ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ.ಅಶೋಕ ಪಿ ಅವರು ಮಾತನಾಡಿ, ‘ಕೃಷಿಯಲ್ಲಿ ಆಸಕ್ತಿ ಹೊಂದಿದವರೆಲ್ಲ ನೋಡಲೇ ಬೇಕಾದ ಒಂದು ಮಾದರಿ ಸಾವೆ ಬೆಳೆದ ಜಮೀನು ಎಂದರೆ ತಪ್ಪಾಗಲಿಕ್ಕಿಲ್ಲ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬೆಳೆಯಬಹುದು. ಮತ್ತೆ ನಮ್ಮ ಪೂರ್ವಜರ ಆಹಾರ ಪದ್ದತಿ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದು ಸಂತೋಷ ತಂದಿದೆ. ಮಾರುಕಟ್ಟೆಯಲ್ಲಿ ಕೂಡ ಹೆಚ್ಚು ಬೇಡಿಕೆಯಿದೆ. ಈ ಸಿರಿಧಾನ್ಯಗಳಲ್ಲಿ ಪ್ರೊಟೀನ್, ಲವಣಗಳು, ನಾರಿನಾಂಶ, ಸುಣ್ಣ, ಕಬ್ಬಿಣ ಇತ್ಯಾದಿಗಳನ್ನು ಹೊಂದಿರುವುದರಿಂದ ಹೆಚ್ಚು ಉಪಯುಕ್ತವಾಗಿದೆ’ ಎಂದರು.