ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೈತ್‌: ಸಚಿವರ ರಾಜೀನಾಮೆಯಿಂದ ರಾಜಕೀಯ ಬಿಕ್ಕಟ್ಟು

Last Updated 13 ಜನವರಿ 2021, 6:17 IST
ಅಕ್ಷರ ಗಾತ್ರ

ದುಬೈ: ಕುವೈತ್‌ನ ಸಂಪುಟದ ಸಚಿವರು ಮಂಗಳವಾರ ರಾಜೀನಾಮೆ ನೀಡುವುದರೊಂದಿಗೆ ಕೊಲ್ಲಿ ರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.

ತೈಲ ನಿಕ್ಷೇಪಗಳ ಕಾರಣ ಶ್ರೀಮಂತ ಕೊಲ್ಲಿ ರಾಷ್ಟ್ರವೆನಿಸಿರುವ ಕುವೈತ್‌ನಲ್ಲಿ ಆರ್ಥಿಕ ಬಿಕ್ಕಟ್ಟಿಗೂ ಈ ಬೆಳವಣಿಗೆ ಕಾರಣವಾಗಿದೆ.

ಕೊಲ್ಲಿ ರಾಷ್ಟ್ರವನ್ನು ಆಳುತ್ತಿರುವ ರಾಜಮನೆತನ ಹಾಗೂ ಸಂಸತ್‌ ನಡುವಿನ ಮುಸುಕಿನ ಗುದ್ದಾಟ ಈ ಬೆಳವಣಿಗೆಯೊಂದಿಗೆ ಹೊಸ ಮಜಲು ತಲುಪಿದಂತಾಗಿದೆ.

ಪ್ರಧಾನ ಮಂತ್ರಿ ಇತ್ತೀಚೆಗೆ ಮಾಡಿರುವ ಕೆಲವು ನೇಮಕಗಳು ಸಚಿವರ ಆಕ್ರೋಶಕ್ಕೆ ಕಾರಣವಾಗಿವೆ. ಅದರಲ್ಲೂ, ಗಣ್ಯ ವರ್ತಕ ಕುಟುಂಬಕ್ಕೆ ಸೇರಿದ ಹಾಗೂ ಮಾಜಿ ಸ್ಪೀಕರ್‌ವೊಬ್ಬರನ್ನು ಪುನಃ ಸಂಸತ್‌ಗೆ ನಾಮಕರಣ ಮಾಡಿದ್ದು ಉಳಿದವರನ್ನು ಕೆರಳಿಸಿದೆ. ಈ ನೇಮಕದಿಂದ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಲಿದೆ ಎಂಬ ಆತಂಕವನ್ನು ಸಂಪುಟ ತೊರೆದ ಸಚಿವರು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT