<p><strong>ಬಹುಪಕ್ಷೀಯ ಸಭೆಗೆ ಭಾರತ ಅಸಮ್ಮತಿ</strong></p>.<p><strong>ನವದೆಹಲಿ, ಮೇ 13 (ಪಿಟಿಐ)–</strong> ದಕ್ಷಿಣ ಏಷ್ಯದಲ್ಲಿ ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಸಂಬಂಧಿಸಿದಂತೆ ಬಹುಪಕ್ಷೀಯ ಸಭೆ ನಡೆಸುವ ಅಮೆರಿಕದ ಉದ್ದೇಶವನ್ನು ಭಾರತ ಒಪ್ಪದು ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಭೇಟಿಯ ವೇಳೆ ಅಮೆರಿಕಕ್ಕೆ ತಿಳಿಸಲಾಗುವುದು.</p>.<p><strong>ದೂರವಾಣಿ – ಖಾಸಗಿಗೆ ಅವಕಾಶ</strong></p>.<p><strong>ನವದೆಹಲಿ, ಮೇ 13 (ಯುಎನ್ಐ, ಪಿಟಿಐ)–</strong> ಜನರಿಗೆ ಮೂಲಭೂತ ದೂರವಾಣಿ ಸೌಲಭ್ಯ ಒದಗಿಸುವ ಕಾರ್ಯದಲ್ಲಿ ಖಾಸಗಿ ವಲಯಕ್ಕೂ ಅವಕಾಶ ನೀಡಲು ಸರ್ಕಾರ ಇಂದು ನಿರ್ಧರಿಸಿತು. ಈ ಮೂಲಕ ದೂರಸಂಪರ್ಕ ವ್ಯವಸ್ಥೆಯ ಮೇಲಿನ ಸರ್ಕಾರದ ಏಕಸ್ವಾಮ್ಯ ಕೊನೆಗೊಳ್ಳಲಿದೆ. ಸಂಪರ್ಕ ಖಾತೆಯ ರಾಜ್ಯ ಸಚಿವ ಸುಖರಾಮ್ ಈ ನೀತಿಯನ್ನು ಲೋಕಸಭೆಯಲ್ಲಿ ಮಂಡಿಸಿದರು.</p>.<p>ಎಲ್ಲ ಪಟ್ಟಣ ಪ್ರದೇಶಗಳಲ್ಲಿ 1997ರ ವೇಳೆಗೆ ಕೇಳಿದವರಿಗೆಲ್ಲ ದೂರವಾಣಿ ಸಂಪರ್ಕ ನೀಡಲು ಈ ನಿರ್ಧಾರದಿಂದ ಸಾಧ್ಯವಾಗುವುದು ಎಂದು ಸರ್ಕಾರ ಆಶಿಸಿದೆ. ಜತೆಗೆ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ದೂರವಾಣಿ ಸೌಲಭ್ಯ ಒದಗಿಸಲು ಮತ್ತು ಪ್ರತಿ 500 ಜನರಿಗೆ ಒಂದು ಸಾರ್ವಜನಿಕ ದೂರವಾಣಿ ಬೂತ್ ದೊರಕಿಸಿಕೊಡಲು ಸರ್ಕಾರ ಉದ್ದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಹುಪಕ್ಷೀಯ ಸಭೆಗೆ ಭಾರತ ಅಸಮ್ಮತಿ</strong></p>.<p><strong>ನವದೆಹಲಿ, ಮೇ 13 (ಪಿಟಿಐ)–</strong> ದಕ್ಷಿಣ ಏಷ್ಯದಲ್ಲಿ ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಸಂಬಂಧಿಸಿದಂತೆ ಬಹುಪಕ್ಷೀಯ ಸಭೆ ನಡೆಸುವ ಅಮೆರಿಕದ ಉದ್ದೇಶವನ್ನು ಭಾರತ ಒಪ್ಪದು ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಭೇಟಿಯ ವೇಳೆ ಅಮೆರಿಕಕ್ಕೆ ತಿಳಿಸಲಾಗುವುದು.</p>.<p><strong>ದೂರವಾಣಿ – ಖಾಸಗಿಗೆ ಅವಕಾಶ</strong></p>.<p><strong>ನವದೆಹಲಿ, ಮೇ 13 (ಯುಎನ್ಐ, ಪಿಟಿಐ)–</strong> ಜನರಿಗೆ ಮೂಲಭೂತ ದೂರವಾಣಿ ಸೌಲಭ್ಯ ಒದಗಿಸುವ ಕಾರ್ಯದಲ್ಲಿ ಖಾಸಗಿ ವಲಯಕ್ಕೂ ಅವಕಾಶ ನೀಡಲು ಸರ್ಕಾರ ಇಂದು ನಿರ್ಧರಿಸಿತು. ಈ ಮೂಲಕ ದೂರಸಂಪರ್ಕ ವ್ಯವಸ್ಥೆಯ ಮೇಲಿನ ಸರ್ಕಾರದ ಏಕಸ್ವಾಮ್ಯ ಕೊನೆಗೊಳ್ಳಲಿದೆ. ಸಂಪರ್ಕ ಖಾತೆಯ ರಾಜ್ಯ ಸಚಿವ ಸುಖರಾಮ್ ಈ ನೀತಿಯನ್ನು ಲೋಕಸಭೆಯಲ್ಲಿ ಮಂಡಿಸಿದರು.</p>.<p>ಎಲ್ಲ ಪಟ್ಟಣ ಪ್ರದೇಶಗಳಲ್ಲಿ 1997ರ ವೇಳೆಗೆ ಕೇಳಿದವರಿಗೆಲ್ಲ ದೂರವಾಣಿ ಸಂಪರ್ಕ ನೀಡಲು ಈ ನಿರ್ಧಾರದಿಂದ ಸಾಧ್ಯವಾಗುವುದು ಎಂದು ಸರ್ಕಾರ ಆಶಿಸಿದೆ. ಜತೆಗೆ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ದೂರವಾಣಿ ಸೌಲಭ್ಯ ಒದಗಿಸಲು ಮತ್ತು ಪ್ರತಿ 500 ಜನರಿಗೆ ಒಂದು ಸಾರ್ವಜನಿಕ ದೂರವಾಣಿ ಬೂತ್ ದೊರಕಿಸಿಕೊಡಲು ಸರ್ಕಾರ ಉದ್ದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>