ಸಾಂಪ್ರದಾಯಿಕ ವಿಧಾನದಲ್ಲಿ ಅಡಿಕೆಯನ್ನು ಸುಲಿದು, ಬೇಯಿಸಿ, ಒಣಗಿಸಲು ರೈತರು ತುಂಬಾ ಶ್ರಮ ಪಡುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಅರಿತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊನ್ನೆಮರದಹಳ್ಳಿಯ ಸಾಫ್ಟ್ವೇರ್ ಎಂಜಿನಿಯರ್ ರಘು ಬಿ.ಆರ್. ಅವರು ಅಡಿಕೆ ಬೇಯಿಸಲು ಪರಿಸರಸ್ನೇಹಿಯಾದ ಸೋಲಾರ್ ಡ್ರಯರ್ ತಯಾರಿಸಿದ್ದಾರೆ. ಇದರಿಂದ ಹಣ ಹಾಗೂ ಸಮಯ ಎರಡೂ ಉಳಿಯುತ್ತಿದೆ. ಈ ಸೋಲಾರ್ ಡ್ರಯರ್ನ ವಿಶೇಷಗಳೇನು? ಇದರ ಬಗ್ಗೆ ರೈತರು ಏನು ಹೇಳುತ್ತಾರೆ ನೋಡೋಣ ಬನ್ನಿ...