ದಶರಥನು ಗುರುಗಳಾದ ವಾಮದೇವ, ವಸಿಷ್ಠ ಹಾಗೂ ಸಚಿವರನ್ನು ಕರೆಸಿ, ತನ್ನ ಬಾಳ ಬಯಕೆಯನ್ನು ಹೀಗೆ ತಿಳಿಸುವನು: ‘ಓ ವಂದ್ಯರಿರ, ಬಾಳಿಗೆ ಕಣ್ಣಿನಂತಿರುವ ಕಂದರನ್ನು ಪಡೆಯುವ ದೇವಮಾರ್ಗವನ್ನು ನನಗೆ ತಿಳಿಸಿ. ನನ್ನ ಎದೆಯ ಬೆಂಕಿಯನ್ನು ಆರಿಸಿ ಸುಗ್ಗಿಯನ್ನು ತನ್ನಿ.’
ಆ ಸಂದರ್ಭದಲ್ಲಿ ಕುವೆಂಪು ಅವರು ‘ದೇವಮಾರ್ಗ’ವನ್ನು ‘ದೇವವಟ್ಟೆ’ ಪದದಿಂದ ಅಭಿವ್ಯಕ್ತಿಸಿದ್ದಾರೆ.