<p><strong>ಜಿನೀವಾ</strong>: ಕೊರೊನಾ ಸಾಂಕ್ರಾಮಿಕವನ್ನು ಕೊನೆಗಾಣಿಸಲು ಎಲ್ಲಾ ರಾಷ್ಟ್ರಗಳೂ ಒಗ್ಗೂಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅಧನಾಮ್ ಗೆಬ್ರೆಯಾಸಸ್ ಸೋಮವಾರ ಒತ್ತಾಯಿಸಿದ್ದಾರೆ.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಂಕ್ರಾಮಿಕವು ಈಗ ಮೂರನೇ ವರ್ಷಕ್ಕೆ ಅಡಿಯಿಟ್ಟಿದ್ದು ನಾವು ನಿರ್ಣಾಯಕ ಘಟ್ಟದಲ್ಲಿದ್ದೇವೆ’ ಎಂದರು.</p>.<p>‘ಕೊರಾನಾ ಸಾಂಕ್ರಾಮಿಕ ಕೊನೆಗೊಳಿಸಲು ಅಗತ್ಯವಾದ ಎಲ್ಲಾ ಸಾಧನಗಳೂ ಈಗ ನಮ್ಮ ಬಳಿ ಇವೆ. ಆತಂಕ ಮತ್ತು ನಿರ್ಲಕ್ಷ್ಯದ ನಡುವೆ ಇದನ್ನು ಹೀಗೆಯೇ ಮುಂದುವರಿಯಲು ಬಿಡುವುದು ಸರಿಯಲ್ಲ’ ಎಂದು ಹೇಳಿದರು.</p>.<p>ಜರ್ಮನಿಯ ಅಭಿವೃದ್ಧಿ ಸಚಿವ ಸ್ವೆನ್ಜಾ ಮಾತನಾಡಿ, ಜಾಗತಿಕವಾಗಿ ಈ ಸೋಂಕನ್ನು ಕೊನೆಗಾಣಿಸುವುದು ಜರ್ಮನಿಯ ಆದ್ಯತೆ ಆಗಿದೆ. ವಿಶ್ವದಾದ್ಯಂತ ಲಸಿಕೆಯ ಆಂದೋಲನವೇ ನಡೆಯಬೇಕಿದೆ ಎಂದು ತಿಳಿಸಿದರು. ಜರ್ಮನಿಯು ಜಿ7 ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ.</p>.<p><a href="https://www.prajavani.net/karnataka-news/minister-k-sudhakar-warns-that-no-sex-determination-test-to-be-done-in-karnataka-and-its-offense-904622.html" itemprop="url">ಭ್ರೂಣ ಪತ್ತೆ: ತಪ್ಪಿತಸ್ಥರ ಪರವಾನಗಿ ರದ್ದು- ಸಚಿವ ಡಾ.ಕೆ.ಸುಧಾಕರ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಿನೀವಾ</strong>: ಕೊರೊನಾ ಸಾಂಕ್ರಾಮಿಕವನ್ನು ಕೊನೆಗಾಣಿಸಲು ಎಲ್ಲಾ ರಾಷ್ಟ್ರಗಳೂ ಒಗ್ಗೂಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅಧನಾಮ್ ಗೆಬ್ರೆಯಾಸಸ್ ಸೋಮವಾರ ಒತ್ತಾಯಿಸಿದ್ದಾರೆ.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಂಕ್ರಾಮಿಕವು ಈಗ ಮೂರನೇ ವರ್ಷಕ್ಕೆ ಅಡಿಯಿಟ್ಟಿದ್ದು ನಾವು ನಿರ್ಣಾಯಕ ಘಟ್ಟದಲ್ಲಿದ್ದೇವೆ’ ಎಂದರು.</p>.<p>‘ಕೊರಾನಾ ಸಾಂಕ್ರಾಮಿಕ ಕೊನೆಗೊಳಿಸಲು ಅಗತ್ಯವಾದ ಎಲ್ಲಾ ಸಾಧನಗಳೂ ಈಗ ನಮ್ಮ ಬಳಿ ಇವೆ. ಆತಂಕ ಮತ್ತು ನಿರ್ಲಕ್ಷ್ಯದ ನಡುವೆ ಇದನ್ನು ಹೀಗೆಯೇ ಮುಂದುವರಿಯಲು ಬಿಡುವುದು ಸರಿಯಲ್ಲ’ ಎಂದು ಹೇಳಿದರು.</p>.<p>ಜರ್ಮನಿಯ ಅಭಿವೃದ್ಧಿ ಸಚಿವ ಸ್ವೆನ್ಜಾ ಮಾತನಾಡಿ, ಜಾಗತಿಕವಾಗಿ ಈ ಸೋಂಕನ್ನು ಕೊನೆಗಾಣಿಸುವುದು ಜರ್ಮನಿಯ ಆದ್ಯತೆ ಆಗಿದೆ. ವಿಶ್ವದಾದ್ಯಂತ ಲಸಿಕೆಯ ಆಂದೋಲನವೇ ನಡೆಯಬೇಕಿದೆ ಎಂದು ತಿಳಿಸಿದರು. ಜರ್ಮನಿಯು ಜಿ7 ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ.</p>.<p><a href="https://www.prajavani.net/karnataka-news/minister-k-sudhakar-warns-that-no-sex-determination-test-to-be-done-in-karnataka-and-its-offense-904622.html" itemprop="url">ಭ್ರೂಣ ಪತ್ತೆ: ತಪ್ಪಿತಸ್ಥರ ಪರವಾನಗಿ ರದ್ದು- ಸಚಿವ ಡಾ.ಕೆ.ಸುಧಾಕರ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>