ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ನಲ್ಲಿ ಮಾನವೀಯ ಪರಿಸ್ಥಿತಿಗಳ ಕುರಿತು ನಡೆದ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ರವೀಂದ್ರ, ‘ವಿಶ್ವಸಂಸ್ಥೆಯ ಒಳಗೆ ಹಾಗೂ ಹೊರಗೆ ರಚನಾತ್ಮವಾಗಿ ಕೆಲಸ ಮಾಡುವುದು ನಮ್ಮ ಸಾಮೂಹಿಕ ಹಿತಾಸಕ್ತಿಯಾಗಿದ್ದು, ಶೀಘ್ರವಾಗಿ ಆಹಾರ ಹಾಗೂ ಇಂಧನ ಕೊರತೆ ಸಮಸ್ಯೆಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವ ಕಡೆ ಗಮನ ಹರಿಸಬೇಕಿದೆ’ ಎಂದು ತಿಳಿಸಿದರು.