<p><span style="color:#ff0000;"><strong>ಎಂ.ಎನ್.ಹೆಗಡೆ, ಶಿರಸಿ</strong></span><br /> <strong>ನಮ್ಮಲ್ಲಿ ಐದು ಹಸುಗಳಿವೆ. ಇತ್ತೀಚೆಗೆ ಒಂದು ಹಸು ಆಹಾರ ತಿನ್ನದೇ ಮೈಯೆಲ್ಲ ದದ್ದರಿಸಿಕೊಂಡು ಸತ್ತು ಹೋಯಿತು. ಇದಕ್ಕೆ ಏನು ಕಾರಣ. ಮುಂದೆ ಹೀಗಾಗದಂತಿರಲು ಏನು ಮಾಡಬೇಕು.</strong><br /> ಉ: 400 ಕಿ.ಮೀ. ದೂರದಿಂದ ನಿಮ್ಮ ಹಸುವಿನ ಸಾವಿಗೆ ಕಾರಣ ತಿಳಿಸಲಾರೆ. ದಯವಿಟ್ಟು ಹತ್ತಿರದ ಪಶುಸಂಗೋಪನಾ ಇಲಾಖೆಯವರಿಂದ ನಿಮ್ಮ ಉಳಿದ 4 ಹಸುಗಳ ತಪಾಸಣೆ ಮಾಡಿಸಿರಿ.</p>.<p><span style="color:#ff0000;"><strong>ಮನೋಜ್ಕುಮಾರ್ ಎಸ್. ಸೂಲಗತ್ತಿ</strong></span><br /> <strong>ಕರಿಮೆಣಸಿನ ಬಳ್ಳಿಗಳು ಬೇರು ಕೊಳೆತು ಒಣಗುತ್ತಿವೆ. ಈ ವರ್ಷ ಮಳೆ ಜಾಸ್ತಿ ಬಂದಿದೆ. ಈ ರೋಗ ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಬರುತ್ತದೆ. ಇದರ ನಿಯಂತ್ರಣ ಹೇಗೆ ತಿಳಿಸಿರಿ. ನಾನು ಸಾವಯವ ಪದ್ಧತಿ ಅನುಸರಿಸುತ್ತಿದ್ದೇನೆ. ಸಾವಯವ ಪದ್ಧತಿಯ ನಿಯಂತ್ರಣ ಕ್ರಮಗಳನ್ನು ತಿಳಿಸಿ.</strong><br /> ಉ: ಕರಿ ಮೆಣಸಿನ ಬಳ್ಳಿಗಳಿಗೆ ಮಳೆಗಾಲದಲ್ಲಿ ಹೆಚ್ಚು ತೇವದ ಬಾಧೆ ಇಲ್ಲದಂತೆ ಎಚ್ಚರವಹಿಸಿ. 2 ತಿಂಗಳಿಗೊಮ್ಮೆ ಮಳೆಗಾಲದಲ್ಲಿ ತಪ್ಪದೆ ಬೋರ್ಡೊ ದ್ರಾವಣ ಸಿಂಪಡಿಸಿರಿ. 200 ಮಿ.ಲೀ. 8 ದಿನ ಹುದುಗಿಸಿದ ಹುಳಿ ಮೊಸರನ್ನು 4 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ.</p>.<p><span style="color:#ff0000;"><strong>ಮಾದೇವಪ್ಪ ರಾಜಕುಮಾರ್,- ಗೋಣಿಕೊಪ್ಪಲು</strong></span><br /> <strong>ನಮ್ಮ ಭಾಗದಲ್ಲಿ ಬಹಳ ಜನ ನಿಂಬೆ, ಮೂಸಂಬಿ, ಗಜನಿಂಬೆ ಬೆಳೆದಿದ್ದಾರೆ. ಇವುಗಳಿಗೆ ಒಂದು ರೀತಿ ಕಜ್ಜಿ ಕಾಣಿಸಿಕೊಂಡು ಗಿಡವೂ ಬೆಳೆಯುತ್ತಿಲ್ಲ. ಇಳುವರಿಯೂ ಕಡಿಮೆಯಾಗುತ್ತಿದೆ. ನಾವು ಒಂದೆರಡು ಬಾರಿ ಕೀಟನಾಶಕವನ್ನೂ ಸಿಂಪಡಿಸಿದೆವು. ಆದರೂ ಪ್ರಯೋಜನವಾಗಿಲ್ಲ. ಏನು ಮಾಡುವುದು ತಿಳಿಸಿ.</strong><br /> ಉ: ಎಲ್ಲಾ ನಿಂಬೆ ಜಾತಿ (ಸಿಟ್ರಸ್) ಬೆಳೆಗಳಿಗೂ 20 ದಿನಕ್ಕೊಮ್ಮೆ 10 ಲೀಟರ್ ಗಂಜಲದಲ್ಲಿ 100 ಗ್ರಾಂ ಮೈಲು ತುತ್ತವನ್ನು 1 ರಾತ್ರಿ ನೆನೆಸಿಟ್ಟು 50 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಿಸಿ. ಕಾಯಿ ಕಜ್ಜಿ – ಎಲೆ ಮುರುಟಿಕೊಳ್ಳುವ ಬಾಧೆ ನಿವಾರಿಸಬಹುದು.</p>.<p><span style="color:#ff0000;"><strong>ರಮ್ಯಾ ಜೆ.ಎಂ,- ಕೊಡಗು</strong></span><br /> <strong>ನಾನು ಸಾವಯವ ಬೇಸಾಯಗಾರ. ಅಜೋಸ್ಪೇರಿಲಂ ಎಂಬ ಗೊಬ್ಬರದ ಬಳಕೆಯನ್ನು ಏಕದಳ ಧಾನ್ಯಗಳಿಗೆ ಬಳಸಿರಿ ಎಂದು ಹೇಳುತ್ತಾರೆ. ಇದು ಹೇಗೆ ವಿವರವನ್ನು ತಿಳಿಸಿ.</strong><br /> ಉ: ಅಜೋಸ್ಪೆರಿಲಂ ಏಕದಳ ಧಾನ್ಯದ ಬೇರುಗಳಲ್ಲಿದ್ದುಕೊಂಡು ವಾತಾವರಣದಿಂದ ಸಾರಜನಕವನ್ನು ಹೀರಿಕೊಂಡು ಬೆಳೆಗೆ ಒದಗಿಸುವ ಸೂಕ್ಷ್ಮಾಣು. ಇದನ್ನು ಬೀಜೋಪಚಾರದಿಂದ, ಬೇರು ಅದ್ದಿ ತೆಗೆದು ನಾಟಿ ಮಾಡುವುದು.<br /> 15 ಕೆ.ಜಿ. ಚೆನ್ನಾಗಿ ಕಳಿತ ಗೊಬ್ಬರದ ಜತೆ ಬೆರೆಸಿ ತಂಪಾದ ವಾತಾವರಣದಲ್ಲಿ ಭೂಮಿಗೂ ಸೇರಿಸಬಹುದು.</p>.<p><span style="color:#ff0000;"><strong>ದಿನೇಶ್ ರಾವ್-, ಹುಬ್ಬಳ್ಳಿ</strong></span><br /> <strong>ನಾವು ಇತ್ತೀಚೆಗೆ ಪ್ರತಿ ವರ್ಷವೂ ಶುಂಠಿಯನ್ನು ಬೆಳೆಯುತ್ತೇವೆ. ಈಗಲೂ ಸುಮಾರು ಎರಡು ಎಕರೆ ಶುಂಠಿ ಬೆಳೆದಿದ್ದೇವೆ. ಇದರ ಎಲೆಗಳು ಉದುರಿ ಬೀಳುತ್ತಿವೆ. ಏನು ಮಾಡುವುದು ತಿಳಿಸಿ.</strong><br /> ಉ: ಈಗ ಶುಂಠಿ ಬೆಳೆಯುವ ಹಂತ ಮುಗಿದು ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬೀಳುವ ಕಾಲ. ಒಂದು ವೇಳೆ ಶುಂಠಿ ಬೆಳೆ 5–6 ತಿಂಗಳ ವಯಸ್ಸಿಗೆ ಮೊದಲೇ ಈ ತೊಂದರೆಯಿದ್ದರೆ ರೋಗವಿರಬಹುದು. ರೋಗ ನಾಶಕ ಬಳಸಿರಿ.</p>.<p><span style="color:#ff0000;"><strong>ಪಾಟಲಿಪುತ್ರಪ್ಪ-, ತಲಕಾಡು</strong></span><br /> <strong>ನಾನು ಅರ್ಧ ಎಕರೆಯಲ್ಲಿ ಏಲಕ್ಕಿ ಬೆಳೆದಿದ್ದೇನೆ. ಇನ್ನೂ ಒಂದೂವರೆ ಎಕರೆಯಲ್ಲಿ ಬೆಳೆಯಬೇಕೆಂದಿದ್ದೇನೆ. ಸಸಿಗಳನ್ನು ಬೆಳೆಸಿಕೊಳ್ಳುವ ವಿಧಾನ ತಿಳಿಸಿರಿ.</strong><br /> ಉ: ಏಲಕ್ಕಿಯನ್ನು ನೀವು ಬೆಳೆಸಿ ಸಸಿ ಮಾಡುವುದಕ್ಕಿಂತ ಏಲಕ್ಕಿ ಮಂಡಳಿ (ಸ್ಪೈಸ್) ಅವರಿಂದ ಉತ್ತಮವಾದ ಸಸಿ ತರುವುದು ವಾಸಿ.</p>.<p><span style="color:#ff0000;"><strong>ಮನೋಜ್ ಕುಮಾರ್,- ಮಂಗಳೂರು</strong></span><br /> <strong>ನುಗ್ಗೆ ಬೆಳೆಗೆ ಮಿಶ್ರ ಬೆಳೆಯಾಗಿ ಲವಂಗ ಬೆಳೆಯಬಹುದೇ?</strong><br /> ನುಗ್ಗೆ ಗಿಡದ ನೆರಳಲ್ಲಿ ಲವಂಗ ಮಿಶ್ರ ಬೆಳೆಯಾಗಿ ಬೆಳೆಯಬಹುದು. ನುಗ್ಗೆ ಗಿಡ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಬೇಸಿಗೆಯಲ್ಲಿ 15 ದಿನಕ್ಕೊಮ್ಮೆ ನೀರು ಕೊಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="color:#ff0000;"><strong>ಎಂ.ಎನ್.ಹೆಗಡೆ, ಶಿರಸಿ</strong></span><br /> <strong>ನಮ್ಮಲ್ಲಿ ಐದು ಹಸುಗಳಿವೆ. ಇತ್ತೀಚೆಗೆ ಒಂದು ಹಸು ಆಹಾರ ತಿನ್ನದೇ ಮೈಯೆಲ್ಲ ದದ್ದರಿಸಿಕೊಂಡು ಸತ್ತು ಹೋಯಿತು. ಇದಕ್ಕೆ ಏನು ಕಾರಣ. ಮುಂದೆ ಹೀಗಾಗದಂತಿರಲು ಏನು ಮಾಡಬೇಕು.</strong><br /> ಉ: 400 ಕಿ.ಮೀ. ದೂರದಿಂದ ನಿಮ್ಮ ಹಸುವಿನ ಸಾವಿಗೆ ಕಾರಣ ತಿಳಿಸಲಾರೆ. ದಯವಿಟ್ಟು ಹತ್ತಿರದ ಪಶುಸಂಗೋಪನಾ ಇಲಾಖೆಯವರಿಂದ ನಿಮ್ಮ ಉಳಿದ 4 ಹಸುಗಳ ತಪಾಸಣೆ ಮಾಡಿಸಿರಿ.</p>.<p><span style="color:#ff0000;"><strong>ಮನೋಜ್ಕುಮಾರ್ ಎಸ್. ಸೂಲಗತ್ತಿ</strong></span><br /> <strong>ಕರಿಮೆಣಸಿನ ಬಳ್ಳಿಗಳು ಬೇರು ಕೊಳೆತು ಒಣಗುತ್ತಿವೆ. ಈ ವರ್ಷ ಮಳೆ ಜಾಸ್ತಿ ಬಂದಿದೆ. ಈ ರೋಗ ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಬರುತ್ತದೆ. ಇದರ ನಿಯಂತ್ರಣ ಹೇಗೆ ತಿಳಿಸಿರಿ. ನಾನು ಸಾವಯವ ಪದ್ಧತಿ ಅನುಸರಿಸುತ್ತಿದ್ದೇನೆ. ಸಾವಯವ ಪದ್ಧತಿಯ ನಿಯಂತ್ರಣ ಕ್ರಮಗಳನ್ನು ತಿಳಿಸಿ.</strong><br /> ಉ: ಕರಿ ಮೆಣಸಿನ ಬಳ್ಳಿಗಳಿಗೆ ಮಳೆಗಾಲದಲ್ಲಿ ಹೆಚ್ಚು ತೇವದ ಬಾಧೆ ಇಲ್ಲದಂತೆ ಎಚ್ಚರವಹಿಸಿ. 2 ತಿಂಗಳಿಗೊಮ್ಮೆ ಮಳೆಗಾಲದಲ್ಲಿ ತಪ್ಪದೆ ಬೋರ್ಡೊ ದ್ರಾವಣ ಸಿಂಪಡಿಸಿರಿ. 200 ಮಿ.ಲೀ. 8 ದಿನ ಹುದುಗಿಸಿದ ಹುಳಿ ಮೊಸರನ್ನು 4 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ.</p>.<p><span style="color:#ff0000;"><strong>ಮಾದೇವಪ್ಪ ರಾಜಕುಮಾರ್,- ಗೋಣಿಕೊಪ್ಪಲು</strong></span><br /> <strong>ನಮ್ಮ ಭಾಗದಲ್ಲಿ ಬಹಳ ಜನ ನಿಂಬೆ, ಮೂಸಂಬಿ, ಗಜನಿಂಬೆ ಬೆಳೆದಿದ್ದಾರೆ. ಇವುಗಳಿಗೆ ಒಂದು ರೀತಿ ಕಜ್ಜಿ ಕಾಣಿಸಿಕೊಂಡು ಗಿಡವೂ ಬೆಳೆಯುತ್ತಿಲ್ಲ. ಇಳುವರಿಯೂ ಕಡಿಮೆಯಾಗುತ್ತಿದೆ. ನಾವು ಒಂದೆರಡು ಬಾರಿ ಕೀಟನಾಶಕವನ್ನೂ ಸಿಂಪಡಿಸಿದೆವು. ಆದರೂ ಪ್ರಯೋಜನವಾಗಿಲ್ಲ. ಏನು ಮಾಡುವುದು ತಿಳಿಸಿ.</strong><br /> ಉ: ಎಲ್ಲಾ ನಿಂಬೆ ಜಾತಿ (ಸಿಟ್ರಸ್) ಬೆಳೆಗಳಿಗೂ 20 ದಿನಕ್ಕೊಮ್ಮೆ 10 ಲೀಟರ್ ಗಂಜಲದಲ್ಲಿ 100 ಗ್ರಾಂ ಮೈಲು ತುತ್ತವನ್ನು 1 ರಾತ್ರಿ ನೆನೆಸಿಟ್ಟು 50 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಿಸಿ. ಕಾಯಿ ಕಜ್ಜಿ – ಎಲೆ ಮುರುಟಿಕೊಳ್ಳುವ ಬಾಧೆ ನಿವಾರಿಸಬಹುದು.</p>.<p><span style="color:#ff0000;"><strong>ರಮ್ಯಾ ಜೆ.ಎಂ,- ಕೊಡಗು</strong></span><br /> <strong>ನಾನು ಸಾವಯವ ಬೇಸಾಯಗಾರ. ಅಜೋಸ್ಪೇರಿಲಂ ಎಂಬ ಗೊಬ್ಬರದ ಬಳಕೆಯನ್ನು ಏಕದಳ ಧಾನ್ಯಗಳಿಗೆ ಬಳಸಿರಿ ಎಂದು ಹೇಳುತ್ತಾರೆ. ಇದು ಹೇಗೆ ವಿವರವನ್ನು ತಿಳಿಸಿ.</strong><br /> ಉ: ಅಜೋಸ್ಪೆರಿಲಂ ಏಕದಳ ಧಾನ್ಯದ ಬೇರುಗಳಲ್ಲಿದ್ದುಕೊಂಡು ವಾತಾವರಣದಿಂದ ಸಾರಜನಕವನ್ನು ಹೀರಿಕೊಂಡು ಬೆಳೆಗೆ ಒದಗಿಸುವ ಸೂಕ್ಷ್ಮಾಣು. ಇದನ್ನು ಬೀಜೋಪಚಾರದಿಂದ, ಬೇರು ಅದ್ದಿ ತೆಗೆದು ನಾಟಿ ಮಾಡುವುದು.<br /> 15 ಕೆ.ಜಿ. ಚೆನ್ನಾಗಿ ಕಳಿತ ಗೊಬ್ಬರದ ಜತೆ ಬೆರೆಸಿ ತಂಪಾದ ವಾತಾವರಣದಲ್ಲಿ ಭೂಮಿಗೂ ಸೇರಿಸಬಹುದು.</p>.<p><span style="color:#ff0000;"><strong>ದಿನೇಶ್ ರಾವ್-, ಹುಬ್ಬಳ್ಳಿ</strong></span><br /> <strong>ನಾವು ಇತ್ತೀಚೆಗೆ ಪ್ರತಿ ವರ್ಷವೂ ಶುಂಠಿಯನ್ನು ಬೆಳೆಯುತ್ತೇವೆ. ಈಗಲೂ ಸುಮಾರು ಎರಡು ಎಕರೆ ಶುಂಠಿ ಬೆಳೆದಿದ್ದೇವೆ. ಇದರ ಎಲೆಗಳು ಉದುರಿ ಬೀಳುತ್ತಿವೆ. ಏನು ಮಾಡುವುದು ತಿಳಿಸಿ.</strong><br /> ಉ: ಈಗ ಶುಂಠಿ ಬೆಳೆಯುವ ಹಂತ ಮುಗಿದು ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬೀಳುವ ಕಾಲ. ಒಂದು ವೇಳೆ ಶುಂಠಿ ಬೆಳೆ 5–6 ತಿಂಗಳ ವಯಸ್ಸಿಗೆ ಮೊದಲೇ ಈ ತೊಂದರೆಯಿದ್ದರೆ ರೋಗವಿರಬಹುದು. ರೋಗ ನಾಶಕ ಬಳಸಿರಿ.</p>.<p><span style="color:#ff0000;"><strong>ಪಾಟಲಿಪುತ್ರಪ್ಪ-, ತಲಕಾಡು</strong></span><br /> <strong>ನಾನು ಅರ್ಧ ಎಕರೆಯಲ್ಲಿ ಏಲಕ್ಕಿ ಬೆಳೆದಿದ್ದೇನೆ. ಇನ್ನೂ ಒಂದೂವರೆ ಎಕರೆಯಲ್ಲಿ ಬೆಳೆಯಬೇಕೆಂದಿದ್ದೇನೆ. ಸಸಿಗಳನ್ನು ಬೆಳೆಸಿಕೊಳ್ಳುವ ವಿಧಾನ ತಿಳಿಸಿರಿ.</strong><br /> ಉ: ಏಲಕ್ಕಿಯನ್ನು ನೀವು ಬೆಳೆಸಿ ಸಸಿ ಮಾಡುವುದಕ್ಕಿಂತ ಏಲಕ್ಕಿ ಮಂಡಳಿ (ಸ್ಪೈಸ್) ಅವರಿಂದ ಉತ್ತಮವಾದ ಸಸಿ ತರುವುದು ವಾಸಿ.</p>.<p><span style="color:#ff0000;"><strong>ಮನೋಜ್ ಕುಮಾರ್,- ಮಂಗಳೂರು</strong></span><br /> <strong>ನುಗ್ಗೆ ಬೆಳೆಗೆ ಮಿಶ್ರ ಬೆಳೆಯಾಗಿ ಲವಂಗ ಬೆಳೆಯಬಹುದೇ?</strong><br /> ನುಗ್ಗೆ ಗಿಡದ ನೆರಳಲ್ಲಿ ಲವಂಗ ಮಿಶ್ರ ಬೆಳೆಯಾಗಿ ಬೆಳೆಯಬಹುದು. ನುಗ್ಗೆ ಗಿಡ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಬೇಸಿಗೆಯಲ್ಲಿ 15 ದಿನಕ್ಕೊಮ್ಮೆ ನೀರು ಕೊಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>