<h2>ವರ್ಣಶಿಲ್ಪರ್ಷಿ</h2>.<p>ವರ್ಣಶಿಲ್ಪಿ ಎಂದರೆ ವರ್ಣಚಿತ್ರಕಾರ. ಕುವೆಂಪು ಅವರು ಮೈಸೂರಿನ ದಸರಾ ಪ್ರದರ್ಶನದಲ್ಲಿ ನಡೆದ ರೋರಿಕ್ ಚಿತ್ರಕಲಾ ಪ್ರದರ್ಶನಕ್ಕೆ ಹೋಗಿದ್ದರು. ಆ ಅದ್ಭುತ ವರ್ಣಚಿತ್ರಗಳನ್ನು ನೋಡಲು ಪ್ರತಿದಿನ ಹೋಗಿ ಆ ರಸ ಸೃಷ್ಟಿಗಳಲ್ಲಿ ಲೀನವಾಗಿ ಹೋಗುತ್ತಿದ್ದರು. ಆ ಆನಂದವನ್ನು ‘ನಿನ್ನ ಹೃದಯ ಸಂದರ್ಶನಕ್ಕೆ. ರಸಕಲಾ ಸಂಕೇತದ ಆ ದಿವ್ಯ ದರ್ಶನಕ್ಕೆ ಸಮಹೃದಯನಾದ ನಾನು ಬರುತ್ತಿದ್ದೆ’ ಎಂದು ಒಂದು ವರ್ಷದ ನಂತರ ನೆನೆದುಕೊಳ್ಳುತ್ತ ಕವನ ರಚಿಸಿದರು.</p>.<p>ರಷ್ಯಾದ ನಿಕೋಲಾಸ್ ರೋರಿಕ್ ಹಿಮಾಲಯ ವಾಸಿಯಾಗಿದ್ದು, ಅವರು ಕಂಡ ಆ ಪರ್ವತದ ಭೂಮಾನುಭೂತಿಯನ್ನು ವರ್ಣಗಳಲ್ಲಿ ಕಡೆದಿಟ್ಟಿದ್ದರು. ಅದನ್ನು ನೋಡಿದ ಕುವೆಂಪು ‘ಆಹ, ಏನು ಕಲೆ ನಿನ್ನದಯ್: ವಿಶ್ವತಾ ಸಂಸ್ಪರ್ಶಿ, ಮೇಣ್ ಬ್ರಹ್ಮದರ್ಶಿ!’ ಎಂದು ಕಾವ್ಯ ರಚಿಸಿದರು. ಅವರಿಗೆ ರೋರಿಕ್ ಋಷಿಯಾಗಿ ಕಂಡರು. ಆ ಭಾವದಲ್ಲಿ ‘ವರ್ಣಶಿಲ್ಪರ್ಷಿ’ ಪದ ರಚಿಸಿ ಹೀಗೆ ಬಣ್ಣಿಸಿದರು :</p>.<p>‘ಬಗೆಗೆ ಪೊತ್ತಿತೊ ನಿನ್ನ</p>.<p>ಅಂದಿನ ಚಿತ್ರಪ್ರದರ್ಶನದ ದರ್ಶನಂ,</p>.<p>ರೋರಿಕ್, ವಿದೇಶೀಯ ಹೇ ವರ್ಣಶಿಲ್ಪರ್ಷಿ!’</p>.<h2>ಮಮತಾಫಣಿ</h2>.<p>ಕುವೆಂಪು ಅವರು ‘ಮಮತಾಫಣಿ’ ಪದ ರಚಿಸಿ ನನ್ನದು ಎಂಬ ಅಹಂ, ಸ್ವಾರ್ಥಪರತೆಯನ್ನು ಸರ್ಪಕ್ಕೆ ಹೋಲಿಸಿದ್ದಾರೆ. ಅವರು ಅಹಂಕಾರ ಅಳಿಯುವ ತನಕ ತುಳಿ ಎಂದು ಶ್ರೀಗುರು ಚರಣವನ್ನು ಧ್ಯಾನಿಸಿದ್ದಾರೆ.</p>.<p>ಗೋವಿಂದನು ಕಾಳಿಯ ಸರ್ಪವನ್ನು ತುಳಿತುಳಿದು ನಾಶಮಾಡಿದ. ಹಾಗೆ ಶ್ರೀಗುರುವೆ ನನ್ನನ್ನು ತುಳಿ, ನನ್ನಲ್ಲಿರುವಷ್ಟು ವಿಷ ವಾಂತಿಯಾಗಲಿ, ನನ್ನ ಅಂತಃಕರಣದಲ್ಲಿಯ ನನ್ನದು ಎಂಬ ಅಭಿಮಾನದ ಸ್ವಾರ್ಥಪರವಾದ ಮಮತೆಯ ಸರ್ಪ ನಾಶವಾಗಿ, ಅಮೃತದ ಮರಣ ಬರಲಿ ಎಂದು ಪ್ರಾರ್ಥಿಸಿದ್ದಾರೆ. ಆ ಅಮೃತ ಮರಣವೆಂದರೆ ‘ನನ್ನ ಸತ್ತದೆಲ್ಲ ಸತ್ತು/ನಿನ್ನ ಸೊತ್ತು ಉಳಿಯಲಿ’ ಎಂಬ ಅಹಂಭಾವ ರಹಿತ ಸ್ಥಿತಿ. ಆಧ್ಯಾತ್ಮದ ಉನ್ನತ ನೆಲೆ.</p>.<p>‘ಹೆಡೆಹೆಡೆಗಳನೆಡೆಬಿಡದೆಯೆ</p>.<p>ಕಾಳೀಯನ ತುಳಿದಂದದಿ</p>.<p>ಗೋವಿಂದನ ಚರಣ</p>.<p>ತನ್ನನಿತೂ ವಿಷ ವಮನದಿ</p>.<p>ನನ್ನಂತಃಕರಣ</p>.<p>ಮಮತಾಫಣಿ ಲಯಹೊಂದುತೆ</p>.<p>ಬರಲಮೃತದ ಮರಣ!’</p>.<p>(ಶ್ರೀ ಗುರು ಚರಣಕೆ – ಅಗ್ನಿಹಂಸ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ವರ್ಣಶಿಲ್ಪರ್ಷಿ</h2>.<p>ವರ್ಣಶಿಲ್ಪಿ ಎಂದರೆ ವರ್ಣಚಿತ್ರಕಾರ. ಕುವೆಂಪು ಅವರು ಮೈಸೂರಿನ ದಸರಾ ಪ್ರದರ್ಶನದಲ್ಲಿ ನಡೆದ ರೋರಿಕ್ ಚಿತ್ರಕಲಾ ಪ್ರದರ್ಶನಕ್ಕೆ ಹೋಗಿದ್ದರು. ಆ ಅದ್ಭುತ ವರ್ಣಚಿತ್ರಗಳನ್ನು ನೋಡಲು ಪ್ರತಿದಿನ ಹೋಗಿ ಆ ರಸ ಸೃಷ್ಟಿಗಳಲ್ಲಿ ಲೀನವಾಗಿ ಹೋಗುತ್ತಿದ್ದರು. ಆ ಆನಂದವನ್ನು ‘ನಿನ್ನ ಹೃದಯ ಸಂದರ್ಶನಕ್ಕೆ. ರಸಕಲಾ ಸಂಕೇತದ ಆ ದಿವ್ಯ ದರ್ಶನಕ್ಕೆ ಸಮಹೃದಯನಾದ ನಾನು ಬರುತ್ತಿದ್ದೆ’ ಎಂದು ಒಂದು ವರ್ಷದ ನಂತರ ನೆನೆದುಕೊಳ್ಳುತ್ತ ಕವನ ರಚಿಸಿದರು.</p>.<p>ರಷ್ಯಾದ ನಿಕೋಲಾಸ್ ರೋರಿಕ್ ಹಿಮಾಲಯ ವಾಸಿಯಾಗಿದ್ದು, ಅವರು ಕಂಡ ಆ ಪರ್ವತದ ಭೂಮಾನುಭೂತಿಯನ್ನು ವರ್ಣಗಳಲ್ಲಿ ಕಡೆದಿಟ್ಟಿದ್ದರು. ಅದನ್ನು ನೋಡಿದ ಕುವೆಂಪು ‘ಆಹ, ಏನು ಕಲೆ ನಿನ್ನದಯ್: ವಿಶ್ವತಾ ಸಂಸ್ಪರ್ಶಿ, ಮೇಣ್ ಬ್ರಹ್ಮದರ್ಶಿ!’ ಎಂದು ಕಾವ್ಯ ರಚಿಸಿದರು. ಅವರಿಗೆ ರೋರಿಕ್ ಋಷಿಯಾಗಿ ಕಂಡರು. ಆ ಭಾವದಲ್ಲಿ ‘ವರ್ಣಶಿಲ್ಪರ್ಷಿ’ ಪದ ರಚಿಸಿ ಹೀಗೆ ಬಣ್ಣಿಸಿದರು :</p>.<p>‘ಬಗೆಗೆ ಪೊತ್ತಿತೊ ನಿನ್ನ</p>.<p>ಅಂದಿನ ಚಿತ್ರಪ್ರದರ್ಶನದ ದರ್ಶನಂ,</p>.<p>ರೋರಿಕ್, ವಿದೇಶೀಯ ಹೇ ವರ್ಣಶಿಲ್ಪರ್ಷಿ!’</p>.<h2>ಮಮತಾಫಣಿ</h2>.<p>ಕುವೆಂಪು ಅವರು ‘ಮಮತಾಫಣಿ’ ಪದ ರಚಿಸಿ ನನ್ನದು ಎಂಬ ಅಹಂ, ಸ್ವಾರ್ಥಪರತೆಯನ್ನು ಸರ್ಪಕ್ಕೆ ಹೋಲಿಸಿದ್ದಾರೆ. ಅವರು ಅಹಂಕಾರ ಅಳಿಯುವ ತನಕ ತುಳಿ ಎಂದು ಶ್ರೀಗುರು ಚರಣವನ್ನು ಧ್ಯಾನಿಸಿದ್ದಾರೆ.</p>.<p>ಗೋವಿಂದನು ಕಾಳಿಯ ಸರ್ಪವನ್ನು ತುಳಿತುಳಿದು ನಾಶಮಾಡಿದ. ಹಾಗೆ ಶ್ರೀಗುರುವೆ ನನ್ನನ್ನು ತುಳಿ, ನನ್ನಲ್ಲಿರುವಷ್ಟು ವಿಷ ವಾಂತಿಯಾಗಲಿ, ನನ್ನ ಅಂತಃಕರಣದಲ್ಲಿಯ ನನ್ನದು ಎಂಬ ಅಭಿಮಾನದ ಸ್ವಾರ್ಥಪರವಾದ ಮಮತೆಯ ಸರ್ಪ ನಾಶವಾಗಿ, ಅಮೃತದ ಮರಣ ಬರಲಿ ಎಂದು ಪ್ರಾರ್ಥಿಸಿದ್ದಾರೆ. ಆ ಅಮೃತ ಮರಣವೆಂದರೆ ‘ನನ್ನ ಸತ್ತದೆಲ್ಲ ಸತ್ತು/ನಿನ್ನ ಸೊತ್ತು ಉಳಿಯಲಿ’ ಎಂಬ ಅಹಂಭಾವ ರಹಿತ ಸ್ಥಿತಿ. ಆಧ್ಯಾತ್ಮದ ಉನ್ನತ ನೆಲೆ.</p>.<p>‘ಹೆಡೆಹೆಡೆಗಳನೆಡೆಬಿಡದೆಯೆ</p>.<p>ಕಾಳೀಯನ ತುಳಿದಂದದಿ</p>.<p>ಗೋವಿಂದನ ಚರಣ</p>.<p>ತನ್ನನಿತೂ ವಿಷ ವಮನದಿ</p>.<p>ನನ್ನಂತಃಕರಣ</p>.<p>ಮಮತಾಫಣಿ ಲಯಹೊಂದುತೆ</p>.<p>ಬರಲಮೃತದ ಮರಣ!’</p>.<p>(ಶ್ರೀ ಗುರು ಚರಣಕೆ – ಅಗ್ನಿಹಂಸ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>