಿಎಚ್) ಜೊತೆಸಂಬಂಧಗಳ ಸುಧಾರಣೆ ಮತ್ತು ದೇಶದಲ್ಲಿ ಸ್ಥಗಿತಗೊಂಡ ಯೋಜನೆಗಳ ಪುನರಾರಂಭದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದು,ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಮ್ದುಲ್ಲಾ ನೊಮಾನಿ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದ್ದಾರೆ ಎಂದುಟೋಲೋ ನ್ಯೂಸ್ ಸುದ್ದಿಸಂಸ್ಥೆ ಹೇಳಿದೆ.</p>.<p class="title">ಹಿಂದಿನ ಸರ್ಕಾರದ ಅವಧಿಯಲ್ಲಿ ಭಾರತ ಅನುಷ್ಠಾನಗೊಳಿಸುತ್ತಿದ್ದ ಯೋಜನೆಗಳು ರಾಜಕೀಯ ಬದಲಾವಣೆ ಅಥವಾ ಇತರ ಸಮಸ್ಯೆಗಳಿಂದ ವಿಳಂಬವಾಗಿದ್ದವು. ಈಗ ಈ ಯೋಜನೆಗಳನ್ನು ಪುನರಾರಂಭಿಸಲು ಭಾರತ ಆಸಕ್ತಿ ಹೊಂದಿದೆ ಎಂದು ಎಂಯುಡಿಎಚ್ನ ವಕ್ತಾರ ಮೊಹಮ್ಮದ್ ಕಮಲ್ ಆಫ್ಘನ್ ಹೇಳಿದ್ದಾರೆ ಎಂದು ಟೋಲೋ ನ್ಯೂಸ್ ಉಲ್ಲೇಖಿಸಿದೆ.</p>.<p>ಭಾರತವು ಆಫ್ಗನ್ ಜನರಿಗೆ ಮಾನವೀಯ ನೆರವನ್ನು ವಿಸ್ತರಿಸಿದ್ದು, ಈಗಾಗಲೇ 20,000 ಟನ್ ಗೋಧಿ, 13 ಟನ್ ಔಷಧಿಗಳು, 5 ಲಕ್ಷ ಕೋವಿಡ್ ಲಸಿಕೆ ಮತ್ತು ಚಳಿಗಾಲದ ಉಡುಪುಗಳನ್ನು ಕಾಬೂಲ್ನಲ್ಲಿರುವ ಭಾರತ ಗಾಂಧಿ ಮಕ್ಕಳ ಆಸ್ಪತ್ರೆ, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಆಹಾರ ಕಾರ್ಯಕ್ರಮ ಸೇರಿದಂತೆ ವಿಶ್ವಸಂಸ್ಥೆಯ ಏಜೆನ್ಸಿಗಳಿಗೆ ಹಸ್ತಾಂತರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಕಾಬೂಲ್</strong>: ಅಫ್ಗಾನಿಸ್ತಾನದ ಕೆಲ ಪ್ರಾಂತ್ಯಗಳಲ್ಲಿ ಸ್ಥಗಿತಗೊಂಡಿರುವ ಕನಿಷ್ಠ 20 ಯೋಜನೆಗಳನ್ನು ಭಾರತವು ಮತ್ತೆ ವಹಿಸಿಕೊಂಡು ಪೂರ್ಣಗೊಳಿಸಲಿದೆ ಎಂದು ತಾಲಿಬಾನ್ ಆಡಳಿತ ವಿಶ್ವಾಸ ವ್ಯಕ್ತಪಡಿಸಿದೆ.</p>.<p class="title">2021ರ ಆಗಸ್ಟ್ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಭದ್ರತೆಯ ಕಾರಣಕ್ಕೆ ಭಾರತ ತನ್ನ ಅಧಿಕಾರಿಗಳನ್ನು ರಾಯಭಾರಿ ಕಚೇರಿಯಿಂದ ಹಿಂದಕ್ಕೆ ಕರೆಸಿಕೊಂಡಿತ್ತು. ಆದರೆ ಈಗ ಜೂನ್ನಲ್ಲಿ ಕಾಬೂಲ್ನಲ್ಲಿರುವ ರಾಯಭಾರ ಕಚೇರಿಯಲ್ಲಿ ತಾಂತ್ರಿಕ ತಂಡವನ್ನು ನಿಯೋಜಿಸುವ ಮೂಲಕ ಭಾರತ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಮರುಸ್ಥಾಪಿಸಿದೆ.</p>.<p class="title">ಭಾರತೀಯ ಪ್ರಭಾರ ಅಧಿಕಾರಿ ಭರತ್ ಕುಮಾರ್ ಅವರು ಅಫ್ಗಾನಿಸ್ತಾನದ ನಗರಾಭಿವೃದ್ಧಿ ಮತ್ತು ವಸತಿ ಸಚಿವಾಲಯ (ಎಂಯುಡಿಎಚ್) ಜೊತೆಸಂಬಂಧಗಳ ಸುಧಾರಣೆ ಮತ್ತು ದೇಶದಲ್ಲಿ ಸ್ಥಗಿತಗೊಂಡ ಯೋಜನೆಗಳ ಪುನರಾರಂಭದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದು,ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಮ್ದುಲ್ಲಾ ನೊಮಾನಿ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದ್ದಾರೆ ಎಂದುಟೋಲೋ ನ್ಯೂಸ್ ಸುದ್ದಿಸಂಸ್ಥೆ ಹೇಳಿದೆ.</p>.<p class="title">ಹಿಂದಿನ ಸರ್ಕಾರದ ಅವಧಿಯಲ್ಲಿ ಭಾರತ ಅನುಷ್ಠಾನಗೊಳಿಸುತ್ತಿದ್ದ ಯೋಜನೆಗಳು ರಾಜಕೀಯ ಬದಲಾವಣೆ ಅಥವಾ ಇತರ ಸಮಸ್ಯೆಗಳಿಂದ ವಿಳಂಬವಾಗಿದ್ದವು. ಈಗ ಈ ಯೋಜನೆಗಳನ್ನು ಪುನರಾರಂಭಿಸಲು ಭಾರತ ಆಸಕ್ತಿ ಹೊಂದಿದೆ ಎಂದು ಎಂಯುಡಿಎಚ್ನ ವಕ್ತಾರ ಮೊಹಮ್ಮದ್ ಕಮಲ್ ಆಫ್ಘನ್ ಹೇಳಿದ್ದಾರೆ ಎಂದು ಟೋಲೋ ನ್ಯೂಸ್ ಉಲ್ಲೇಖಿಸಿದೆ.</p>.<p>ಭಾರತವು ಆಫ್ಗನ್ ಜನರಿಗೆ ಮಾನವೀಯ ನೆರವನ್ನು ವಿಸ್ತರಿಸಿದ್ದು, ಈಗಾಗಲೇ 20,000 ಟನ್ ಗೋಧಿ, 13 ಟನ್ ಔಷಧಿಗಳು, 5 ಲಕ್ಷ ಕೋವಿಡ್ ಲಸಿಕೆ ಮತ್ತು ಚಳಿಗಾಲದ ಉಡುಪುಗಳನ್ನು ಕಾಬೂಲ್ನಲ್ಲಿರುವ ಭಾರತ ಗಾಂಧಿ ಮಕ್ಕಳ ಆಸ್ಪತ್ರೆ, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಆಹಾರ ಕಾರ್ಯಕ್ರಮ ಸೇರಿದಂತೆ ವಿಶ್ವಸಂಸ್ಥೆಯ ಏಜೆನ್ಸಿಗಳಿಗೆ ಹಸ್ತಾಂತರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>