<p><strong>ಟೆಹರಾನ್: </strong>ದೇಶದ ಪರಮಾಣು ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ನಡೆದಿದ್ದ ವಿಧ್ವಂಸಕ ದಾಳಿ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಇರಾನ್ನ ಭದ್ರತಾ ಪಡೆಗಳಿಗೆ ನಿಕಟವಾಗಿರುವ ಸುದ್ದಿಸಂಸ್ಥೆ‘ನೌರ್ನ್ಯೂಸ್’ ವರದಿ ಮಾಡಿದೆ.</p>.<p>‘ನೌರ್ನ್ಯೂಸ್’ ಎಂಬ ವೆಬ್ ಪೋರ್ಟಲ್ ಇರಾನ್ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ಗೆ ಸಂಬಂಧಿಸಿದ ವಿದ್ಯಮಾನಗಳ ಕುರಿತು ವರದಿ ಮಾಡುತ್ತದೆ.</p>.<p>‘ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಕಟ್ಟಡಗಳಿಗೆ ಹಾನಿ ಸಂಭವಿಸುವ ಮೊದಲೇ ವಿಧ್ವಂಸಕ ದಾಳಿ ಯತ್ನವನ್ನು ವಿಫಲಗೊಳಿಸಲಾಯಿತು. ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ’ ಎಂದು ವರದಿ ಮಾಡಿದೆ.</p>.<p>ಮತ್ತೊಂದು ಸುದ್ದಿಸಂಸ್ಥೆ ಐಎಸ್ಎನ್ಎ ಸಹ ಈ ಘಟನೆ ಕುರಿತು ವರದಿ ಮಾಡಿದೆ. ‘ರಾಜಧಾನಿ ಟೆಹರಾನ್ನಿಂದ 40 ಕಿ.ಮೀ. ದೂರದಲ್ಲಿರುವ ಕರಾಜ್ ನಗರದಲ್ಲಿರುವ ಕಟ್ಟಡವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು’ ಎಂದು ಹೇಳಿದೆ.</p>.<p>ಸರ್ಕಾರಿ ಒಡೆತನದ ‘ಐಆರ್ಎಎನ್’ ಪತ್ರಿಕೆ ಸಹ ಈ ಕುರಿತು ವರದಿ ಮಾಡಿದೆ. ಅಧಿಕಾರಿಗಳು ಮಾತ್ರ ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟೆಹರಾನ್: </strong>ದೇಶದ ಪರಮಾಣು ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ನಡೆದಿದ್ದ ವಿಧ್ವಂಸಕ ದಾಳಿ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಇರಾನ್ನ ಭದ್ರತಾ ಪಡೆಗಳಿಗೆ ನಿಕಟವಾಗಿರುವ ಸುದ್ದಿಸಂಸ್ಥೆ‘ನೌರ್ನ್ಯೂಸ್’ ವರದಿ ಮಾಡಿದೆ.</p>.<p>‘ನೌರ್ನ್ಯೂಸ್’ ಎಂಬ ವೆಬ್ ಪೋರ್ಟಲ್ ಇರಾನ್ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ಗೆ ಸಂಬಂಧಿಸಿದ ವಿದ್ಯಮಾನಗಳ ಕುರಿತು ವರದಿ ಮಾಡುತ್ತದೆ.</p>.<p>‘ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಕಟ್ಟಡಗಳಿಗೆ ಹಾನಿ ಸಂಭವಿಸುವ ಮೊದಲೇ ವಿಧ್ವಂಸಕ ದಾಳಿ ಯತ್ನವನ್ನು ವಿಫಲಗೊಳಿಸಲಾಯಿತು. ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ’ ಎಂದು ವರದಿ ಮಾಡಿದೆ.</p>.<p>ಮತ್ತೊಂದು ಸುದ್ದಿಸಂಸ್ಥೆ ಐಎಸ್ಎನ್ಎ ಸಹ ಈ ಘಟನೆ ಕುರಿತು ವರದಿ ಮಾಡಿದೆ. ‘ರಾಜಧಾನಿ ಟೆಹರಾನ್ನಿಂದ 40 ಕಿ.ಮೀ. ದೂರದಲ್ಲಿರುವ ಕರಾಜ್ ನಗರದಲ್ಲಿರುವ ಕಟ್ಟಡವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು’ ಎಂದು ಹೇಳಿದೆ.</p>.<p>ಸರ್ಕಾರಿ ಒಡೆತನದ ‘ಐಆರ್ಎಎನ್’ ಪತ್ರಿಕೆ ಸಹ ಈ ಕುರಿತು ವರದಿ ಮಾಡಿದೆ. ಅಧಿಕಾರಿಗಳು ಮಾತ್ರ ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>