<p>ಭಾರತೀಯ ಸಂಸ್ಕೃತಿಯಲ್ಲಿ ಮಾತ್ರವಲ್ಲದೆ, ಜಗತ್ತಿನ ಎಲ್ಲ ಪ್ರಾಚೀನ ಸಂಸ್ಕೃತಿಗಳಲ್ಲೂ ಗುರುತತ್ತ್ವಕ್ಕೆ ತುಂಬ ಗೌರವವಿದೆ. ಒಟ್ಟು ಗುರುಪರಂಪರೆಗೆ ಪೂಜೆ ಸಲ್ಲಿಸುವುದಕ್ಕಾಗಿ ನಮ್ಮಲ್ಲಿ ಒಂದು ದಿನವನ್ನೇ ಮೀಸಲಾಗಿಡಲಾಗಿದೆ. ಅದೇ ಗುರುಪೂರ್ಣಿಮಾ. ಪ್ರತಿ ವರ್ಷ ಆಷಾಢ ಶುದ್ಧ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮೆಯನ್ನಾಗಿ ಆಚರಿಸಲಾಗುತ್ತದೆ.</p>.<p>ಗುರುಪೂರ್ಣಿಮೆಯನ್ನು ‘ವ್ಯಾಸಪೂರ್ಣಿಮಾ’ ಎಂದೂ ಕರೆಯಲಾಗುತ್ತದೆ. ಇದೂ ಕೂಡ ಮನನೀಯವಾಗಿದೆ. ಒಟ್ಟು ಭಾರತೀಯ ಪರಂಪರೆಗೆ ಗುರುಸ್ಥಾನದಲ್ಲಿರುವವರೇ ವ್ಯಾಸಮಹರ್ಷಿ. ಅವರು ಒಂದೇ ಆಗಿದ್ದ ವೇದವನ್ನು ಅಧ್ಯಯನದ ಅನುಕೂಲಕ್ಕಾಗಿ ನಾಲ್ಕಾಗಿ ವಿಭಾಗಮಾಡಿದವರು; ಮಹಾಭಾರತವನ್ನೂ ಹದಿನೆಂಟು ಪುರಾಣಗಳನ್ನೂ ರಚಿಸಿ ವೇದದ ತಿರುಗಳು ಎಲ್ಲರಿಗೂ ತಿಳಿಯುವಂತೆ ಮಾಡಿದವರು. ಭಾರತೀಯ ವಿದ್ಯಾಪರಂಪರೆಗೆ ಚೌಕಟ್ಟನ್ನು ಒದಗಿಸಿದವರೇ ವ್ಯಾಸಮಹರ್ಷಿ. ಸನ್ಯಾಸಿಗಳು ವ್ಯಾಸಪೂಜೆಯನ್ನು ಮಾಡಿ ಚಾತುರ್ಮಾಸ್ಯವ್ರತದ ಸಂಕಲ್ಪವನ್ನು ಕೈಗೊಳ್ಳುತ್ತಾರೆ.</p>.<p>’ಗುರು’ ಎಂದರೆ ಕತ್ತಲೆಯನ್ನು ಓಡಿಸಿ, ಬೆಳಕನ್ನು ಒದಗಿಸಿದವನು. ಅವನು ಇಲ್ಲದಿದ್ದರೆ ನಮ್ಮ ಬಾಳು ಸುಗಮವಾಗಿ ಸಾಗದು; ಬದುಕಿನ ದಾರಿ ನಮಗೆ ಕಾಣುವುದೇ ಅವನು ಕೊಡುವ ಬೆಳಕಿನಲ್ಲಿ. ಅವನು ವಿದ್ಯೆಯ ರೂಪದಲ್ಲಿ ನಮಗೆ ನೀಡುವ ತಿಳಿವಳಿಕೆಯೇ ಆ ಬೆಳಕು. ಹೀಗಾಗಿ ನಮಗೆ ಪ್ರತಿ ಕ್ಷಣವೂ ಗುರುವಿನ ಜೊತೆ ಬೇಕು. ಅಂಥ ಗುರುಪರಂಪರೆಯನ್ನು ಗೌರವದಿಂದ ಸ್ಮರಿಸಿ, ಆರಾಧಿಸಿ, ಪೂಜಿಸುವುದೇ ಗುರುಪೂರ್ಣಿಮೆಯ ಉದ್ದೇಶ.</p>.<p>ಭಾರತೀಯ ಸಂಸ್ಖೃತಿಯಲ್ಲಿ ‘ಗುರುತತ್ತ್ವ’ವನ್ನು ವಿವಿಧ ಮೂಲಗಳಲ್ಲಿ ಕಾಣಲಾಗಿದೆ. ಪ್ರಕೃತಿಯ ಒಂದೊಂದು ವಸ್ತು–ವಿವರವನ್ನೂ ಗುರು ಎಂದೇ ಸ್ವೀಕರಿಸಲಾಗಿದೆ. ಈ ಎಲ್ಲ ಗುರುತತತ್ತ್ವದ ಪ್ರತಿನಿಧಿಯಾಗಿ ವ್ಯಾಸಮಹರ್ಷಿಗಳನ್ನು ಅಥವಾ ದಕ್ಷಿಣಾಮೂರ್ತಿಯನ್ನು ಅಥವಾ ದತ್ತಾತ್ರೇಯನನ್ನು ಆರಾಧಿಸುವುದು ವಾಡಿಕೆ.</p>.<p>ವ್ಯಾಸರ ವಿಶೇಷವನ್ನು ಈ ಮೊದಲು ನೋಡಿದ್ದೇವೆ. ವಿದ್ಯೆ ಎನ್ನುವುದು ಎಂದಿಗೂ ತಾರುಣ್ಯವನ್ನು, ಎಂದರೆ ಶಕ್ತಿಯನ್ನು ಕಳೇದುಕೊಳ್ಳದ ಸ್ಥಿತಿಯಲ್ಲಿರುತ್ತದೆ. ಇದಕ್ಕೆ ಸಂಕೇತವೇ ದಕ್ಷಿಣಾಮೂರ್ತಿ. ಗುರುಸ್ಥಾನದಲ್ಲಿ ಯುವಕನಾದ ದಕ್ಷಿಣಮೂರ್ತಿಯಿದ್ದರೆ, ಶಿಷ್ಯರು ವೃದ್ಧರು. ಇದರ ತಾತ್ಪರ್ಯವೇ ವಿದ್ಯೆಗಿರುವ ಕಾಂತಿಯನ್ನು ಸೂಚಿಸುವುದು.</p>.<p>ದತ್ತಾತ್ರೇಯನನ್ನು ಅವಧೂತನ ಸ್ವರೂಪದಲ್ಲಿ ಕಾಣಿಸಲಾಗಿದೆ. ಲೋಕವ್ಯವಹಾರದ ಸೀಮಿತ ವಿಧಿ–ನಿಷೇಧಗಳನ್ನು ಮೀರಿದವನೇ ಅವಧೂತ. ಅಂತೆಯೇ ನಮಗೆ ವಿದ್ಯೆ ಕೂಡ ಯಾವ ಮೂಲದಿಂದಲೂ ಒದಗಬಹುದು; ನಮ್ಮ ತರ್ಕಕ್ಕೆ ಸಿಗದ ರೀತಿಯಲ್ಲಿ ಬದುಕು ನಮಗೆ ಪಾಠವನ್ನು ಕಲಿಸುತ್ತಿರುತ್ತದೆ. ಇದರ ಸಂಕೇತವೇ ದತ್ತಾತ್ರೇಯ. ಅವನು ತ್ರಿಮೂರ್ತಿಗಳ ಸ್ವರೂಪನೂ ಹೌದು. ಎಂದರೆ ಸೃಷ್ಟಿ, ಸ್ಥಿತಿ, ಲಯಗಳ ಸಂಗಮ. ಗುರು ನಮಗೆ ಈ ಮೂರು ಸ್ಥಿತಿಗಳಲ್ಲೂ ಒದಗುತ್ತಾನೆ.</p>.<p>ಐತಿಹಾಸಿಕವಾಗಿಯೂ ಆಷಾಢ ಶುದ್ಧ ಪೂರ್ಣಿಮೆಗೆ ಮಹತ್ವವಿದೆ. ಬುದ್ಧನಾಗುವ ಮೋದಲು ಸಿದ್ಧಾರ್ಥನು ಅರಮನೆಯನ್ನು ತೊರೆದದ್ದು ಇದೇ ದಿನ, ಅವನು ತಪಸ್ಸಿಗೆಂದು ವನವನ್ನು ಪ್ರವೇಶಿಸಿದ್ದು ಇದೇ ದಿನ ಮತ್ತು ಅವನು ಜ್ಞಾನೋದಯವನ್ನು ಪಡೆದ ಮೇಲೆ ಮೊದಲಿಗೆ ಧರ್ಮವನ್ನು ಉಪದೇಶಿಸಿದ್ದು ಕೂಡ ಇದೇ ದಿನ.</p>.<p>ಹೀಗೆ ಗುರುಪೂರ್ಣಿಮೆಗೆ ಹಲವು ಆಯಾಮಗಳ ಮಹತ್ವವಿದೆ. ಅಂದು ನಮ್ಮ ಗುರುಪರಂಪರೆಯನ್ನು ಸ್ಮರಿಸಿ, ಗೌರವಿಸಿ, ನಮಿಸೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾರತೀಯ ಸಂಸ್ಕೃತಿಯಲ್ಲಿ ಮಾತ್ರವಲ್ಲದೆ, ಜಗತ್ತಿನ ಎಲ್ಲ ಪ್ರಾಚೀನ ಸಂಸ್ಕೃತಿಗಳಲ್ಲೂ ಗುರುತತ್ತ್ವಕ್ಕೆ ತುಂಬ ಗೌರವವಿದೆ. ಒಟ್ಟು ಗುರುಪರಂಪರೆಗೆ ಪೂಜೆ ಸಲ್ಲಿಸುವುದಕ್ಕಾಗಿ ನಮ್ಮಲ್ಲಿ ಒಂದು ದಿನವನ್ನೇ ಮೀಸಲಾಗಿಡಲಾಗಿದೆ. ಅದೇ ಗುರುಪೂರ್ಣಿಮಾ. ಪ್ರತಿ ವರ್ಷ ಆಷಾಢ ಶುದ್ಧ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮೆಯನ್ನಾಗಿ ಆಚರಿಸಲಾಗುತ್ತದೆ.</p>.<p>ಗುರುಪೂರ್ಣಿಮೆಯನ್ನು ‘ವ್ಯಾಸಪೂರ್ಣಿಮಾ’ ಎಂದೂ ಕರೆಯಲಾಗುತ್ತದೆ. ಇದೂ ಕೂಡ ಮನನೀಯವಾಗಿದೆ. ಒಟ್ಟು ಭಾರತೀಯ ಪರಂಪರೆಗೆ ಗುರುಸ್ಥಾನದಲ್ಲಿರುವವರೇ ವ್ಯಾಸಮಹರ್ಷಿ. ಅವರು ಒಂದೇ ಆಗಿದ್ದ ವೇದವನ್ನು ಅಧ್ಯಯನದ ಅನುಕೂಲಕ್ಕಾಗಿ ನಾಲ್ಕಾಗಿ ವಿಭಾಗಮಾಡಿದವರು; ಮಹಾಭಾರತವನ್ನೂ ಹದಿನೆಂಟು ಪುರಾಣಗಳನ್ನೂ ರಚಿಸಿ ವೇದದ ತಿರುಗಳು ಎಲ್ಲರಿಗೂ ತಿಳಿಯುವಂತೆ ಮಾಡಿದವರು. ಭಾರತೀಯ ವಿದ್ಯಾಪರಂಪರೆಗೆ ಚೌಕಟ್ಟನ್ನು ಒದಗಿಸಿದವರೇ ವ್ಯಾಸಮಹರ್ಷಿ. ಸನ್ಯಾಸಿಗಳು ವ್ಯಾಸಪೂಜೆಯನ್ನು ಮಾಡಿ ಚಾತುರ್ಮಾಸ್ಯವ್ರತದ ಸಂಕಲ್ಪವನ್ನು ಕೈಗೊಳ್ಳುತ್ತಾರೆ.</p>.<p>’ಗುರು’ ಎಂದರೆ ಕತ್ತಲೆಯನ್ನು ಓಡಿಸಿ, ಬೆಳಕನ್ನು ಒದಗಿಸಿದವನು. ಅವನು ಇಲ್ಲದಿದ್ದರೆ ನಮ್ಮ ಬಾಳು ಸುಗಮವಾಗಿ ಸಾಗದು; ಬದುಕಿನ ದಾರಿ ನಮಗೆ ಕಾಣುವುದೇ ಅವನು ಕೊಡುವ ಬೆಳಕಿನಲ್ಲಿ. ಅವನು ವಿದ್ಯೆಯ ರೂಪದಲ್ಲಿ ನಮಗೆ ನೀಡುವ ತಿಳಿವಳಿಕೆಯೇ ಆ ಬೆಳಕು. ಹೀಗಾಗಿ ನಮಗೆ ಪ್ರತಿ ಕ್ಷಣವೂ ಗುರುವಿನ ಜೊತೆ ಬೇಕು. ಅಂಥ ಗುರುಪರಂಪರೆಯನ್ನು ಗೌರವದಿಂದ ಸ್ಮರಿಸಿ, ಆರಾಧಿಸಿ, ಪೂಜಿಸುವುದೇ ಗುರುಪೂರ್ಣಿಮೆಯ ಉದ್ದೇಶ.</p>.<p>ಭಾರತೀಯ ಸಂಸ್ಖೃತಿಯಲ್ಲಿ ‘ಗುರುತತ್ತ್ವ’ವನ್ನು ವಿವಿಧ ಮೂಲಗಳಲ್ಲಿ ಕಾಣಲಾಗಿದೆ. ಪ್ರಕೃತಿಯ ಒಂದೊಂದು ವಸ್ತು–ವಿವರವನ್ನೂ ಗುರು ಎಂದೇ ಸ್ವೀಕರಿಸಲಾಗಿದೆ. ಈ ಎಲ್ಲ ಗುರುತತತ್ತ್ವದ ಪ್ರತಿನಿಧಿಯಾಗಿ ವ್ಯಾಸಮಹರ್ಷಿಗಳನ್ನು ಅಥವಾ ದಕ್ಷಿಣಾಮೂರ್ತಿಯನ್ನು ಅಥವಾ ದತ್ತಾತ್ರೇಯನನ್ನು ಆರಾಧಿಸುವುದು ವಾಡಿಕೆ.</p>.<p>ವ್ಯಾಸರ ವಿಶೇಷವನ್ನು ಈ ಮೊದಲು ನೋಡಿದ್ದೇವೆ. ವಿದ್ಯೆ ಎನ್ನುವುದು ಎಂದಿಗೂ ತಾರುಣ್ಯವನ್ನು, ಎಂದರೆ ಶಕ್ತಿಯನ್ನು ಕಳೇದುಕೊಳ್ಳದ ಸ್ಥಿತಿಯಲ್ಲಿರುತ್ತದೆ. ಇದಕ್ಕೆ ಸಂಕೇತವೇ ದಕ್ಷಿಣಾಮೂರ್ತಿ. ಗುರುಸ್ಥಾನದಲ್ಲಿ ಯುವಕನಾದ ದಕ್ಷಿಣಮೂರ್ತಿಯಿದ್ದರೆ, ಶಿಷ್ಯರು ವೃದ್ಧರು. ಇದರ ತಾತ್ಪರ್ಯವೇ ವಿದ್ಯೆಗಿರುವ ಕಾಂತಿಯನ್ನು ಸೂಚಿಸುವುದು.</p>.<p>ದತ್ತಾತ್ರೇಯನನ್ನು ಅವಧೂತನ ಸ್ವರೂಪದಲ್ಲಿ ಕಾಣಿಸಲಾಗಿದೆ. ಲೋಕವ್ಯವಹಾರದ ಸೀಮಿತ ವಿಧಿ–ನಿಷೇಧಗಳನ್ನು ಮೀರಿದವನೇ ಅವಧೂತ. ಅಂತೆಯೇ ನಮಗೆ ವಿದ್ಯೆ ಕೂಡ ಯಾವ ಮೂಲದಿಂದಲೂ ಒದಗಬಹುದು; ನಮ್ಮ ತರ್ಕಕ್ಕೆ ಸಿಗದ ರೀತಿಯಲ್ಲಿ ಬದುಕು ನಮಗೆ ಪಾಠವನ್ನು ಕಲಿಸುತ್ತಿರುತ್ತದೆ. ಇದರ ಸಂಕೇತವೇ ದತ್ತಾತ್ರೇಯ. ಅವನು ತ್ರಿಮೂರ್ತಿಗಳ ಸ್ವರೂಪನೂ ಹೌದು. ಎಂದರೆ ಸೃಷ್ಟಿ, ಸ್ಥಿತಿ, ಲಯಗಳ ಸಂಗಮ. ಗುರು ನಮಗೆ ಈ ಮೂರು ಸ್ಥಿತಿಗಳಲ್ಲೂ ಒದಗುತ್ತಾನೆ.</p>.<p>ಐತಿಹಾಸಿಕವಾಗಿಯೂ ಆಷಾಢ ಶುದ್ಧ ಪೂರ್ಣಿಮೆಗೆ ಮಹತ್ವವಿದೆ. ಬುದ್ಧನಾಗುವ ಮೋದಲು ಸಿದ್ಧಾರ್ಥನು ಅರಮನೆಯನ್ನು ತೊರೆದದ್ದು ಇದೇ ದಿನ, ಅವನು ತಪಸ್ಸಿಗೆಂದು ವನವನ್ನು ಪ್ರವೇಶಿಸಿದ್ದು ಇದೇ ದಿನ ಮತ್ತು ಅವನು ಜ್ಞಾನೋದಯವನ್ನು ಪಡೆದ ಮೇಲೆ ಮೊದಲಿಗೆ ಧರ್ಮವನ್ನು ಉಪದೇಶಿಸಿದ್ದು ಕೂಡ ಇದೇ ದಿನ.</p>.<p>ಹೀಗೆ ಗುರುಪೂರ್ಣಿಮೆಗೆ ಹಲವು ಆಯಾಮಗಳ ಮಹತ್ವವಿದೆ. ಅಂದು ನಮ್ಮ ಗುರುಪರಂಪರೆಯನ್ನು ಸ್ಮರಿಸಿ, ಗೌರವಿಸಿ, ನಮಿಸೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>