ಸಾವಿರಾರು ನಾಗರಿಕರು ಕಾಬೂಲ್ನ ಉದ್ಯಾನಗಳಲ್ಲಿ ಮತ್ತು ಬಯಲು ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ. ಎಟಿಎಂಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ತಾವು ಉಳಿತಾಯ ಮಾಡಿದ ಹಣ ವಾಪಸ್ ಪಡೆಯಲು ನೂರಾರು ಮಂದಿ ಖಾಸಗಿ ಬ್ಯಾಂಕ್ಗಳ ಮುಂದೆ ಸೇರಿದ್ದಾರೆ. ಆತಂಕಗೊಂಡ ನೌಕರರು ಸರ್ಕಾರಿ ಕಚೇರಿಗಳಿಂದ ಪರಾರಿಯಾಗಿದ್ದಾರೆ.