<p><strong>ನವದೆಹಲಿ:</strong> 1993ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಸಾರ್ವಜನಿಕ ಅಭಿಯೋಜಕ ಹಾಗೂ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಉಜ್ವಲ್ ನಿಕಮ್ ಮಾತನಾಡಿದ್ದಾರೆ.</p>.<p>'ಎನ್ಡಿಟಿವಿ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಉಜ್ವಲ್ ನಿಕಮ್, ನಟ ಸಂಜಯ್ ದತ್ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.</p>.<p>ಸಂಜಯ್ ದತ್ ಮನಸ್ಸು ಮಾಡಿದ್ದರೆ, 1993ರ ಮುಂಬೈ ದಾಳಿಯನ್ನು ತಪ್ಪಿಸಬಹುದಿತ್ತು. ಅವರು ಎಕೆ -47 ಬಂದೂಕನ್ನು ತೆಗೆದುಕೊಂಡಿದ್ದ ಶಸ್ತ್ರಾಸ್ತ್ರ ತುಂಬಿದ ವಾಹನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೆ 267 ಜನರ ಪ್ರಾಣ ಉಳಿಯುತ್ತಿತ್ತು ಎಂದು ಹೇಳಿದ್ದಾರೆ.</p> <p>ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (TADA) ಅಡಿಯಲ್ಲಿ ಭಯೋತ್ಪಾದಕ ಎಂಬ ಆರೋಪದಿಂದ ನ್ಯಾಯಾಲಯವು ಸಂಜಯ್ ದತ್ ಅವರನ್ನು ಖುಲಾಸೆಗೊಳಿಸಿತ್ತು ಆದರೆ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಅವರನ್ನು ದೋಷಿ ಎಂದು ಘೋಷಿಸಿತ್ತು. ನಂತರ, ಸುಪ್ರೀಂ ಕೋರ್ಟ್ ಅವರಿಗೆ ವಿಧಿಸಲಾಗಿದ್ದ 6 ವರ್ಷಗಳ ಶಿಕ್ಷೆಯನ್ನು 5 ವರ್ಷಗಳಿಗೆ ಇಳಿಸಿತ್ತು. ಸಂಜಯ್ ದತ್ ಪುಣೆಯ ಯರವಾಡ ಜೈಲಿನಲ್ಲಿ ಈ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರು.</p>.<p>ನಿಜವಾಗಿಯೂ ಸಂಜಯ್ ದತ್ ಈ ಪ್ರಕರಣದಲ್ಲಿ ಅಮಾಯಕ. ಗನ್ಗಳ ಬಗ್ಗೆ ಆಸಕ್ತಿ ಹೊಂದಿದ್ದ ಕಾರಣ ಅದನ್ನು ಇಟ್ಟುಕೊಂಡಿದ್ದರು. ಕಾನೂನಿನ ಕಣ್ಣಲ್ಲಿ ಅಪರಾಧ ಎಸಗಿದ್ದಾರೆ. ಆದರೆ ಅವರು ನೇರವಾದ ವ್ಯಕ್ತಿತ್ವ ಉಳ್ಳವರು. ನನ್ನ ದೃಷ್ಟಿಯಲ್ಲಿ ಆತ ನಿರಪರಾಧಿ ಎಂದಿದ್ದಾರೆ.</p>.<p> ಮಾರ್ಚ್ 12 ರಂದು ಸ್ಫೋಟ ಸಂಭವಿಸಿತ್ತು. ಅದಕ್ಕೂ ಕೆಲವು ದಿನಗಳ ಮೊದಲು ಸಂಜಯ್ ದತ್ ಮನೆಗೆ ವ್ಯಾನ್ವೊಂದು ಬಂದಿತ್ತು. ಅದು ಶಸ್ತ್ರಾಸ್ತ್ರಗಳಿಂದ ತುಂಬಿತ್ತು. ಹ್ಯಾಂಡ್ ಗ್ರೆನೇಡ್ಗಳು, ಎಕೆ 47 ಅದರಲ್ಲಿದ್ದವು. ಅಬು ಸಲೇಂ (ದಾವೂದ್ ಇಬ್ರಾಹಿಂನ ಸಹಾಯಕ) ಅದನ್ನು ತಂದಿದ್ದ. ಸಂಜಯ್ ಕೆಲವು ಹ್ಯಾಂಡ್ ಗ್ರೆನೇಡ್ಗಳು ಮತ್ತು ಬಂದೂಕುಗಳನ್ನು ಆರಿಸಿಕೊಂಡರು. ನಂತರ ಅವುಗಳನ್ನೆಲ್ಲಾ ಹಿಂತಿರುಗಿಸಿ ಒಂದೇ ಒಂದು ಎಕೆ 47 ಅನ್ನು ಮಾತ್ರ ಇಟ್ಟುಕೊಂಡರು. ಆ ಸಮಯದಲ್ಲಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಪೊಲೀಸರು ತನಿಖೆ ನಡೆಸುತ್ತಿದ್ದರು. ಮುಂಬೈ ಸರಣಿ ಸ್ಫೋಟಗಳು ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದು ನಿಕಮ್ ಹೇಳಿದ್ದಾರೆ.</p>.<p>ಅವರ ಬಳಿಯಿದ್ದ ಎಕೆ 47 ಗನ್ನಿಂದ ಯಾವುದೇ ಗುಂಡು ಹಾರಿರಲಿಲ್ಲ. ಆದರೆ ಅವರು ಪೊಲೀಸರಿಗೆ ಮಾಹಿತಿ ನೀಡದಿರುವುದು ಹಲವು ಜನರನ್ನು ಬಲಿತೆಗೆದುಕೊಂಡ ಸ್ಫೋಟಗಳಿಗೆ ಕಾರಣವಾಯಿತು. ಇನ್ನು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಸಂಜಯ್ ದತ್ಗೆ ಶಿಕ್ಷೆ ಪ್ರಕಟಗೊಂಡಾಗ ಅವರು ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದ್ದರು. ಆಗ ನಾನು ಅವರಿಗೆ ಹೇಳಿದ್ದೆ, ಸಂಜಯ್ ಹೀಗೆ ಮಾಡಬೇಡಿ. ಮಾಧ್ಯಮಗಳು ನಿನ್ನನ್ನು ಗಮನಿಸುತ್ತಿವೆ. ನೀನು ಒಬ್ಬ ನಟ. ಶಿಕ್ಷೆಯಿಂದ ನೀನು ಭಯಭೀತನಾಗಿ ಕಂಡರೆ, ಜನ ನಿನ್ನನ್ನು ತಪ್ಪಿತಸ್ಥನೆಂದು ಪರಿಗಣಿಸುತ್ತಾರೆ. ನಿನಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದೆ. ಅವನು 'ಹೌದು ಸರ್, ಹೌದು ಸರ್' ಎಂದಿದ್ದರು ಎಂದು ನಿಕಮ್ ಅಂದಿನ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.</p>.<p>1993ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣ 2003ರಲ್ಲಿ ಗೇಟ್ವೇ ಆಫ್ ಇಂಡಿಯಾ ಬಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ನಿಕಮ್ ವಾದ ಮಂಡಿಸಿದ್ದರು. </p>.<h2>ಕಾನೂನು ತಜ್ಞ ನಿಕಮ್</h2><p>ಸರ್ಕಾರಿ ವಕೀಲರಾಗಿದ್ದ ಉಜ್ವಲ್ ನಿಕಮ್ ಹಲವಾರು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿ ಗಮನ ಸೆಳೆದಿದ್ದಾರೆ. 2008ರಲ್ಲಿ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ಸಿನಿಮಾ ನಿರ್ಮಾಪಕ ಗುಲ್ಷನ್ ಕುಮಾರ್ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಕೊಲೆ ಪ್ರಕರಣದಲ್ಲಿಯೂ ಅವರು ವಕಾಲತ್ತು ವಹಿಸಿದ್ದರು. 1993ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣ 2003ರಲ್ಲಿ ಗೇಟ್ವೇ ಆಫ್ ಇಂಡಿಯಾ ಬಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ವಾದ ಮಂಡಿಸಿದ್ದರು. ಮಹಾರಾಷ್ಟ್ರ ವಿಧಾನಸಭೆಗೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಕಮ್ ಕಾಂಗ್ರೆಸ್ ಅಭ್ಯರ್ಥಿ ವರ್ಷಾ ಗಾಯಕ್ವಾಡ್ ವಿರುದ್ಧ ಪರಾಭವಗೊಂಡರು. ಅವರು 2016ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.</p> .Rajya Sabha | ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ: ಶೃಂಗ್ಲಾ, ನಿಕಮ್ಗೆ ಮಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> 1993ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಸಾರ್ವಜನಿಕ ಅಭಿಯೋಜಕ ಹಾಗೂ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಉಜ್ವಲ್ ನಿಕಮ್ ಮಾತನಾಡಿದ್ದಾರೆ.</p>.<p>'ಎನ್ಡಿಟಿವಿ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಉಜ್ವಲ್ ನಿಕಮ್, ನಟ ಸಂಜಯ್ ದತ್ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.</p>.<p>ಸಂಜಯ್ ದತ್ ಮನಸ್ಸು ಮಾಡಿದ್ದರೆ, 1993ರ ಮುಂಬೈ ದಾಳಿಯನ್ನು ತಪ್ಪಿಸಬಹುದಿತ್ತು. ಅವರು ಎಕೆ -47 ಬಂದೂಕನ್ನು ತೆಗೆದುಕೊಂಡಿದ್ದ ಶಸ್ತ್ರಾಸ್ತ್ರ ತುಂಬಿದ ವಾಹನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೆ 267 ಜನರ ಪ್ರಾಣ ಉಳಿಯುತ್ತಿತ್ತು ಎಂದು ಹೇಳಿದ್ದಾರೆ.</p> <p>ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (TADA) ಅಡಿಯಲ್ಲಿ ಭಯೋತ್ಪಾದಕ ಎಂಬ ಆರೋಪದಿಂದ ನ್ಯಾಯಾಲಯವು ಸಂಜಯ್ ದತ್ ಅವರನ್ನು ಖುಲಾಸೆಗೊಳಿಸಿತ್ತು ಆದರೆ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಅವರನ್ನು ದೋಷಿ ಎಂದು ಘೋಷಿಸಿತ್ತು. ನಂತರ, ಸುಪ್ರೀಂ ಕೋರ್ಟ್ ಅವರಿಗೆ ವಿಧಿಸಲಾಗಿದ್ದ 6 ವರ್ಷಗಳ ಶಿಕ್ಷೆಯನ್ನು 5 ವರ್ಷಗಳಿಗೆ ಇಳಿಸಿತ್ತು. ಸಂಜಯ್ ದತ್ ಪುಣೆಯ ಯರವಾಡ ಜೈಲಿನಲ್ಲಿ ಈ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರು.</p>.<p>ನಿಜವಾಗಿಯೂ ಸಂಜಯ್ ದತ್ ಈ ಪ್ರಕರಣದಲ್ಲಿ ಅಮಾಯಕ. ಗನ್ಗಳ ಬಗ್ಗೆ ಆಸಕ್ತಿ ಹೊಂದಿದ್ದ ಕಾರಣ ಅದನ್ನು ಇಟ್ಟುಕೊಂಡಿದ್ದರು. ಕಾನೂನಿನ ಕಣ್ಣಲ್ಲಿ ಅಪರಾಧ ಎಸಗಿದ್ದಾರೆ. ಆದರೆ ಅವರು ನೇರವಾದ ವ್ಯಕ್ತಿತ್ವ ಉಳ್ಳವರು. ನನ್ನ ದೃಷ್ಟಿಯಲ್ಲಿ ಆತ ನಿರಪರಾಧಿ ಎಂದಿದ್ದಾರೆ.</p>.<p> ಮಾರ್ಚ್ 12 ರಂದು ಸ್ಫೋಟ ಸಂಭವಿಸಿತ್ತು. ಅದಕ್ಕೂ ಕೆಲವು ದಿನಗಳ ಮೊದಲು ಸಂಜಯ್ ದತ್ ಮನೆಗೆ ವ್ಯಾನ್ವೊಂದು ಬಂದಿತ್ತು. ಅದು ಶಸ್ತ್ರಾಸ್ತ್ರಗಳಿಂದ ತುಂಬಿತ್ತು. ಹ್ಯಾಂಡ್ ಗ್ರೆನೇಡ್ಗಳು, ಎಕೆ 47 ಅದರಲ್ಲಿದ್ದವು. ಅಬು ಸಲೇಂ (ದಾವೂದ್ ಇಬ್ರಾಹಿಂನ ಸಹಾಯಕ) ಅದನ್ನು ತಂದಿದ್ದ. ಸಂಜಯ್ ಕೆಲವು ಹ್ಯಾಂಡ್ ಗ್ರೆನೇಡ್ಗಳು ಮತ್ತು ಬಂದೂಕುಗಳನ್ನು ಆರಿಸಿಕೊಂಡರು. ನಂತರ ಅವುಗಳನ್ನೆಲ್ಲಾ ಹಿಂತಿರುಗಿಸಿ ಒಂದೇ ಒಂದು ಎಕೆ 47 ಅನ್ನು ಮಾತ್ರ ಇಟ್ಟುಕೊಂಡರು. ಆ ಸಮಯದಲ್ಲಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಪೊಲೀಸರು ತನಿಖೆ ನಡೆಸುತ್ತಿದ್ದರು. ಮುಂಬೈ ಸರಣಿ ಸ್ಫೋಟಗಳು ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದು ನಿಕಮ್ ಹೇಳಿದ್ದಾರೆ.</p>.<p>ಅವರ ಬಳಿಯಿದ್ದ ಎಕೆ 47 ಗನ್ನಿಂದ ಯಾವುದೇ ಗುಂಡು ಹಾರಿರಲಿಲ್ಲ. ಆದರೆ ಅವರು ಪೊಲೀಸರಿಗೆ ಮಾಹಿತಿ ನೀಡದಿರುವುದು ಹಲವು ಜನರನ್ನು ಬಲಿತೆಗೆದುಕೊಂಡ ಸ್ಫೋಟಗಳಿಗೆ ಕಾರಣವಾಯಿತು. ಇನ್ನು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಸಂಜಯ್ ದತ್ಗೆ ಶಿಕ್ಷೆ ಪ್ರಕಟಗೊಂಡಾಗ ಅವರು ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದ್ದರು. ಆಗ ನಾನು ಅವರಿಗೆ ಹೇಳಿದ್ದೆ, ಸಂಜಯ್ ಹೀಗೆ ಮಾಡಬೇಡಿ. ಮಾಧ್ಯಮಗಳು ನಿನ್ನನ್ನು ಗಮನಿಸುತ್ತಿವೆ. ನೀನು ಒಬ್ಬ ನಟ. ಶಿಕ್ಷೆಯಿಂದ ನೀನು ಭಯಭೀತನಾಗಿ ಕಂಡರೆ, ಜನ ನಿನ್ನನ್ನು ತಪ್ಪಿತಸ್ಥನೆಂದು ಪರಿಗಣಿಸುತ್ತಾರೆ. ನಿನಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದೆ. ಅವನು 'ಹೌದು ಸರ್, ಹೌದು ಸರ್' ಎಂದಿದ್ದರು ಎಂದು ನಿಕಮ್ ಅಂದಿನ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.</p>.<p>1993ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣ 2003ರಲ್ಲಿ ಗೇಟ್ವೇ ಆಫ್ ಇಂಡಿಯಾ ಬಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ನಿಕಮ್ ವಾದ ಮಂಡಿಸಿದ್ದರು. </p>.<h2>ಕಾನೂನು ತಜ್ಞ ನಿಕಮ್</h2><p>ಸರ್ಕಾರಿ ವಕೀಲರಾಗಿದ್ದ ಉಜ್ವಲ್ ನಿಕಮ್ ಹಲವಾರು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿ ಗಮನ ಸೆಳೆದಿದ್ದಾರೆ. 2008ರಲ್ಲಿ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ಸಿನಿಮಾ ನಿರ್ಮಾಪಕ ಗುಲ್ಷನ್ ಕುಮಾರ್ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಕೊಲೆ ಪ್ರಕರಣದಲ್ಲಿಯೂ ಅವರು ವಕಾಲತ್ತು ವಹಿಸಿದ್ದರು. 1993ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣ 2003ರಲ್ಲಿ ಗೇಟ್ವೇ ಆಫ್ ಇಂಡಿಯಾ ಬಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ವಾದ ಮಂಡಿಸಿದ್ದರು. ಮಹಾರಾಷ್ಟ್ರ ವಿಧಾನಸಭೆಗೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಕಮ್ ಕಾಂಗ್ರೆಸ್ ಅಭ್ಯರ್ಥಿ ವರ್ಷಾ ಗಾಯಕ್ವಾಡ್ ವಿರುದ್ಧ ಪರಾಭವಗೊಂಡರು. ಅವರು 2016ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.</p> .Rajya Sabha | ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ: ಶೃಂಗ್ಲಾ, ನಿಕಮ್ಗೆ ಮಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>