<p><strong>ಯಾಂಗೂನ್</strong>: ಹೊಸ ವರ್ಷಾಚರಣೆಯ ರಜಾದಿನದ ಅಂಗವಾಗಿ 23ಸಾವಿರಕ್ಕೂ ಹೆಚ್ಚು ಕೈದಿಗಳಿಗೆ ಕ್ಷಮಾದಾನ ನೀಡಿ, ಬಿಡುಗಡೆಗೊಳಿಸಲುಮ್ಯಾನ್ಮಾರ್ ಸೇನಾಡಳಿತ ನಿರ್ಧರಿಸಿದೆ.</p>.<p>ಆದರೆ, ಈ ವೇಳೆ ಸೇನಾ ಆಡಳಿತ ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಬಂಧಿಸಲಾಗಿರುವ ಪ್ರಜಾಪ್ರಭುತ್ವ ಪರ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಗುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.</p>.<p>‘ಸೇನಾ ನಾಯಕ, ಹಿರಿಯ ಜನರಲ್ ಮಿನ್ ಆಂಗ್ ಲೈಂಗ್ ಅವರು 137 ವಿದೇಶಿಯರು ಸೇರಿದಂತೆ 23,047 ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಬಿಡುಗಡೆಯಾಗಲಿರುವ ವಿದೇಶಿ ಕೈದಿಗಳನ್ನು ಮ್ಯಾನ್ಮಾರ್ನಿಂದ ಗಡಿಪಾರು ಮಾಡಲಾಗುವುದು. ಅಲ್ಲದೆ ಮಿನ್ ಆಂಗ್ ಲೈಂಗ್ ಅವರು ಇತರೆ ಕೈದಿಗಳಿಗೆ ಶಿಕ್ಷೆಯ ಅವಧಿಯನ್ನು ಕೂಡ ಕಡಿಮೆಗೊಳಿಸಿದ್ದಾರೆ’ ಎಂದು ಸರ್ಕಾರಿ ಸ್ವಾಮ್ಯದ ಎಂಆರ್ಟಿವಿಯಲ್ಲಿ ಹೇಳಿಕೆ ಪ್ರಕಟಿಸಲಾಗಿದೆ.</p>.<p>ಈ ಹಿಂದೆಯೂ ಸೇನೆಯು ಹಲವು ಪ್ರಮುಖ ರಜಾದಿನಗಳ ಸಂದರ್ಭಗಳಲ್ಲಿ ಕೈದಿಗಳಿಗೆ ಕ್ಷಮಾದಾನ ನೀಡಿತ್ತು. ಆದರೆ ಇದು ನಾಯಕಿ ಆಂಗ್ ಸಾನ್ ಸೂಕಿಪದಚ್ಯುತಗೊಳಿಸಿದ ಬಳಿಕ ನಡೆದ ಎರಡನೇ ಕ್ಷಮಾದಾನವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾಂಗೂನ್</strong>: ಹೊಸ ವರ್ಷಾಚರಣೆಯ ರಜಾದಿನದ ಅಂಗವಾಗಿ 23ಸಾವಿರಕ್ಕೂ ಹೆಚ್ಚು ಕೈದಿಗಳಿಗೆ ಕ್ಷಮಾದಾನ ನೀಡಿ, ಬಿಡುಗಡೆಗೊಳಿಸಲುಮ್ಯಾನ್ಮಾರ್ ಸೇನಾಡಳಿತ ನಿರ್ಧರಿಸಿದೆ.</p>.<p>ಆದರೆ, ಈ ವೇಳೆ ಸೇನಾ ಆಡಳಿತ ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಬಂಧಿಸಲಾಗಿರುವ ಪ್ರಜಾಪ್ರಭುತ್ವ ಪರ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಗುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.</p>.<p>‘ಸೇನಾ ನಾಯಕ, ಹಿರಿಯ ಜನರಲ್ ಮಿನ್ ಆಂಗ್ ಲೈಂಗ್ ಅವರು 137 ವಿದೇಶಿಯರು ಸೇರಿದಂತೆ 23,047 ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಬಿಡುಗಡೆಯಾಗಲಿರುವ ವಿದೇಶಿ ಕೈದಿಗಳನ್ನು ಮ್ಯಾನ್ಮಾರ್ನಿಂದ ಗಡಿಪಾರು ಮಾಡಲಾಗುವುದು. ಅಲ್ಲದೆ ಮಿನ್ ಆಂಗ್ ಲೈಂಗ್ ಅವರು ಇತರೆ ಕೈದಿಗಳಿಗೆ ಶಿಕ್ಷೆಯ ಅವಧಿಯನ್ನು ಕೂಡ ಕಡಿಮೆಗೊಳಿಸಿದ್ದಾರೆ’ ಎಂದು ಸರ್ಕಾರಿ ಸ್ವಾಮ್ಯದ ಎಂಆರ್ಟಿವಿಯಲ್ಲಿ ಹೇಳಿಕೆ ಪ್ರಕಟಿಸಲಾಗಿದೆ.</p>.<p>ಈ ಹಿಂದೆಯೂ ಸೇನೆಯು ಹಲವು ಪ್ರಮುಖ ರಜಾದಿನಗಳ ಸಂದರ್ಭಗಳಲ್ಲಿ ಕೈದಿಗಳಿಗೆ ಕ್ಷಮಾದಾನ ನೀಡಿತ್ತು. ಆದರೆ ಇದು ನಾಯಕಿ ಆಂಗ್ ಸಾನ್ ಸೂಕಿಪದಚ್ಯುತಗೊಳಿಸಿದ ಬಳಿಕ ನಡೆದ ಎರಡನೇ ಕ್ಷಮಾದಾನವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>