ದ್ರಾಕ್ಷಿ ಬೆಳೆಗೆ ನಾಜೂಕತನ ಮುಖ್ಯ. ಆದ್ದರಿಂದ ಈ ಬೆಳೆಯನ್ನು ಬೆಳೆಯುವ ರೈತರ ಸಂಖ್ಯೆ ತುಂಬಾ ಕಡಿಮೆ. ಆದರೆ ಈ ಬೆಳೆಯನ್ನು ಬೆಳೆದು ಯಶ ಸಾಧಿಸಿದ್ದಾರೆ ಮಹಾರಾಷ್ಟ್ರದ ದಿಂಡೋರಿ ತಾಲ್ಲೂಕಿನ ಹತನೊರು ಹಳ್ಳಿಯ ರೈತ ಯೋಗೇಶ್ ಪವಾರ. ಮೂರು ವರ್ಷಗಳಲ್ಲಿ ನಾಲ್ಕು ಲಕ್ಷ ಆದಾಯ ಪಡೆದಿದ್ದಾರೆ ಇವರು.
ಹನಿ ನೀರಾವರಿ ಯೋಜನೆಯನ್ನು ಅಳವಡಿಸಿ ರಾಸಾಯನಿಕ ಗೊಬ್ಬರ ಹಾಗೂ ಆಕಳ ಗೊಬ್ಬರ ಬಳಸಿ ಭೂಮಿಯನ್ನು ಫಲವತ್ತಾಗಿ ಮಾಡಿದ್ದಾರೆ. `ಗಿಡದಿಂದ ಗಿಡಕ್ಕೆ ನಾಲ್ಕೂವರೆ ಅಡಿ ಅಂತರ ಇರಬೇಕು.