<p><strong>ಇಸ್ಲಾಮಾಬಾದ್:</strong> ‘ಅಫ್ಗಾನಿಸ್ತಾನದಲ್ಲಿ ಅಂತರ್ಯುದ್ಧ ನಡೆದರೆ, ಅದರಿಂದ ಉಂಟಾಗುವ ಪರಿಣಾಮವನ್ನು ಎದುರಿಸಲು ಪಾಕಿಸ್ತಾನ ಸಿದ್ಧವಿದೆ’ ಎಂದು ಪಾಕಿಸ್ತಾನ ಸೇನೆಯ ವಕ್ತಾರರು ಶನಿವಾರ ತಿಳಿಸಿದರು.</p>.<p>‘ಅಫ್ಗಾನ್ನ ಶೇಕಡ 85 ರಷ್ಟು ಭೂಪ್ರದೇಶ ತನ್ನ ಹಿಡಿತದಲ್ಲಿದೆ’ ಎಂದು ತಾಲಿಬಾನ್ ಹೇಳಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸೇನಾ ಮೇಜರ್ ಜನರಲ್ ವಕ್ತಾರಬಾಬರ್ ಇಫ್ತಿಕಾರ್ ಸ್ಥಳೀಯ ಮಾಧ್ಯಮಕ್ಕೆ ಈ ಹೇಳಿಕೆ ನೀಡಿದ್ಧಾರೆ.</p>.<p>‘ಪಾಕಿಸ್ತಾನವು ಅಫ್ಗಾನ್ನಲ್ಲಿ ಶಾಂತಿ ಸ್ಥಾಪಿಸಲು ನೆರವಾಗಬಹುದೇ ಹೊರತು ಶಾಂತಿ ಸ್ಥಾಪನೆ ಬಗ್ಗೆ ಖಾತರಿದಾರನಾಗಿರಲು ಸಾಧ್ಯವಿಲ್ಲ. ನಾವು ಅಫ್ಗಾನ್ನ ಯಾವುದೇ ಬಣದ ಪರವಾಗಿಲ್ಲ. ಅಫ್ಗಾನ್ ತನ್ನ ನಾಯಕತ್ವವನ್ನು ಆರಿಸಬೇಕು’ ಎಂದು ಬಾಬರ್ ಇಫ್ತಿಕಾರ್ ಅಭಿಪ್ರಾಯಪಟ್ಟರು.</p>.<p>‘ಅಫ್ಗಾನ್ನೊಂದಿಗಿನ ಗಡಿಯಲ್ಲಿ ಬಿಗಿ ಭದ್ರತೆ ಇದೆ. ಅಫ್ಗಾನಿಸ್ತಾನದೊಂದಿಗಿನ 2,611 ಕಿ.ಮೀ ಉದ್ದದ ಗಡಿಯಲ್ಲಿ ಬೇಲಿ ಹಾಕುವ ಪ್ರಕ್ರಿಯೆ ಶೇಕಡ 90ರಷ್ಟು ಪೂರ್ಣಗೊಂಡಿದೆ. ಪಾಕಿಸ್ತಾನವು ಅಂತರ್ಯುದ್ಧದ ಪರಿಣಾಮವನ್ನು ಎದುರಿಸಲು ಸಿದ್ಧವಾಗಿದೆ. ಪ್ರಸ್ತುತ ಗಡಿ ಭದ್ರತಾ ಕಾರ್ಯವಿಧಾನವು ಮೊದಲಿಗಿಂತ ಉತ್ತಮವಾಗಿದೆ’ ಎಂದು ಅವರು ತಿಳಿಸಿದರು.</p>.<p>‘ಅಫ್ಗಾನಿಸ್ತಾನದಿಂದ ನಿರಾಶ್ರಿತರು ಪಾಕಿಸ್ತಾನಕ್ಕೆ ಆಗಮಿಸುವ ಸಾಧ್ಯತೆಗಳಿವೆ. ಈ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಆಂತರಿಕ ಸಚಿವಾಲಯವು ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ’ ಎಂದು ಅವರು ಹೇಳಿದ್ದಾರೆ.</p>.<p>ಅಫ್ಗಾನಿಸ್ತಾನದಲ್ಲಿ ಭಾರತದ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು,‘ ಪಾಕಿಸ್ತಾನದ ಹಿತಾಸಕ್ತಿಗಳಿಗೆ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಭಾರತವು ಅಫ್ಗಾನ್ನಲ್ಲಿ ಹೂಡಿಕೆ ಮಾಡುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್:</strong> ‘ಅಫ್ಗಾನಿಸ್ತಾನದಲ್ಲಿ ಅಂತರ್ಯುದ್ಧ ನಡೆದರೆ, ಅದರಿಂದ ಉಂಟಾಗುವ ಪರಿಣಾಮವನ್ನು ಎದುರಿಸಲು ಪಾಕಿಸ್ತಾನ ಸಿದ್ಧವಿದೆ’ ಎಂದು ಪಾಕಿಸ್ತಾನ ಸೇನೆಯ ವಕ್ತಾರರು ಶನಿವಾರ ತಿಳಿಸಿದರು.</p>.<p>‘ಅಫ್ಗಾನ್ನ ಶೇಕಡ 85 ರಷ್ಟು ಭೂಪ್ರದೇಶ ತನ್ನ ಹಿಡಿತದಲ್ಲಿದೆ’ ಎಂದು ತಾಲಿಬಾನ್ ಹೇಳಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸೇನಾ ಮೇಜರ್ ಜನರಲ್ ವಕ್ತಾರಬಾಬರ್ ಇಫ್ತಿಕಾರ್ ಸ್ಥಳೀಯ ಮಾಧ್ಯಮಕ್ಕೆ ಈ ಹೇಳಿಕೆ ನೀಡಿದ್ಧಾರೆ.</p>.<p>‘ಪಾಕಿಸ್ತಾನವು ಅಫ್ಗಾನ್ನಲ್ಲಿ ಶಾಂತಿ ಸ್ಥಾಪಿಸಲು ನೆರವಾಗಬಹುದೇ ಹೊರತು ಶಾಂತಿ ಸ್ಥಾಪನೆ ಬಗ್ಗೆ ಖಾತರಿದಾರನಾಗಿರಲು ಸಾಧ್ಯವಿಲ್ಲ. ನಾವು ಅಫ್ಗಾನ್ನ ಯಾವುದೇ ಬಣದ ಪರವಾಗಿಲ್ಲ. ಅಫ್ಗಾನ್ ತನ್ನ ನಾಯಕತ್ವವನ್ನು ಆರಿಸಬೇಕು’ ಎಂದು ಬಾಬರ್ ಇಫ್ತಿಕಾರ್ ಅಭಿಪ್ರಾಯಪಟ್ಟರು.</p>.<p>‘ಅಫ್ಗಾನ್ನೊಂದಿಗಿನ ಗಡಿಯಲ್ಲಿ ಬಿಗಿ ಭದ್ರತೆ ಇದೆ. ಅಫ್ಗಾನಿಸ್ತಾನದೊಂದಿಗಿನ 2,611 ಕಿ.ಮೀ ಉದ್ದದ ಗಡಿಯಲ್ಲಿ ಬೇಲಿ ಹಾಕುವ ಪ್ರಕ್ರಿಯೆ ಶೇಕಡ 90ರಷ್ಟು ಪೂರ್ಣಗೊಂಡಿದೆ. ಪಾಕಿಸ್ತಾನವು ಅಂತರ್ಯುದ್ಧದ ಪರಿಣಾಮವನ್ನು ಎದುರಿಸಲು ಸಿದ್ಧವಾಗಿದೆ. ಪ್ರಸ್ತುತ ಗಡಿ ಭದ್ರತಾ ಕಾರ್ಯವಿಧಾನವು ಮೊದಲಿಗಿಂತ ಉತ್ತಮವಾಗಿದೆ’ ಎಂದು ಅವರು ತಿಳಿಸಿದರು.</p>.<p>‘ಅಫ್ಗಾನಿಸ್ತಾನದಿಂದ ನಿರಾಶ್ರಿತರು ಪಾಕಿಸ್ತಾನಕ್ಕೆ ಆಗಮಿಸುವ ಸಾಧ್ಯತೆಗಳಿವೆ. ಈ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಆಂತರಿಕ ಸಚಿವಾಲಯವು ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ’ ಎಂದು ಅವರು ಹೇಳಿದ್ದಾರೆ.</p>.<p>ಅಫ್ಗಾನಿಸ್ತಾನದಲ್ಲಿ ಭಾರತದ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು,‘ ಪಾಕಿಸ್ತಾನದ ಹಿತಾಸಕ್ತಿಗಳಿಗೆ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಭಾರತವು ಅಫ್ಗಾನ್ನಲ್ಲಿ ಹೂಡಿಕೆ ಮಾಡುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>