<p><strong>ದಿಟ್ಟಿಸಿಡಿಲು</strong></p>.<p>ದಿಟ್ಟಿಸಿಡಿಲು (ನಾ). ಸಿಡಿಲಿನಂತಹ ನೋಟ</p>.<p>ರಾವಣನು ಸೀತೆಯನ್ನು ಹೊತ್ತುತಂದು ಅಶೋಕವನದಲ್ಲಿರಿಸುವನು. ಅನಂತರ ಮಂಡೋದರಿಯನ್ನು ಕಾಣಲು ಶಿವಾಲಯಕ್ಕೆ ಹೋಗುವನು. ಅವಳು ‘ಹದಿಬದೆಯ ಉರಿ ಲಂಕೆಯನ್ನು ದಹಿಸುವುದಿಲ್ಲವೆ?’ ಎಂದು ಪ್ರಶ್ನಿಸುತ್ತ ಅವನತ್ತ ದಿಟ್ಟ ನೋಟವನ್ನು ಹರಿಸುವಳು. ಆ ಸಂದರ್ಭದಲ್ಲಿ ಕುವೆಂಪು ಅವರು ಆ ದೃಷ್ಟಿಯನ್ನು ಚಿತ್ರಿಸಲು ‘ದಿಟ್ಟಿಸಿಡಿಲು’ ಪದ ಪ್ರಯೋಗಿಸಿ, ರಾವಣನಿಂದ ಹೀಗೆ ನುಡಿಸಿದ್ದಾರೆ:</p>.<p>‘ದೇವಿ,</p>.<p>ಕರುಣಿಸುಪಸಂಹರಿಸು ದಿಟ್ಟಿಸಿಡಿಲಂ.’ </p>.<p><strong>ಪೆಣ್ಗಾಪು</strong></p>.<p>ಪೆಣ್ಗಾಪು (ನಾ). ಹೆಂಗಸರ ಕಾವಲುಪಡೆ</p>.<p>ಅಶೋಕವನದಲ್ಲಿ ಸೀತೆಯನ್ನು ಕಾಣಲು ಬಂದ ರಾವಣನ ಕಣ್ಣ ಸೂಚನೆಯನ್ನು ತಿಳಿದು, ಅವಳ ಬಳಿಯಿದ್ದ ಹೆಂಗಸರ ಕಾವಲು ಪಡೆಯವರು ಅಲ್ಲಿಂದ ಮರಳುವರು. ಆ ಸಂದರ್ಭದಲ್ಲಿ ಕುವೆಂಪು ರೂಪಿಸಿರುವ ನುಡಿ ‘ಪೆಣ್ಗಾಪು’ವಿನ ಪ್ರಯೋಗ ಹೀಗಿದೆ:</p>.<p>‘ದೊರೆಯ ಕಣ್ತಿಳಿದು ತೊಲಗಿದುದೊಡನೆ ಪೆಣ್ಗಾಪು</p>.<p>ಸೀತೆಯೆಡೆಯಿಂ.’ </p>.<p><strong>ತಿರೆಮಗಳು</strong></p>.<p>ತಿರೆಮಗಳು (ನಾ). ಭೂಮಿಯ ಮಗಳು; ಸೀತೆ</p>.<p>ಕುವೆಂಪು ಅವರು ಭೂಮಿಯ ಮಗಳಾದ ಸೀತೆಯನ್ನು ‘ತಿರೆಮಗಳು’ ಎಂದು ಕರೆದಿದ್ದಾರೆ. ಅವಳ ಚೆಲುವನ್ನು ರಾಮಚಂದ್ರ ಸವಿದ ಬಗೆಯನ್ನು ಹೀಗೆ ವರ್ಣಿಸಿದ್ದಾರೆ:</p>.<p>‘ತಿರೆಮಗಳ ಚೆಲುವಲರ</p>.<p>ಬಂಡಿಡಿದ ಬಟ್ಟಲಂ ಪೀರ್ದನೆರ್ದೆತುಟಿಯಿಂದೆ</p>.<p>ತಣಿವಿನಂ ತನ್ಮಾತ್ಮತೃಷೆ’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಿಟ್ಟಿಸಿಡಿಲು</strong></p>.<p>ದಿಟ್ಟಿಸಿಡಿಲು (ನಾ). ಸಿಡಿಲಿನಂತಹ ನೋಟ</p>.<p>ರಾವಣನು ಸೀತೆಯನ್ನು ಹೊತ್ತುತಂದು ಅಶೋಕವನದಲ್ಲಿರಿಸುವನು. ಅನಂತರ ಮಂಡೋದರಿಯನ್ನು ಕಾಣಲು ಶಿವಾಲಯಕ್ಕೆ ಹೋಗುವನು. ಅವಳು ‘ಹದಿಬದೆಯ ಉರಿ ಲಂಕೆಯನ್ನು ದಹಿಸುವುದಿಲ್ಲವೆ?’ ಎಂದು ಪ್ರಶ್ನಿಸುತ್ತ ಅವನತ್ತ ದಿಟ್ಟ ನೋಟವನ್ನು ಹರಿಸುವಳು. ಆ ಸಂದರ್ಭದಲ್ಲಿ ಕುವೆಂಪು ಅವರು ಆ ದೃಷ್ಟಿಯನ್ನು ಚಿತ್ರಿಸಲು ‘ದಿಟ್ಟಿಸಿಡಿಲು’ ಪದ ಪ್ರಯೋಗಿಸಿ, ರಾವಣನಿಂದ ಹೀಗೆ ನುಡಿಸಿದ್ದಾರೆ:</p>.<p>‘ದೇವಿ,</p>.<p>ಕರುಣಿಸುಪಸಂಹರಿಸು ದಿಟ್ಟಿಸಿಡಿಲಂ.’ </p>.<p><strong>ಪೆಣ್ಗಾಪು</strong></p>.<p>ಪೆಣ್ಗಾಪು (ನಾ). ಹೆಂಗಸರ ಕಾವಲುಪಡೆ</p>.<p>ಅಶೋಕವನದಲ್ಲಿ ಸೀತೆಯನ್ನು ಕಾಣಲು ಬಂದ ರಾವಣನ ಕಣ್ಣ ಸೂಚನೆಯನ್ನು ತಿಳಿದು, ಅವಳ ಬಳಿಯಿದ್ದ ಹೆಂಗಸರ ಕಾವಲು ಪಡೆಯವರು ಅಲ್ಲಿಂದ ಮರಳುವರು. ಆ ಸಂದರ್ಭದಲ್ಲಿ ಕುವೆಂಪು ರೂಪಿಸಿರುವ ನುಡಿ ‘ಪೆಣ್ಗಾಪು’ವಿನ ಪ್ರಯೋಗ ಹೀಗಿದೆ:</p>.<p>‘ದೊರೆಯ ಕಣ್ತಿಳಿದು ತೊಲಗಿದುದೊಡನೆ ಪೆಣ್ಗಾಪು</p>.<p>ಸೀತೆಯೆಡೆಯಿಂ.’ </p>.<p><strong>ತಿರೆಮಗಳು</strong></p>.<p>ತಿರೆಮಗಳು (ನಾ). ಭೂಮಿಯ ಮಗಳು; ಸೀತೆ</p>.<p>ಕುವೆಂಪು ಅವರು ಭೂಮಿಯ ಮಗಳಾದ ಸೀತೆಯನ್ನು ‘ತಿರೆಮಗಳು’ ಎಂದು ಕರೆದಿದ್ದಾರೆ. ಅವಳ ಚೆಲುವನ್ನು ರಾಮಚಂದ್ರ ಸವಿದ ಬಗೆಯನ್ನು ಹೀಗೆ ವರ್ಣಿಸಿದ್ದಾರೆ:</p>.<p>‘ತಿರೆಮಗಳ ಚೆಲುವಲರ</p>.<p>ಬಂಡಿಡಿದ ಬಟ್ಟಲಂ ಪೀರ್ದನೆರ್ದೆತುಟಿಯಿಂದೆ</p>.<p>ತಣಿವಿನಂ ತನ್ಮಾತ್ಮತೃಷೆ’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>