<p class="title"><strong>ಲಂಡನ್</strong>: ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳನ್ನು ಬಲವಂತವಾಗಿ ಮತಾಂತರಿಸಿ, ವಿವಾಹ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಧರ್ಮಗುರುಮೈನ್ ಅಬ್ದುಲ್ ಹಾಕ್ ಸೇರಿದಂತೆ30 ಜನರು ಮತ್ತು ಸಂಸ್ಥೆಗಳ ಮೇಲೆ ಬ್ರಿಟನ್ ಸರ್ಕಾರ ನಿರ್ಬಂಧ ವಿಧಿಸಿದೆ.</p>.<p class="title">ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರು ಶುಕ್ರವಾರ ನಿರ್ಬಂಧಿತರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬಲವಂತದ ಮತಾಂತರ, ಕೈದಿಗಳಿಗೆ ಚಿತ್ರಹಿಂಸೆ, ವ್ಯವಸ್ಥಿತ ದೌರ್ಜನ್ಯ ಸೇರಿದಂತೆ ಅನೇಕ ಕುಕೃತ್ಯ ಎಸಗಿದ ಜನರು ಮತ್ತು ಸಂಸ್ಥೆಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ.</p>.<p>ಈ ಪಟ್ಟಿಯಲ್ಲಿರುವವರು ಪ್ರವಾಸ ತೆರಳಲು, ಉದ್ಯಮ ಆರಂಭಿಸಲು ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳಲು ನಿರ್ಬಂಧ ವಿಧಿಸಲಾಗುತ್ತದೆ. ಈ ಪಟ್ಟಿಯಲ್ಲಿ ರಷ್ಯಾ, ಮ್ಯಾನ್ಮಾರ್ ಮತ್ತು ಇರಾನ್ ಪ್ರಜೆಗಳೂ ಇದ್ದಾರೆ.</p>.<p>ಮುಕ್ತ ಮತ್ತು ಸ್ವತಂತ್ರ ಸಮಾಜವನ್ನು ಉತ್ತೇಜಿಸುವುದು ನಮ್ಮ ಕರ್ತವ್ಯ ಎಂದು ಕ್ಲೆವರ್ಲಿ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಲಂಡನ್</strong>: ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳನ್ನು ಬಲವಂತವಾಗಿ ಮತಾಂತರಿಸಿ, ವಿವಾಹ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಧರ್ಮಗುರುಮೈನ್ ಅಬ್ದುಲ್ ಹಾಕ್ ಸೇರಿದಂತೆ30 ಜನರು ಮತ್ತು ಸಂಸ್ಥೆಗಳ ಮೇಲೆ ಬ್ರಿಟನ್ ಸರ್ಕಾರ ನಿರ್ಬಂಧ ವಿಧಿಸಿದೆ.</p>.<p class="title">ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರು ಶುಕ್ರವಾರ ನಿರ್ಬಂಧಿತರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬಲವಂತದ ಮತಾಂತರ, ಕೈದಿಗಳಿಗೆ ಚಿತ್ರಹಿಂಸೆ, ವ್ಯವಸ್ಥಿತ ದೌರ್ಜನ್ಯ ಸೇರಿದಂತೆ ಅನೇಕ ಕುಕೃತ್ಯ ಎಸಗಿದ ಜನರು ಮತ್ತು ಸಂಸ್ಥೆಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ.</p>.<p>ಈ ಪಟ್ಟಿಯಲ್ಲಿರುವವರು ಪ್ರವಾಸ ತೆರಳಲು, ಉದ್ಯಮ ಆರಂಭಿಸಲು ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳಲು ನಿರ್ಬಂಧ ವಿಧಿಸಲಾಗುತ್ತದೆ. ಈ ಪಟ್ಟಿಯಲ್ಲಿ ರಷ್ಯಾ, ಮ್ಯಾನ್ಮಾರ್ ಮತ್ತು ಇರಾನ್ ಪ್ರಜೆಗಳೂ ಇದ್ದಾರೆ.</p>.<p>ಮುಕ್ತ ಮತ್ತು ಸ್ವತಂತ್ರ ಸಮಾಜವನ್ನು ಉತ್ತೇಜಿಸುವುದು ನಮ್ಮ ಕರ್ತವ್ಯ ಎಂದು ಕ್ಲೆವರ್ಲಿ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>