ನಾಟಕದ ವಿಷಯ: ಬ್ರಿಟಿಷರ ಆಡಳಿತದ ಅವಧಿಯಲ್ಲಿ ಪ್ರತಿ ಭಾರತೀಯ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತು. ಮಲೆನಾಡಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯ ಮಾಡಲೆಂದೇ ವೃದ್ಧೆ ತನ್ನ ಗುಡಿಸಲನ್ನು ಹೋಟೆಲ್ ಆಗಿ ಮಾರ್ಪಡಿಸಿಕೊಂಡಿದ್ದಳು. ಬ್ರಿಟಿಷರ ಪಾಶವೀ ಕೃತ್ಯಕ್ಕೆ ಆಕೆಯ ಮಗ ಬಲಿಯಾಗುವ ಕಥಾನಕವಿದು.