<p><strong>ಕೊಲಂಬೊ</strong>: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ದೇಶವನ್ನು ಮುನ್ನಡೆಸಬೇಕಾದ ಪ್ರಧಾನಿ ಮತ್ತು ಅಧ್ಯಕ್ಷರೇ ಭಯದಲ್ಲಿ ತತ್ತರಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದ ದೇಶವನ್ನು ಕಾಪಾಡುವಲ್ಲಿ ವಿಫಲವಾದ ಸರ್ಕಾರದ ವಿರುದ್ಧ ದಂಗೆ ಎದ್ದಿರುವ ನಾಗರಿಕರು ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕುರ್ಚಿಯನ್ನು ಮಿಲಿಟರಿ ಕಾವಲು ಕಾಯುತ್ತಿದೆ.</p>.<p>ಈಗಾಗಲೇ, ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಅಧಿಕೃತ ಅರಮನೆಯನ್ನು ವಶಪಡಿಸಿಕೊಂಡಿರುವ ಪ್ರತಿಭಟನಾಕಾರರು, ರಾಜೀನಾಮೆ ಕೊಡದ ಹೊರತು ಹೊರಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.</p>.<p>ಈ ಮಧ್ಯೆ, ಜನರ ಆಕ್ರೋಶದ ಕಿಚ್ಚಿಗೆ ಹೆದರಿ ಅಧ್ಯಕ್ಷ ಗೊಟಬಯ ರಾಜಪಕ್ಸ ದೇಶ ಬಿಟ್ಟು ತೆರಳಿದ್ದರೆ. ಇತ್ತ, ಪ್ರಭಾರಿ ಅಧ್ಯಕ್ಷ ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪೀಠಕ್ಕೆ ಭದ್ರತೆ ಒದಗಿಸಲಾಗಿದೆ.</p>.<p>ನಿನ್ನೆ ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ವೇಳೆ, ಸಂಸತ್ ಭವನಕ್ಕೆ ನುಗ್ಗಲು ಯತ್ನಿಸಿದ್ದ ಪ್ರತಿಭಟನಾಕಾರರು ರಾನಿಲ್ ಎರಡೂ ಹುದ್ದೆ ತೊರೆಯಬೇಕೆಂದು ಒತ್ತಾಯಿಸಿದ್ದರು.<br /> <br />ಇವನ್ನೂ ಓದಿ..</p>.<p><a href="https://www.prajavani.net/world-news/gotabaya-rajapaksa-still-in-maldives-awaits-private-jet-to-depart-for-singapore-954235.html" itemprop="url">ಮಾಲ್ಡೀವ್ಸ್ನಲ್ಲಿ ಗೊಟಬಯ: ಖಾಸಗಿ ವಿಮಾನಕ್ಕಾಗಿ ಕಾಯುತ್ತಿರುವ ಶ್ರೀಲಂಕಾ ಅಧ್ಯಕ್ಷ </a></p>.<p><a href="https://www.prajavani.net/world-news/sri-lanka-lifts-curfew-no-signs-of-rajapaksas-resignation-954239.html" itemprop="url">ಶ್ರೀಲಂಕಾ ಬಿಕ್ಕಟ್ಟು; ಕರ್ಫ್ಯೂ ತೆರವು, ರಾಜೀನಾಮೆ ನೀಡದ ಗೊಟಬಯ ರಾಜಪಕ್ಸ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ</strong>: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ದೇಶವನ್ನು ಮುನ್ನಡೆಸಬೇಕಾದ ಪ್ರಧಾನಿ ಮತ್ತು ಅಧ್ಯಕ್ಷರೇ ಭಯದಲ್ಲಿ ತತ್ತರಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದ ದೇಶವನ್ನು ಕಾಪಾಡುವಲ್ಲಿ ವಿಫಲವಾದ ಸರ್ಕಾರದ ವಿರುದ್ಧ ದಂಗೆ ಎದ್ದಿರುವ ನಾಗರಿಕರು ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕುರ್ಚಿಯನ್ನು ಮಿಲಿಟರಿ ಕಾವಲು ಕಾಯುತ್ತಿದೆ.</p>.<p>ಈಗಾಗಲೇ, ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಅಧಿಕೃತ ಅರಮನೆಯನ್ನು ವಶಪಡಿಸಿಕೊಂಡಿರುವ ಪ್ರತಿಭಟನಾಕಾರರು, ರಾಜೀನಾಮೆ ಕೊಡದ ಹೊರತು ಹೊರಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.</p>.<p>ಈ ಮಧ್ಯೆ, ಜನರ ಆಕ್ರೋಶದ ಕಿಚ್ಚಿಗೆ ಹೆದರಿ ಅಧ್ಯಕ್ಷ ಗೊಟಬಯ ರಾಜಪಕ್ಸ ದೇಶ ಬಿಟ್ಟು ತೆರಳಿದ್ದರೆ. ಇತ್ತ, ಪ್ರಭಾರಿ ಅಧ್ಯಕ್ಷ ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪೀಠಕ್ಕೆ ಭದ್ರತೆ ಒದಗಿಸಲಾಗಿದೆ.</p>.<p>ನಿನ್ನೆ ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ವೇಳೆ, ಸಂಸತ್ ಭವನಕ್ಕೆ ನುಗ್ಗಲು ಯತ್ನಿಸಿದ್ದ ಪ್ರತಿಭಟನಾಕಾರರು ರಾನಿಲ್ ಎರಡೂ ಹುದ್ದೆ ತೊರೆಯಬೇಕೆಂದು ಒತ್ತಾಯಿಸಿದ್ದರು.<br /> <br />ಇವನ್ನೂ ಓದಿ..</p>.<p><a href="https://www.prajavani.net/world-news/gotabaya-rajapaksa-still-in-maldives-awaits-private-jet-to-depart-for-singapore-954235.html" itemprop="url">ಮಾಲ್ಡೀವ್ಸ್ನಲ್ಲಿ ಗೊಟಬಯ: ಖಾಸಗಿ ವಿಮಾನಕ್ಕಾಗಿ ಕಾಯುತ್ತಿರುವ ಶ್ರೀಲಂಕಾ ಅಧ್ಯಕ್ಷ </a></p>.<p><a href="https://www.prajavani.net/world-news/sri-lanka-lifts-curfew-no-signs-of-rajapaksas-resignation-954239.html" itemprop="url">ಶ್ರೀಲಂಕಾ ಬಿಕ್ಕಟ್ಟು; ಕರ್ಫ್ಯೂ ತೆರವು, ರಾಜೀನಾಮೆ ನೀಡದ ಗೊಟಬಯ ರಾಜಪಕ್ಸ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>