ವಿಶ್ವಸಂಸ್ಥೆಯಲ್ಲಿನ ಭಾರತದ ಉಪ ಕಾಯಂ ಪ್ರತಿನಿಧಿ ಆರ್. ರವೀಂದ್ರ, ‘ಮುಂದಿನ ವಾರ ಗ್ಲಾಸ್ಗೊದಲ್ಲಿ ನಡೆಯಲಿರುವ ‘ಸಿಒಪಿ–26‘ ಸಭೆಗೆ ಪೂರ್ವಭಾವಿಯಾಗಿ, ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ವೀಕ್ಷಕರ ಸ್ಥಾನಮಾನ ನೀಡುವ ಕರಡು ನಿರ್ಣಯದ ಮೇಲೆ ಇಂದು ಕೈಗೊಂಡ ಕ್ರಮವು ಸಾಂಕೇತಿಕವಾಗಿರುವ ಜೊತೆಗೆ, ವಸ್ತುನಿಷ್ಠವಾಗಿದೆ‘ ಎಂದು ಟ್ವೀಟ್ ಮಾಡಿದ್ದಾರೆ.