<p>2015ನೆಯ ಇಸವಿಯ ಒಂದು ದಿನ ಬೆಳಿಗ್ಗೆ ಅಂಕಿತ್ ಅಗರ್ವಾಲ್ ಮತ್ತು ಆತನ ಸ್ನೇಹಿತ ಕಾನ್ಪುರದಲ್ಲಿ ಗಂಗಾ ನದಿಯ ದಂಡೆಯ ಮೇಲೆ ಕುಳಿತಿದ್ದರು. ಕಾನ್ಪುರ ಈ ಸ್ನೇಹಿತರ ಊರು ಕೂಡ ಹೌದು. ನದಿಯ ನೀರು ಕಲುಷಿತ ಆಗಿರುವುದು ಮೇಲ್ನೋಟಕ್ಕೇ ಗೊತ್ತಾಗುವಂತೆ ಇತ್ತು. ಆದರೂ ಭಕ್ತರು ನದಿಯ ನೀರಿನಲ್ಲಿ ಮುಳುಗುಹಾಕಿ, ಆ ನೀರನ್ನು ಕುಡಿಯುತ್ತಿದ್ದುದನ್ನು ನೋಡಿ ಇಬ್ಬರೂ ಸ್ನೇಹಿತರು ಬೇಸರಗೊಂಡರು.</p>.<p>ಭಕ್ತರು ಮತ್ತು ದೇವಸ್ಥಾನಗಳು ನದಿ ನೀರಿಗೆ ಹೂವುಗಳನ್ನು ಚೆಲ್ಲುತ್ತಿರುವ ಕಾರಣದಿಂದಾಗಿ, ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ ಎಂಬುದನ್ನು ಇವರಿಬ್ಬರೂ ಕಂಡುಕೊಂಡರು. ಆಗ ಅವರಿಗೆ ಹೊಳೆದಿದ್ದು, ಪವಿತ್ರ ಗಂಗೆಯ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಸಹಾಯವಾಗುವ ಒಂದು ಉಪಾಯ.</p>.<p>‘ಹೆಲ್ಪ್ಅಸ್ಗ್ರೀನ್’ (ಎಚ್ಯುಜಿ) ಹುಟ್ಟಿಕೊಂಡಿದ್ದು ಈ ಮೂಲಕ. ತನ್ನ ಬಾಲ್ಯ ಸ್ನೇಹಿತ ಕರಣ್ ರಸ್ತೋಗಿ ಜೊತೆ ಸೇರಿ ಅಂಕಿತ್, ತ್ಯಾಜ್ಯದ ರೀತಿಯಲ್ಲಿ ಎಸೆಯಲಾದ ಹೂವುಗಳನ್ನು ಪುನರ್ಬಳಕೆ ಮಾಡುವ ಆಲೋಚನೆಯನ್ನು ಅನುಷ್ಠಾನಕ್ಕೆ ತಂದರು. ತಿಂಗಳುಗಳ ಕಾಲ ಸಂಶೋಧನೆ ನಡೆಸಿದ ಈ ಇಬ್ಬರು, ಹೂವುಗಳನ್ನು ಬಳಸಿ ಅಗರಬತ್ತಿ ಹಾಗೂ ಸಾವಯವ ಗೊಬ್ಬರ ಮಾಡುವ ವಿಧಾನವನ್ನು ಅಭಿವೃದ್ಧಿಪಡಿಸಿದರು.</p>.<p>ಅವರು ತಾವು ಅಭಿವೃದ್ಧಿಪಡಿಸಿದ ವಿಧಾನವನ್ನು ‘ಹೂಬಳಕೆ’ ಎಂದು ಕರೆದುಕೊಂಡಿದ್ದಾರೆ. ಇದು ತ್ಯಾಜ್ಯದ ರೂಪದಲ್ಲಿ ಎಸೆಯುವ ಹೂವುಗಳನ್ನು ಮರುಬಳಕೆ ಮಾಡಿಕೊಳ್ಳುವ ಲಾಭದಾಯಕ ಮಾರ್ಗವೂ ಹೌದು.</p>.<p>ಮಹಿಳಾ ಕೆಲಸಗಾರರು ದೇವಸ್ಥಾನಗಳು ಹಾಗೂ ಮಸೀದಿಗಳಿಂದ ಹೂವುಗಳನ್ನು ಸಂಗ್ರಹಿಸಿ ತರುತ್ತಾರೆ. ಆ ಹೂವುಗಳನ್ನು ವಿಂಗಡಣೆ ಮಾಡಲಾಗುತ್ತದೆ. ನಂತರ ಅವುಗಳ ಮೇಲೆ ಜೈವಿಕ ದ್ರಾವಣ ಸಿಂಪಡಿಸಲಾಗುತ್ತದೆ. ನಂತರ ಆ ಹೂವುಗಳನ್ನು ತೊಳೆದು, ಅದಕ್ಕೆ ಬಳಕೆಯಾದ ನೀರನ್ನು ಗೊಬ್ಬರ ಮಾಡುವ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲಾಗುತ್ತದೆ.</p>.<p>ಹೂವಿನ ದಳಗಳನ್ನು ಒಣಗಿಸಿ, ಕುಟ್ಟಿ ಪುಡಿ ಮಾಡಿ, ಹಿಟ್ಟಿನ ಹದಕ್ಕೆ ತರಲಾಗುತ್ತದೆ. ಅದನ್ನು ಅಗರಬತ್ತಿ ಸಿದ್ಧಪಡಿಸಲು ಬಳಸಲಾಗುತ್ತದೆ. ಹೂವುಗಳ ಹಸಿರು ಭಾಗಗಳಿಂದ ಗೊಬ್ಬರ ತಯಾರಿಸಲಾಗುತ್ತದೆ.</p>.<p>‘ಹೂಬಳಕೆ’ ಪ್ರಕ್ರಿಯೆಯನ್ನು ಇನ್ನೊಂದು ಹಂತಕ್ಕೆ ಒಯ್ದಿರುವ ಈ ಸ್ನೇಹಿತರು, ‘ಫ್ಲೋರಾಫೋಮ್’ ಎನ್ನುವ ಹೂವಿನಿಂದ ಸಿದ್ಧಪಡಿಸಿದ ವಿಶ್ವದ ಮೊದಲ ಥರ್ಮಾಕೋಲ್ ಸಿದ್ಧಪಡಿಸಿದ್ದಾರೆ. ಇದು ಕೊಳೆತು ಮಣ್ಣಿಗೆ ಸೇರುವ ಗುಣ ಹೊಂದಿದೆ ಕೂಡ. ಇದನ್ನು ಸಿದ್ಧಪಡಿಸಲು ಐಐಟಿಯ ಕೆಲವು ಎಂಜಿನಿಯರ್ಗಳ ಸಹಾಯವನ್ನು ಪಡೆಯಲಾಗಿತ್ತು.</p>.<p>ಇವರು ಈಗ ಕೃತಕ ಚರ್ಮವನ್ನು ಸಿದ್ಧಪಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಎಚ್ಯುಜಿ ಸಂಸ್ಥೆಗೆ ವಿಶ್ವಸಂಸ್ಥೆಯ ಪ್ರಶಸ್ತಿ ಕೂಡ ಲಭಿಸಿದೆ. ಇದು ಈಗ ಗಂಗಾ ನದಿ ಹರಿಯುವ ಇತರ ಕಡೆಗಳಲ್ಲೂ ತನ್ನ ಚಟುವಟಿಕೆ ವಿಸ್ತರಿಸುವ ಚಿಂತನೆಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>2015ನೆಯ ಇಸವಿಯ ಒಂದು ದಿನ ಬೆಳಿಗ್ಗೆ ಅಂಕಿತ್ ಅಗರ್ವಾಲ್ ಮತ್ತು ಆತನ ಸ್ನೇಹಿತ ಕಾನ್ಪುರದಲ್ಲಿ ಗಂಗಾ ನದಿಯ ದಂಡೆಯ ಮೇಲೆ ಕುಳಿತಿದ್ದರು. ಕಾನ್ಪುರ ಈ ಸ್ನೇಹಿತರ ಊರು ಕೂಡ ಹೌದು. ನದಿಯ ನೀರು ಕಲುಷಿತ ಆಗಿರುವುದು ಮೇಲ್ನೋಟಕ್ಕೇ ಗೊತ್ತಾಗುವಂತೆ ಇತ್ತು. ಆದರೂ ಭಕ್ತರು ನದಿಯ ನೀರಿನಲ್ಲಿ ಮುಳುಗುಹಾಕಿ, ಆ ನೀರನ್ನು ಕುಡಿಯುತ್ತಿದ್ದುದನ್ನು ನೋಡಿ ಇಬ್ಬರೂ ಸ್ನೇಹಿತರು ಬೇಸರಗೊಂಡರು.</p>.<p>ಭಕ್ತರು ಮತ್ತು ದೇವಸ್ಥಾನಗಳು ನದಿ ನೀರಿಗೆ ಹೂವುಗಳನ್ನು ಚೆಲ್ಲುತ್ತಿರುವ ಕಾರಣದಿಂದಾಗಿ, ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ ಎಂಬುದನ್ನು ಇವರಿಬ್ಬರೂ ಕಂಡುಕೊಂಡರು. ಆಗ ಅವರಿಗೆ ಹೊಳೆದಿದ್ದು, ಪವಿತ್ರ ಗಂಗೆಯ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಸಹಾಯವಾಗುವ ಒಂದು ಉಪಾಯ.</p>.<p>‘ಹೆಲ್ಪ್ಅಸ್ಗ್ರೀನ್’ (ಎಚ್ಯುಜಿ) ಹುಟ್ಟಿಕೊಂಡಿದ್ದು ಈ ಮೂಲಕ. ತನ್ನ ಬಾಲ್ಯ ಸ್ನೇಹಿತ ಕರಣ್ ರಸ್ತೋಗಿ ಜೊತೆ ಸೇರಿ ಅಂಕಿತ್, ತ್ಯಾಜ್ಯದ ರೀತಿಯಲ್ಲಿ ಎಸೆಯಲಾದ ಹೂವುಗಳನ್ನು ಪುನರ್ಬಳಕೆ ಮಾಡುವ ಆಲೋಚನೆಯನ್ನು ಅನುಷ್ಠಾನಕ್ಕೆ ತಂದರು. ತಿಂಗಳುಗಳ ಕಾಲ ಸಂಶೋಧನೆ ನಡೆಸಿದ ಈ ಇಬ್ಬರು, ಹೂವುಗಳನ್ನು ಬಳಸಿ ಅಗರಬತ್ತಿ ಹಾಗೂ ಸಾವಯವ ಗೊಬ್ಬರ ಮಾಡುವ ವಿಧಾನವನ್ನು ಅಭಿವೃದ್ಧಿಪಡಿಸಿದರು.</p>.<p>ಅವರು ತಾವು ಅಭಿವೃದ್ಧಿಪಡಿಸಿದ ವಿಧಾನವನ್ನು ‘ಹೂಬಳಕೆ’ ಎಂದು ಕರೆದುಕೊಂಡಿದ್ದಾರೆ. ಇದು ತ್ಯಾಜ್ಯದ ರೂಪದಲ್ಲಿ ಎಸೆಯುವ ಹೂವುಗಳನ್ನು ಮರುಬಳಕೆ ಮಾಡಿಕೊಳ್ಳುವ ಲಾಭದಾಯಕ ಮಾರ್ಗವೂ ಹೌದು.</p>.<p>ಮಹಿಳಾ ಕೆಲಸಗಾರರು ದೇವಸ್ಥಾನಗಳು ಹಾಗೂ ಮಸೀದಿಗಳಿಂದ ಹೂವುಗಳನ್ನು ಸಂಗ್ರಹಿಸಿ ತರುತ್ತಾರೆ. ಆ ಹೂವುಗಳನ್ನು ವಿಂಗಡಣೆ ಮಾಡಲಾಗುತ್ತದೆ. ನಂತರ ಅವುಗಳ ಮೇಲೆ ಜೈವಿಕ ದ್ರಾವಣ ಸಿಂಪಡಿಸಲಾಗುತ್ತದೆ. ನಂತರ ಆ ಹೂವುಗಳನ್ನು ತೊಳೆದು, ಅದಕ್ಕೆ ಬಳಕೆಯಾದ ನೀರನ್ನು ಗೊಬ್ಬರ ಮಾಡುವ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲಾಗುತ್ತದೆ.</p>.<p>ಹೂವಿನ ದಳಗಳನ್ನು ಒಣಗಿಸಿ, ಕುಟ್ಟಿ ಪುಡಿ ಮಾಡಿ, ಹಿಟ್ಟಿನ ಹದಕ್ಕೆ ತರಲಾಗುತ್ತದೆ. ಅದನ್ನು ಅಗರಬತ್ತಿ ಸಿದ್ಧಪಡಿಸಲು ಬಳಸಲಾಗುತ್ತದೆ. ಹೂವುಗಳ ಹಸಿರು ಭಾಗಗಳಿಂದ ಗೊಬ್ಬರ ತಯಾರಿಸಲಾಗುತ್ತದೆ.</p>.<p>‘ಹೂಬಳಕೆ’ ಪ್ರಕ್ರಿಯೆಯನ್ನು ಇನ್ನೊಂದು ಹಂತಕ್ಕೆ ಒಯ್ದಿರುವ ಈ ಸ್ನೇಹಿತರು, ‘ಫ್ಲೋರಾಫೋಮ್’ ಎನ್ನುವ ಹೂವಿನಿಂದ ಸಿದ್ಧಪಡಿಸಿದ ವಿಶ್ವದ ಮೊದಲ ಥರ್ಮಾಕೋಲ್ ಸಿದ್ಧಪಡಿಸಿದ್ದಾರೆ. ಇದು ಕೊಳೆತು ಮಣ್ಣಿಗೆ ಸೇರುವ ಗುಣ ಹೊಂದಿದೆ ಕೂಡ. ಇದನ್ನು ಸಿದ್ಧಪಡಿಸಲು ಐಐಟಿಯ ಕೆಲವು ಎಂಜಿನಿಯರ್ಗಳ ಸಹಾಯವನ್ನು ಪಡೆಯಲಾಗಿತ್ತು.</p>.<p>ಇವರು ಈಗ ಕೃತಕ ಚರ್ಮವನ್ನು ಸಿದ್ಧಪಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಎಚ್ಯುಜಿ ಸಂಸ್ಥೆಗೆ ವಿಶ್ವಸಂಸ್ಥೆಯ ಪ್ರಶಸ್ತಿ ಕೂಡ ಲಭಿಸಿದೆ. ಇದು ಈಗ ಗಂಗಾ ನದಿ ಹರಿಯುವ ಇತರ ಕಡೆಗಳಲ್ಲೂ ತನ್ನ ಚಟುವಟಿಕೆ ವಿಸ್ತರಿಸುವ ಚಿಂತನೆಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>