<p>ಲಿಂಗರಾಜು ಡಿ.ಎಸ್.</p>.<p>‘ಮಾಜಿ ಶಾಸಕರಿಗೆಲ್ಲಾ ಸರ್ಕಾರ ಲಕ್ಷಗಟ್ಟಲೆ ಸಂಬಳ, ಪಿಂಚಣಿ, ಲವಾಜಮೆ ಖರ್ಚು ಕೊಟ್ಟು ಸಾಕಿಕ್ಯಂಡದಂತೆ’ ತುರೇಮಣೆಗೆ ಹೇಳಿದೆ.</p>.<p>‘ಶಾಸಕರು ಏನೂ ಮಾಡದೇ ಇದ್ದದ್ದಕ್ಕೆ ಪಿಂಚಣಿ ತಲಾ ಎಪ್ಪತ್ತೈದು ಸಾವಿರ. ಕಾಲೇಜಲ್ಲಿ ವತ್ತಾರಿಂದ ಸಂಜೆಗಂಟಾ ದುಡಿಯೋ ಡಬ್ಬಲ್ ಡಿಗ್ರಿ ಲೆಕ್ಚರರಿಗೆ ಬರೀ ಇಪ್ಪತ್ತು ಸಾವಿರವಂತೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು<br />ವರ್ಸದಿಂದ ಸಂಬಳ ಜಾಸ್ತಿ ಮಾಡಿ ಅಂತ ಗಂಟಲು ಹರಕತ್ತಾವರೆ. ಸರ್ಕಾರ ಕ್ಯಾರೆ ಅಂದುಲ್ಲ. ಶಾಸಕರ ಕಾಯಿಲೆ ಕಸಾಲೆಗೆ ತಿಂಗಳಾ ಇಪ್ಪತ್ತು ಸಾವಿರ ಕೊಟ್ಟಾರಂತೆ. ನಮ್ಮ ಆರೋಗ್ಯ ಕೆಟ್ಟರೆ ಕೇಳೋರು ಗತಿ ಇಲ್ಲ’ ತುರೇಮಣೆ ಸಿಟ್ಟುಗಂದರು.</p>.<p>‘ನಿಗಮ, ಮಂಡಲಿಗಳ ಕಾಸುನೂ ಬುಡದಂಗೆ ಗೋರಿಕಂದು ತಿಂದವ್ರೆ’ ಅಂತಂದೆ.</p>.<p>‘ಇಷ್ಟೇ ಅಲ್ಲ ಕಂಡ್ಲಾ, ಹಾಲಿ–ಮಾಜಿಗಳು ವಿಮಾನ ದಾಗೋಗಕ್ಕೆ ತಿಂಗಳಿಗೆ ಎರಡು ಲಕ್ಸ ಕಾಸು. ಪಿಎಗೆ, ರೂಂಬಾಯಿಗೆ ಇಪ್ಪತ್ತೈದು ಸಾವಿರ. ಐದೈದು ವರ್ಸಕ್ಕೂ ತಪ್ಪದೇ ಸಂಬಳ ಜಾಸ್ತಿ ಮಾಡಿಕ್ಯತ್ತರೆ. ದೇಸ ಹ್ಯಂಗೆ ಉದ್ಧಾರಾತದೆ?’ ಅಂತು ಯಂಟಪ್ಪಣ್ಣ.</p>.<p>‘ಭೇಸ್ ಮಗನೇ. ಒಪ್ಪಿದೆ’ ಅಂತ ಮೂರು ಜನ ದೊಡ್ಡ ಮನುಸ್ರ ಥರಾ ಟೋಪಿ, ಪೇಟ ಇಕ್ಕ್ಯಂದೋರು ಕಾಣಿಸಿಗ್ಯಂದು ಅವರೇ ಪರಿಚಯ ಮಾಡಿಕ್ಯಂದರು.</p>.<p>‘ನೋಡ್ಲಾ ನಾನು ಕೆಂಗಲ್ ಹನುಮಂತಯ್ಯ, ಇವರು ಕೆ.ಸಿ. ರೆಡ್ಡಿ, ಇವರು ಕಡಿದಾಳ್ ಮಂಜಪ್ಪ. ಪ್ರಾಮಾಣಿಕತೆ ಇಲ್ಲದ ಈ ಕಾಲದ ರಾಜಕಾರಣಿಗಳಿಂದ ಯಾವತ್ತೂ ದೇಸ ಉದ್ಧಾರಾಗಕುಲ್ಲ ಕನ್ರೋ. ದಿಟವಾದ ರಾಜಕಾರಣಿಗಳೆಲ್ಲಾ ನಮ್ಮ ಜೊತೆ ಅವ್ರೆ’ ಕೆಂಗಲ್ ನೊಂದ್ಕಂದ್ರು.</p>.<p>‘ದಿಟ ಕನ್ರೀ ಕೆಂಗಲ್. ನ್ಯಾಯ–ನೀತಿಗೋಸ್ಕರ ಸಿಎಂ ಪೋಸ್ಟುನ್ನೇ ಕಿತ್ತು ಉರುಬಿ ಬಂದೋರು ನಾವು. ಜನಕ್ಕೆ ಏನಾದರೂ ಒಳ್ಳೇದು ಮಾಡಬಕು ಅನ್ನೋ ಘನವಾದ ಇಚಾರವೇ ಈಗಿನೋರಿಗಿಲ್ಲ. ಇವರ ಅಡಾವುಡೀಲಿ ನಿಮ್ಮ ಭವಿಷ್ಯ ಮಂಕಾಯ್ತಾ ಅದಲ್ರೋ’ ಅಂದ್ರು ಕಡಿದಾಳ್ ಮಂಜಪ್ಪ.</p>.<p>ನಾವೂ ಸತ್ಯ ಒಪ್ಪಿಕ್ಯಂದು ಸುಮ್ಮಗಾದೊ. ಮೂವರೂ ಮಟಾಮಾಯ ಆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಿಂಗರಾಜು ಡಿ.ಎಸ್.</p>.<p>‘ಮಾಜಿ ಶಾಸಕರಿಗೆಲ್ಲಾ ಸರ್ಕಾರ ಲಕ್ಷಗಟ್ಟಲೆ ಸಂಬಳ, ಪಿಂಚಣಿ, ಲವಾಜಮೆ ಖರ್ಚು ಕೊಟ್ಟು ಸಾಕಿಕ್ಯಂಡದಂತೆ’ ತುರೇಮಣೆಗೆ ಹೇಳಿದೆ.</p>.<p>‘ಶಾಸಕರು ಏನೂ ಮಾಡದೇ ಇದ್ದದ್ದಕ್ಕೆ ಪಿಂಚಣಿ ತಲಾ ಎಪ್ಪತ್ತೈದು ಸಾವಿರ. ಕಾಲೇಜಲ್ಲಿ ವತ್ತಾರಿಂದ ಸಂಜೆಗಂಟಾ ದುಡಿಯೋ ಡಬ್ಬಲ್ ಡಿಗ್ರಿ ಲೆಕ್ಚರರಿಗೆ ಬರೀ ಇಪ್ಪತ್ತು ಸಾವಿರವಂತೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು<br />ವರ್ಸದಿಂದ ಸಂಬಳ ಜಾಸ್ತಿ ಮಾಡಿ ಅಂತ ಗಂಟಲು ಹರಕತ್ತಾವರೆ. ಸರ್ಕಾರ ಕ್ಯಾರೆ ಅಂದುಲ್ಲ. ಶಾಸಕರ ಕಾಯಿಲೆ ಕಸಾಲೆಗೆ ತಿಂಗಳಾ ಇಪ್ಪತ್ತು ಸಾವಿರ ಕೊಟ್ಟಾರಂತೆ. ನಮ್ಮ ಆರೋಗ್ಯ ಕೆಟ್ಟರೆ ಕೇಳೋರು ಗತಿ ಇಲ್ಲ’ ತುರೇಮಣೆ ಸಿಟ್ಟುಗಂದರು.</p>.<p>‘ನಿಗಮ, ಮಂಡಲಿಗಳ ಕಾಸುನೂ ಬುಡದಂಗೆ ಗೋರಿಕಂದು ತಿಂದವ್ರೆ’ ಅಂತಂದೆ.</p>.<p>‘ಇಷ್ಟೇ ಅಲ್ಲ ಕಂಡ್ಲಾ, ಹಾಲಿ–ಮಾಜಿಗಳು ವಿಮಾನ ದಾಗೋಗಕ್ಕೆ ತಿಂಗಳಿಗೆ ಎರಡು ಲಕ್ಸ ಕಾಸು. ಪಿಎಗೆ, ರೂಂಬಾಯಿಗೆ ಇಪ್ಪತ್ತೈದು ಸಾವಿರ. ಐದೈದು ವರ್ಸಕ್ಕೂ ತಪ್ಪದೇ ಸಂಬಳ ಜಾಸ್ತಿ ಮಾಡಿಕ್ಯತ್ತರೆ. ದೇಸ ಹ್ಯಂಗೆ ಉದ್ಧಾರಾತದೆ?’ ಅಂತು ಯಂಟಪ್ಪಣ್ಣ.</p>.<p>‘ಭೇಸ್ ಮಗನೇ. ಒಪ್ಪಿದೆ’ ಅಂತ ಮೂರು ಜನ ದೊಡ್ಡ ಮನುಸ್ರ ಥರಾ ಟೋಪಿ, ಪೇಟ ಇಕ್ಕ್ಯಂದೋರು ಕಾಣಿಸಿಗ್ಯಂದು ಅವರೇ ಪರಿಚಯ ಮಾಡಿಕ್ಯಂದರು.</p>.<p>‘ನೋಡ್ಲಾ ನಾನು ಕೆಂಗಲ್ ಹನುಮಂತಯ್ಯ, ಇವರು ಕೆ.ಸಿ. ರೆಡ್ಡಿ, ಇವರು ಕಡಿದಾಳ್ ಮಂಜಪ್ಪ. ಪ್ರಾಮಾಣಿಕತೆ ಇಲ್ಲದ ಈ ಕಾಲದ ರಾಜಕಾರಣಿಗಳಿಂದ ಯಾವತ್ತೂ ದೇಸ ಉದ್ಧಾರಾಗಕುಲ್ಲ ಕನ್ರೋ. ದಿಟವಾದ ರಾಜಕಾರಣಿಗಳೆಲ್ಲಾ ನಮ್ಮ ಜೊತೆ ಅವ್ರೆ’ ಕೆಂಗಲ್ ನೊಂದ್ಕಂದ್ರು.</p>.<p>‘ದಿಟ ಕನ್ರೀ ಕೆಂಗಲ್. ನ್ಯಾಯ–ನೀತಿಗೋಸ್ಕರ ಸಿಎಂ ಪೋಸ್ಟುನ್ನೇ ಕಿತ್ತು ಉರುಬಿ ಬಂದೋರು ನಾವು. ಜನಕ್ಕೆ ಏನಾದರೂ ಒಳ್ಳೇದು ಮಾಡಬಕು ಅನ್ನೋ ಘನವಾದ ಇಚಾರವೇ ಈಗಿನೋರಿಗಿಲ್ಲ. ಇವರ ಅಡಾವುಡೀಲಿ ನಿಮ್ಮ ಭವಿಷ್ಯ ಮಂಕಾಯ್ತಾ ಅದಲ್ರೋ’ ಅಂದ್ರು ಕಡಿದಾಳ್ ಮಂಜಪ್ಪ.</p>.<p>ನಾವೂ ಸತ್ಯ ಒಪ್ಪಿಕ್ಯಂದು ಸುಮ್ಮಗಾದೊ. ಮೂವರೂ ಮಟಾಮಾಯ ಆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>