ಜೆರುಸಲೇಂ (ಎಪಿ): ಇಸ್ರೇಲ್ನ ಎನ್ಎಸ್ಒಕಂಪನಿಯ ಪೆಗಾಸಸ್ ಕುತಾಂತ್ರಂಶ ಬಳಸಿ ಭಾರತ, ಅಮೆರಿಕ ದೇಶದಲ್ಲಿ ಮಾನವ ಹಕ್ಕು ಹೋರಾಟಗಾರರು, ಪತ್ರಕರ್ತರು ಮತ್ತು ರಾಜಕಾರಣಿಗಳ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಇರುವಾಗಲೇ, ಇಂತಹದ್ದೇ ಕುತಾಂತ್ರಂಶ ಬಳಸಿ ಅದೇ ದೇಶದ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪುತ್ರ ಮತ್ತು ಸಲಹೆಗಾರರ ಮೇಲೆ ಬೇಹುಗಾರಿಕೆ ನಡೆಸಿರುವ ಬಗ್ಗೆ ವರದಿಯಾಗಿದೆ.