<p><strong>ಕ್ರೈಸ್ಟ್ಚರ್ಚ್(ನ್ಯೂಜಿಲೆಂಡ್):</strong> ಇಲ್ಲಿನ ಎರಡು ಮಸೀದಿಗಳ ಮೇಲೆ ದಾಳಿ ನಡೆಸಿ 51 ಮಂದಿ ಸಾವಿಗೆ ಕಾರಣನಾಗಿದ್ದ ಬ್ರೆಂಟನ್ ಹ್ಯಾರಿಸನ್ ಟ್ಯಾರಂಟ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.</p>.<p>ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ಸೇರಿದ್ದ ಜನಸಮೂಹದ ಮೇಲೆ ಈತ ದಾಳಿ ನಡೆಸಿದ್ದ.</p>.<p>ಈ ಸಂಬಂಧ ವಿಚಾರಣೆ ನಡೆಸಿದನ್ಯಾಯಾಧೀಶ ಕ್ಯಾಮರೂನ್ ಮಾಂಡರ್ ಅವರುಆಸ್ಟ್ರೇಲಿಯಾ ಮೂಲದಅಪರಾಧಿ 29 ವರ್ಷದ ಬ್ರೆಂಟನ್ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ನಲ್ಲಿ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ.</p>.<p>‘ಬ್ರೆಂಟನ್ ಅಪರಾಧ ಕ್ರೂರವಾಗಿದೆ. ಆತನ ಅಪರಾಧಕ್ಕೆ ಜೀವಾವಧಿ ಶಿಕ್ಷೆಯೂ ಕಡಿಮೆ. ಒಂದು ಮಾರಕ ಸಿದ್ಧಾಂತಕ್ಕಾಗಿ ಆತ ಹಲವರಿಗೆ ಹಾನಿ ಉಂಟು ಮಾಡಿದ್ದಾನೆ. ಆತ ಅಮಾನವೀಯ ಕೃತ್ಯ ಎಸಗಿದ್ದಾನೆ. ಆ ದಾಳಿಯಲ್ಲಿ ಮೂರು ವರ್ಷದ ಮಗುವು ಕೂಡ ಮೃತಪಟ್ಟಿದೆ’ ಎಂದು ನ್ಯಾಯಾಧೀಶಕ್ಯಾಮರೂನ್ ಮಾಂಡರ್ ತಿಳಿಸಿದರು.</p>.<p>2019ರ ಮಾರ್ಚ್ ತಿಂಗಳಲ್ಲಿ ಅಲ್ ನೂರ್ ಮತ್ತು ಲಿನ್ವುಂಡ್ ಮಸೀದಿಯಲ್ಲಿಶುಕ್ರವಾರದ ಪ್ರಾರ್ಥನೆಗೆಂದು ಜನ ಸೇರಿದ್ದರು. ಈ ವೇಳೆ ಬ್ರೆಂಟನ್ ಗುಂಡಿನ ದಾಳಿ ನಡೆಸಿದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕ್ರೈಸ್ಟ್ಚರ್ಚ್(ನ್ಯೂಜಿಲೆಂಡ್):</strong> ಇಲ್ಲಿನ ಎರಡು ಮಸೀದಿಗಳ ಮೇಲೆ ದಾಳಿ ನಡೆಸಿ 51 ಮಂದಿ ಸಾವಿಗೆ ಕಾರಣನಾಗಿದ್ದ ಬ್ರೆಂಟನ್ ಹ್ಯಾರಿಸನ್ ಟ್ಯಾರಂಟ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.</p>.<p>ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ಸೇರಿದ್ದ ಜನಸಮೂಹದ ಮೇಲೆ ಈತ ದಾಳಿ ನಡೆಸಿದ್ದ.</p>.<p>ಈ ಸಂಬಂಧ ವಿಚಾರಣೆ ನಡೆಸಿದನ್ಯಾಯಾಧೀಶ ಕ್ಯಾಮರೂನ್ ಮಾಂಡರ್ ಅವರುಆಸ್ಟ್ರೇಲಿಯಾ ಮೂಲದಅಪರಾಧಿ 29 ವರ್ಷದ ಬ್ರೆಂಟನ್ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ನಲ್ಲಿ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ.</p>.<p>‘ಬ್ರೆಂಟನ್ ಅಪರಾಧ ಕ್ರೂರವಾಗಿದೆ. ಆತನ ಅಪರಾಧಕ್ಕೆ ಜೀವಾವಧಿ ಶಿಕ್ಷೆಯೂ ಕಡಿಮೆ. ಒಂದು ಮಾರಕ ಸಿದ್ಧಾಂತಕ್ಕಾಗಿ ಆತ ಹಲವರಿಗೆ ಹಾನಿ ಉಂಟು ಮಾಡಿದ್ದಾನೆ. ಆತ ಅಮಾನವೀಯ ಕೃತ್ಯ ಎಸಗಿದ್ದಾನೆ. ಆ ದಾಳಿಯಲ್ಲಿ ಮೂರು ವರ್ಷದ ಮಗುವು ಕೂಡ ಮೃತಪಟ್ಟಿದೆ’ ಎಂದು ನ್ಯಾಯಾಧೀಶಕ್ಯಾಮರೂನ್ ಮಾಂಡರ್ ತಿಳಿಸಿದರು.</p>.<p>2019ರ ಮಾರ್ಚ್ ತಿಂಗಳಲ್ಲಿ ಅಲ್ ನೂರ್ ಮತ್ತು ಲಿನ್ವುಂಡ್ ಮಸೀದಿಯಲ್ಲಿಶುಕ್ರವಾರದ ಪ್ರಾರ್ಥನೆಗೆಂದು ಜನ ಸೇರಿದ್ದರು. ಈ ವೇಳೆ ಬ್ರೆಂಟನ್ ಗುಂಡಿನ ದಾಳಿ ನಡೆಸಿದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>