<p><strong>ವಾಷಿಂಗ್ಟನ್: </strong>ಯೆಮನ್ನ ಕೆಲವು ಭಾಗಗಳಲ್ಲಿ ಐ.ಎಸ್ ಮತ್ತು ಅಲ್ಕೈದಾದಂತಹ ಭಯೋತ್ಪಾದನಾ ಸಂಘಟನೆಗಳ ಅಸ್ತಿತ್ವವನ್ನು ಅಳಿಸಿಹಾಕಬೇಕಿದೆ ಮತ್ತು ನಾಗರಿಕರ ಮೇಲೆ ಉಗ್ರರು ನಡೆಸುತ್ತಿರುವ ಸತತ ದಾಳಿಯನ್ನು ನಿಲ್ಲಿಸಬೇಕಿದೆ ಎಂದು ಭಾರತ ಸರ್ಕಾರ ಹೇಳಿದೆ.</p>.<p>ಉಗ್ರರನ್ನು ಜಾಗತಿಕವಾಗಿ ಮಟ್ಟ ಹಾಕಲು ಅಂತರರಾಷ್ಟ್ರೀಯ ಸಮುದಾಯ ಒಗ್ಗೂಡಬೇಕು ಎಂದು ವಿಶ್ವಸಂಸ್ಥೆಗೆ ಭಾರತದ ಕಾಯಂ ಉಪ ಪ್ರತಿನಿಧಿಯಾಗಿರುವ ಕೆ. ನಾಗರಾಜ್ ನಾಯ್ಡು ಹೇಳಿದ್ದಾರೆ.</p>.<p>ಯೆಮನ್ ಸಮಸ್ಯೆಯನ್ನು ರಾಜಕೀಯ ಪ್ರಕ್ರಿಯೆ ಮೂಲಕ ಮಾತ್ರ ಪರಿಹರಿಸಬಹುದು ಎಂದು ಅವರು ಸಭೆಯೊಂದರಲ್ಲಿ ತಿಳಿಸಿದ್ದಾರೆ.</p>.<p>ಯೆಮನ್ ರಾಜಧಾನಿ ಸನಾ ನಗರವನ್ನು ಬಂಡುಕೋರರು ವಶಕ್ಕೆ ಪಡೆದ ಕೆಲ ತಿಂಗಳುಗಳ ಬಳಿಕ 2015ರ ಮಾರ್ಚ್ನಿಂದ ಹೌತಿ ಉಗ್ರರ ವಿರುದ್ಧ ಸೌದಿ ಅರೇಬಿಯಾ ನೇತೃತ್ವದ ಮೈತ್ರಿಕೂಟ ಹೋರಾಡುತ್ತಿದೆ.</p>.<p>‘ಮಾನವ ಹಕ್ಕುಗಳನ್ನು ಉಗ್ರರು ಉಲ್ಲಂಘಿಸುತ್ತಾರೆ. ಇವರ ವಿರುದ್ಧ ಜಾಗತಿಕವಾಗಿ ಒಗ್ಗೂಡಬೇಕಿದೆ ಮತ್ತು ಉಗ್ರರ ಸಂಘಟನೆಗಳನ್ನು ಬೆಂಬಲಿಸುವವರನ್ನು ಮತ್ತು ಪೋಷಿಸುವವರನ್ನು ಹೊಣೆಗಾರರನ್ನಾಗಿಸಬೇಕಿದೆ‘ ಎಂದು ನಾಯ್ಡು ಅವರು ಅಭಿಪ್ರಾಯ ಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್: </strong>ಯೆಮನ್ನ ಕೆಲವು ಭಾಗಗಳಲ್ಲಿ ಐ.ಎಸ್ ಮತ್ತು ಅಲ್ಕೈದಾದಂತಹ ಭಯೋತ್ಪಾದನಾ ಸಂಘಟನೆಗಳ ಅಸ್ತಿತ್ವವನ್ನು ಅಳಿಸಿಹಾಕಬೇಕಿದೆ ಮತ್ತು ನಾಗರಿಕರ ಮೇಲೆ ಉಗ್ರರು ನಡೆಸುತ್ತಿರುವ ಸತತ ದಾಳಿಯನ್ನು ನಿಲ್ಲಿಸಬೇಕಿದೆ ಎಂದು ಭಾರತ ಸರ್ಕಾರ ಹೇಳಿದೆ.</p>.<p>ಉಗ್ರರನ್ನು ಜಾಗತಿಕವಾಗಿ ಮಟ್ಟ ಹಾಕಲು ಅಂತರರಾಷ್ಟ್ರೀಯ ಸಮುದಾಯ ಒಗ್ಗೂಡಬೇಕು ಎಂದು ವಿಶ್ವಸಂಸ್ಥೆಗೆ ಭಾರತದ ಕಾಯಂ ಉಪ ಪ್ರತಿನಿಧಿಯಾಗಿರುವ ಕೆ. ನಾಗರಾಜ್ ನಾಯ್ಡು ಹೇಳಿದ್ದಾರೆ.</p>.<p>ಯೆಮನ್ ಸಮಸ್ಯೆಯನ್ನು ರಾಜಕೀಯ ಪ್ರಕ್ರಿಯೆ ಮೂಲಕ ಮಾತ್ರ ಪರಿಹರಿಸಬಹುದು ಎಂದು ಅವರು ಸಭೆಯೊಂದರಲ್ಲಿ ತಿಳಿಸಿದ್ದಾರೆ.</p>.<p>ಯೆಮನ್ ರಾಜಧಾನಿ ಸನಾ ನಗರವನ್ನು ಬಂಡುಕೋರರು ವಶಕ್ಕೆ ಪಡೆದ ಕೆಲ ತಿಂಗಳುಗಳ ಬಳಿಕ 2015ರ ಮಾರ್ಚ್ನಿಂದ ಹೌತಿ ಉಗ್ರರ ವಿರುದ್ಧ ಸೌದಿ ಅರೇಬಿಯಾ ನೇತೃತ್ವದ ಮೈತ್ರಿಕೂಟ ಹೋರಾಡುತ್ತಿದೆ.</p>.<p>‘ಮಾನವ ಹಕ್ಕುಗಳನ್ನು ಉಗ್ರರು ಉಲ್ಲಂಘಿಸುತ್ತಾರೆ. ಇವರ ವಿರುದ್ಧ ಜಾಗತಿಕವಾಗಿ ಒಗ್ಗೂಡಬೇಕಿದೆ ಮತ್ತು ಉಗ್ರರ ಸಂಘಟನೆಗಳನ್ನು ಬೆಂಬಲಿಸುವವರನ್ನು ಮತ್ತು ಪೋಷಿಸುವವರನ್ನು ಹೊಣೆಗಾರರನ್ನಾಗಿಸಬೇಕಿದೆ‘ ಎಂದು ನಾಯ್ಡು ಅವರು ಅಭಿಪ್ರಾಯ ಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>