ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪದ ಸೃಷ್ಟಿ: ದೇವವಟ್ಟೆ

Published 4 ಫೆಬ್ರುವರಿ 2024, 0:00 IST
Last Updated 4 ಫೆಬ್ರುವರಿ 2024, 0:00 IST
ಅಕ್ಷರ ಗಾತ್ರ

ದೇವವಟ್ಟೆ

ದೇವವಟ್ಟೆ (ನಾ). ದೇವಲೋಕದ ಹಾದಿ


ದಶರಥನು ಗುರುಗಳಾದ ವಾಮದೇವ, ವಸಿಷ್ಠ ಹಾಗೂ ಸಚಿವರನ್ನು ಕರೆಸಿ, ತನ್ನ ಬಾಳ ಬಯಕೆಯನ್ನು ಹೀಗೆ ತಿಳಿಸುವನು: ‘ಓ ವಂದ್ಯರಿರ, ಬಾಳಿಗೆ ಕಣ್ಣಿನಂತಿರುವ ಕಂದರನ್ನು ಪಡೆಯುವ ದೇವಮಾರ್ಗವನ್ನು ನನಗೆ ತಿಳಿಸಿ. ನನ್ನ ಎದೆಯ ಬೆಂಕಿಯನ್ನು ಆರಿಸಿ ಸುಗ್ಗಿಯನ್ನು ತನ್ನಿ.’
ಆ ಸಂದರ್ಭದಲ್ಲಿ ಕುವೆಂಪು ಅವರು ‘ದೇವಮಾರ್ಗ’ವನ್ನು ‘ದೇವವಟ್ಟೆ’ ಪದದಿಂದ ಅಭಿವ್ಯಕ್ತಿಸಿದ್ದಾರೆ.

‘ದೇವವಟ್ಟೆಯನುಸಿರಿಮೆನಗೆ, ಓ ವಂದ್ಯರಿರ;
ತವಿಸಿಮೆನ್ನೆದೆಯಗ್ಗಿಯಂ, ಬರಿಸಿ ಸುಗ್ಗಿಯಂ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT