ರಂಗಚಂದಿರ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ಫೆ.17 ಶನಿವಾರ ಉಪನ್ಯಾಸ, ಅಭಿನಂದನೆ ಹಾಗೂ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಜೆ 6 ಗಂಟೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಅಭಿನಂದನೆ ಕಾರ್ಯಕ್ರಮವಿದೆ. ಸಂಗೀತ ವಿದ್ವಾಂಸರಾದ ವಿದ್ಯಾಭೂಷಣ ಅವರು ಅಭಿನಂದಿಸಲಿದ್ದಾರೆ. ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಧರಣೀದೇವಿ ಮಾಲಗತ್ತಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿ.ಎನ್.ಮೋಹನ್, ಬಹುರೂಪಿ ಪ್ರಕಾಶನ, ಆರ್.ಕೆ.ಹೆಗಡೆ, ಗೌರವಾಧ್ಯಕ್ಷರು, ರಂಗಚಂದಿರ ಭಾಗವಹಿಸಲಿದ್ದಾರೆ. ನ. ರವಿಕುಮಾರ. ಅಭಿನವ, ಬೆಂಗಳೂರು ಇವರು ಸಂಯೋಜನೆ ಮಾಡಿದ್ದಾರೆ. ಸಂಜೆ:5
ನಂತರ, ಲಕ್ಷ್ಮೀಶ ತೋಳ್ಳಾಡಿ ಅವರಿಂದ ‘ಮಹಾಭಾರತದಲ್ಲಿ ಮಾತು ಮತ್ತು ಮೌನ’ ಉಪನ್ಯಾಸ. ಸಂಜೆ 6.30 ಗಂಟೆಗೆ ಸಂಜೆ 7 ರಿಂದ 8ರ ವರೆಗೆ ಉಡುಪಿಯ ಥಿಯೇಟರ್ ಯಕ್ಷ ಸಂಸ್ಥೆಯಿಂದ ಚಕ್ರವ್ಯೂಹ ಯಕ್ಷಗಾನ ಪ್ರಸ್ತುತಿ ಇದೆ.
ನಮ್ಮೊಂದಿಗೆ ಡಾ. ಸುಂದರ್ ಸರುಕ್ಕೆ, ಡಾ. ಎ.ನಾರಾಯಣ, ಶಶಿಧರ ಅಡಪ, ಸಚ್ಚಿದಾನಂದ ಹೆಗಡೆ, ಎಂಎಎನ್ ಇಸ್ಮಾಯಿಲ್, ಪುರುಷೋತ್ತಮ ಅವರು ಭಾಗವಹಿಸಲಿದ್ದಾರೆ ಎಂದು ರಂಗಚಂದಿರ ಕಾರ್ಯದರ್ಶಿ ಜಿಪಿಒ ಚಂದ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.