<p>ಸಾಮಾನ್ಯವಾಗಿ ಮಲೆನಾಡಿನ ಕೃಷಿಕರು ಬೆಟ್ಟ-ಬ್ಯಾಣಗಳಲ್ಲಿಯೇ ವಿವಿಧ ಹಣ್ಣು ಹಂಪಲಿನ ಗಿಡಗಳನ್ನು ನೆಟ್ಟು ಆರೈಕೆ ಮಾಡುತ್ತಾರೆ. ಆದರೆ ಹುಲುಸಾಗಿ ಚಿಗುರುತ್ತಿರುವ ಆ ಗಿಡಗಳನ್ನು ದನಕರುಗಳು, ಮಂಗಗಳು ತಿನ್ನುತ್ತವೆ. ಅವುಗಳ ಕಾಟದಿಂದ ಪಾರಾಗಲು ವಿವಿಧ ವಿಧಾನ ಅನುಸರಿಸಿದರೂ ಪ್ರಯೋಜನವಾಗುತ್ತಿಲ್ಲ. ಪ್ರತಿಯೊಂದು ಗಿಡಕ್ಕೂ ಬೇಲಿ ಹಾಕುವುದು ಸಹ ಈ ಕಾಲದಲ್ಲಿ ದುಬಾರಿ ಕೆಲಸವೇ.<br /> <br /> ಆದರೆ ಮನಸ್ಸಿದ್ದರೆ ಮಾರ್ಗವೂ ಉಂಟು ಎನ್ನುವ ಮಾತಿನಂತೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಅನೇಕ ರೈತರು ಬೆಟ್ಟ ಬ್ಯಾಣಗಳಲ್ಲಿ ನೆಟ್ಟ ಗಿಡಗಳನ್ನು ಸಂರಕ್ಷಿಸಲು ಪರ್ಯಾಯ ವ್ಯವಸ್ಥೆ ಕಂಡುಕೊಂಡಿದ್ದಾರೆ.<br /> <br /> ಅದೇನೆಂದರೆ ಮೀನಿನ ಬಲೆಯನ್ನು ಗಿಡದ ಮೇಲೆ ಮತ್ತು ಸುತ್ತ ಜೋಡಿಸುವುದು. ಇದರಿಂದ ಸಸಿಗೆ ಗಾಳಿ, ಬೆಳಕು, ಬಿಸಿಲು, ಮಳೆಯ ಅಭಾವವೂ ಆಗುವುದಿಲ್ಲ. <br /> <br /> ಪ್ರಾಣಿಗಳು, ಮಂಗಗಳಿಂದ ಸಂಪೂರ್ಣ ರಕ್ಷಣೆ ಸಿಗುತ್ತದೆ. ಅಲ್ಲದೇ ಖರ್ಚೂ ಕಡಿಮೆ. ಏಕೆಂದರೆ ಮೀನುಗಾರರು ಉಪಯೋಗಿಸಿ ಬಿಟ್ಟ ಬಲೆಯು ಈಗ ತೀರಾ ಅಗ್ಗದ ದರದಲ್ಲಿ ಲಭಿಸುತ್ತದೆ. ಅದನ್ನೇ ಇಲ್ಲಿ ಬಳಸಬಹುದು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಮಾನ್ಯವಾಗಿ ಮಲೆನಾಡಿನ ಕೃಷಿಕರು ಬೆಟ್ಟ-ಬ್ಯಾಣಗಳಲ್ಲಿಯೇ ವಿವಿಧ ಹಣ್ಣು ಹಂಪಲಿನ ಗಿಡಗಳನ್ನು ನೆಟ್ಟು ಆರೈಕೆ ಮಾಡುತ್ತಾರೆ. ಆದರೆ ಹುಲುಸಾಗಿ ಚಿಗುರುತ್ತಿರುವ ಆ ಗಿಡಗಳನ್ನು ದನಕರುಗಳು, ಮಂಗಗಳು ತಿನ್ನುತ್ತವೆ. ಅವುಗಳ ಕಾಟದಿಂದ ಪಾರಾಗಲು ವಿವಿಧ ವಿಧಾನ ಅನುಸರಿಸಿದರೂ ಪ್ರಯೋಜನವಾಗುತ್ತಿಲ್ಲ. ಪ್ರತಿಯೊಂದು ಗಿಡಕ್ಕೂ ಬೇಲಿ ಹಾಕುವುದು ಸಹ ಈ ಕಾಲದಲ್ಲಿ ದುಬಾರಿ ಕೆಲಸವೇ.<br /> <br /> ಆದರೆ ಮನಸ್ಸಿದ್ದರೆ ಮಾರ್ಗವೂ ಉಂಟು ಎನ್ನುವ ಮಾತಿನಂತೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಅನೇಕ ರೈತರು ಬೆಟ್ಟ ಬ್ಯಾಣಗಳಲ್ಲಿ ನೆಟ್ಟ ಗಿಡಗಳನ್ನು ಸಂರಕ್ಷಿಸಲು ಪರ್ಯಾಯ ವ್ಯವಸ್ಥೆ ಕಂಡುಕೊಂಡಿದ್ದಾರೆ.<br /> <br /> ಅದೇನೆಂದರೆ ಮೀನಿನ ಬಲೆಯನ್ನು ಗಿಡದ ಮೇಲೆ ಮತ್ತು ಸುತ್ತ ಜೋಡಿಸುವುದು. ಇದರಿಂದ ಸಸಿಗೆ ಗಾಳಿ, ಬೆಳಕು, ಬಿಸಿಲು, ಮಳೆಯ ಅಭಾವವೂ ಆಗುವುದಿಲ್ಲ. <br /> <br /> ಪ್ರಾಣಿಗಳು, ಮಂಗಗಳಿಂದ ಸಂಪೂರ್ಣ ರಕ್ಷಣೆ ಸಿಗುತ್ತದೆ. ಅಲ್ಲದೇ ಖರ್ಚೂ ಕಡಿಮೆ. ಏಕೆಂದರೆ ಮೀನುಗಾರರು ಉಪಯೋಗಿಸಿ ಬಿಟ್ಟ ಬಲೆಯು ಈಗ ತೀರಾ ಅಗ್ಗದ ದರದಲ್ಲಿ ಲಭಿಸುತ್ತದೆ. ಅದನ್ನೇ ಇಲ್ಲಿ ಬಳಸಬಹುದು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>