ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್ಡಿಪಿ)ದ ವರದಿಯ ಪ್ರಕಾರ, ಮಿಲಿಟರಿ ದಂಗೆ ಮತ್ತು ನಾಗರಿಕರ ಅಸಹಕಾರ ಚಳವಳಿಯ ನಡುವಿನ ಸಂಘರ್ಷದಿಂದಾಗಿ, ದೇಶದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಇದರಿಂದ ಮುಂದೆ 1.2 ಕೋಟಿ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.