ಹಾರ್ಕಿವ್ನಲ್ಲಿ ಮೃತಪಟ್ಟ ಕರ್ನಾಟಕದ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ವಿಚಾರವನ್ನು ಪ್ರಸ್ತಾಪಿಸಿದ ತಿರುಮೂರ್ತಿ, 'ಪ್ರಸ್ತುತ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತದ ವಿದ್ಯಾರ್ಥಿ ಹಾರ್ಕಿವ್ನಲ್ಲಿ ಮೃತ ಪಟ್ಟಿರುವುದು ದುರುಂತ. ನವೀನ್ ಅವರ ಸಾವಿಗೆ ತೀವ್ರ ಸಂತಾಪಗಳನ್ನು ಸೂಚಿಸುತ್ತಿದ್ದೇವೆ. ಹಾರ್ಕಿವ್ ಮತ್ತು ಉಕ್ರೇನ್ನಇತರ ಪ್ರದೇಶಗಳಲ್ಲಿ ಸಿಲುಕಿರುವ ಭಾರತದ ಎಲ್ಲ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಮತ್ತು ತಡೆರಹಿತವಾಗಿ ತಾಯ್ನಾಡಿ ವಾಪಸ್ ಆಗುವುದನ್ನು ಬಯಸುತ್ತೇವೆ' ಎಂದು ತಿಳಿಸಿದರು.