<p><strong>ಐಕಿಲ್ಸೋನೆ</strong></p>.<p>ಐಕಿಲ್ಸೋನೆ (ನಾ). ಹಿಮ ವೃಷ್ಟಿ</p>.<p>ಹೇಮಂತ ಋತುವಿನಲ್ಲಿಯ ಮಂಜಿನ ವೃಷ್ಟಿಯನ್ನು ಕುವೆಂಪು ‘ಐಕಿಲ್ಸೋನೆ’ ಎಂದು ಕರೆದು ಹೀಗೆ ವರ್ಣಿಸಿದ್ದಾರೆ:</p>.<p>ನೊರೆಯೆ ಇಬ್ಬನಿಯಾಯ್ತೊ ತಾನೆಂಬ</p>.<p>ಕಡಲಾಗೆ ದಟ್ಟಿತೈಕಿಲ್ ಸೋನೆ. </p>.<p><strong>ಚಿತ್ತಫಣಿ</strong></p>.<p>ಚಂದ್ರನಖಿ ತನ್ನ ಕಿವಿ ಮೂಗನ್ನು ಲಕ್ಷ್ಮಣನಿಂದ ಕೆತ್ತಿಸಿಕೊಂಡು ಬಂದು ಅಣ್ಣ ರಾವಣನ ಬಳಿ ದೂರುವಳು. ಆಗ ರಾವಣನು ತಂಗಿಗೆ ನೀಡುವ ಆಶ್ವಾಸನೆಯಲ್ಲಿ, ಕುವೆಂಪು ‘ಚಿತ್ತಸರ್ಪ’ ಪದದಿಂದ ಅವನ ಮನ ಕೆರಳಿದ್ದನ್ನು ಹೀಗೆ ಚಿತ್ರಿಸಿದ್ದಾರೆ:</p>.<p>‘ಸೋದರಿ, ಸತ್ತನೆಂದೆ ತಿಳಿ</p>.<p>ಈ ನಿನ್ನ ವದನ ವಲ್ಮೀಕಮಂ ಕಿಳ್ತೆನ್ನ</p>.<p>ಚಿತ್ತಫಣಿಯಂ ಕೆರಳ್ಚಿದಾತನ್’</p>.<p><strong>ಬಿಂಕದುರಿ</strong></p>.<p>ಬಿಂಕದುರಿ (ಗು). ಸೊಕ್ಕಿನ ಉರಿ</p>.<p>ಉದಯ ಸಮಯದಲ್ಲಿ ಅರ್ಜುನನು ಪದ್ಮಾಸನದಲ್ಲಿ ಧ್ಯಾನಸ್ಥನಾಗಿ ಕುಳಿತಿದ್ದನು. ಆ ಮನ್ಮಥ ಸಮನಾದ ಪುರುಷ ಮೂರ್ತಿಯನ್ನು ಕಂಡು ಪುರುಷ ವೇಷದ ಚಿತ್ರಾಂಗದೆಯ ಹೃದಯದಲ್ಲಿ ಪ್ರಣಯದ ಮೊದಲ ಆಕರ್ಷಣೆ ಮೊಳೆಯಿತು.</p>.<p>ಅವಳನ್ನು ನೋಡಿದ ಅರ್ಜುನನು ‘ಎಲೆ ತರುಣ ವೀರನೇ ನೀನು ಯಾರು?’ ಎಂದು ಪ್ರಶ್ನಿಸಿ, ‘ನುಡಿ, ಅಂಜದಿರು’ ಎಂದು ಹೇಳುವನು. ‘ಅಂಜದಿರು’ ಎಂಬ ನುಡಿ ಕಿಡಿಸೂಸಲು ಭುಗಿಲ್ಲೆಂದ ಬಿಂಕದುರಿ ಆ ವೀರನಾರಿಯ ಮನದಲ್ಲಿ ಹೊರಹೊಮ್ಮಿತು.</p>.<p>ಅವಳಲ್ಲಿದ್ದ ಜಂಬ, ಸೊಕ್ಕು ಜ್ವಲಿಸಿದುದನ್ನು ಕುವೆಂಪು ಅವರು ‘ಬಿಂಕದುರಿ’ ಪದರೂಪಿಸಿ ಅಭಿವ್ಯಕ್ತಿಸಿದ್ದಾರೆ.</p>.<p>‘... ನುಡಿ, ಅಂಜದಿರು; ನಾವು ಮುನಿವ ಮುನಿವರರಲ್ಲ!’</p>.<p>‘ಅಂಜದಿರು’ ಎಂಬ ನುಡಿ ಕಿಡಿಸೂಸೆ, ಬಿಂಕದುರಿ</p>.<p>ಮಸಗಿದುದು ಭುಗಿಲೆಂದು ವೀರ ನಾರಿಯ ಮನದಿ.’</p>.<p><strong>ತೀಕ್ಷ್ಣದಕ್ಷಿ</strong></p>.<p>ತೀಕ್ಷ್ಣದಕ್ಷಿ (ನಾ). ತೀವ್ರ ದೃಷ್ಟಿಯ ಕಣ್ಣು</p>.<p>ಚಿತ್ರಕೂಟದಲ್ಲಿ ರಾಮಸೀತೆ ಲಕ್ಷ್ಮಣರು ಸುತ್ತಾಡುತ್ತಿರುವಾಗ ಉಗ್ರಧ್ವನಿ ಕೇಳುವರು. ರಾಮನ ಸೂಚನೆಯಂತೆ ಲಕ್ಷ್ಮಣನು ಒಂದು ಮರ ಹತ್ತಿ ಅದರ ಶಿರದ ಗೋಪುರದಲ್ಲಿ ನಿಂತು ನೋಡುವನು. ಆ ನೋಟವನ್ನು ಕುವೆಂಪು ಗರುಡನ ಚುರುಕಾದ ಕಣ್ಣಿನ ಉಪಮಾನದಲ್ಲಿ ಹೀಗೆ ಬಣ್ಣಿಸಿರುವರು:</p>.<p>‘ಪಕ್ಷಿರಾಜನ ತೀಕ್ಷ್ಣದಕ್ಷಿಯೋಲ್</p>.<p>ನೋಡಿದನು ಕಣ್ಣಟ್ಟಿ ದಿಗ್ದೇಶಮಂ’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಐಕಿಲ್ಸೋನೆ</strong></p>.<p>ಐಕಿಲ್ಸೋನೆ (ನಾ). ಹಿಮ ವೃಷ್ಟಿ</p>.<p>ಹೇಮಂತ ಋತುವಿನಲ್ಲಿಯ ಮಂಜಿನ ವೃಷ್ಟಿಯನ್ನು ಕುವೆಂಪು ‘ಐಕಿಲ್ಸೋನೆ’ ಎಂದು ಕರೆದು ಹೀಗೆ ವರ್ಣಿಸಿದ್ದಾರೆ:</p>.<p>ನೊರೆಯೆ ಇಬ್ಬನಿಯಾಯ್ತೊ ತಾನೆಂಬ</p>.<p>ಕಡಲಾಗೆ ದಟ್ಟಿತೈಕಿಲ್ ಸೋನೆ. </p>.<p><strong>ಚಿತ್ತಫಣಿ</strong></p>.<p>ಚಂದ್ರನಖಿ ತನ್ನ ಕಿವಿ ಮೂಗನ್ನು ಲಕ್ಷ್ಮಣನಿಂದ ಕೆತ್ತಿಸಿಕೊಂಡು ಬಂದು ಅಣ್ಣ ರಾವಣನ ಬಳಿ ದೂರುವಳು. ಆಗ ರಾವಣನು ತಂಗಿಗೆ ನೀಡುವ ಆಶ್ವಾಸನೆಯಲ್ಲಿ, ಕುವೆಂಪು ‘ಚಿತ್ತಸರ್ಪ’ ಪದದಿಂದ ಅವನ ಮನ ಕೆರಳಿದ್ದನ್ನು ಹೀಗೆ ಚಿತ್ರಿಸಿದ್ದಾರೆ:</p>.<p>‘ಸೋದರಿ, ಸತ್ತನೆಂದೆ ತಿಳಿ</p>.<p>ಈ ನಿನ್ನ ವದನ ವಲ್ಮೀಕಮಂ ಕಿಳ್ತೆನ್ನ</p>.<p>ಚಿತ್ತಫಣಿಯಂ ಕೆರಳ್ಚಿದಾತನ್’</p>.<p><strong>ಬಿಂಕದುರಿ</strong></p>.<p>ಬಿಂಕದುರಿ (ಗು). ಸೊಕ್ಕಿನ ಉರಿ</p>.<p>ಉದಯ ಸಮಯದಲ್ಲಿ ಅರ್ಜುನನು ಪದ್ಮಾಸನದಲ್ಲಿ ಧ್ಯಾನಸ್ಥನಾಗಿ ಕುಳಿತಿದ್ದನು. ಆ ಮನ್ಮಥ ಸಮನಾದ ಪುರುಷ ಮೂರ್ತಿಯನ್ನು ಕಂಡು ಪುರುಷ ವೇಷದ ಚಿತ್ರಾಂಗದೆಯ ಹೃದಯದಲ್ಲಿ ಪ್ರಣಯದ ಮೊದಲ ಆಕರ್ಷಣೆ ಮೊಳೆಯಿತು.</p>.<p>ಅವಳನ್ನು ನೋಡಿದ ಅರ್ಜುನನು ‘ಎಲೆ ತರುಣ ವೀರನೇ ನೀನು ಯಾರು?’ ಎಂದು ಪ್ರಶ್ನಿಸಿ, ‘ನುಡಿ, ಅಂಜದಿರು’ ಎಂದು ಹೇಳುವನು. ‘ಅಂಜದಿರು’ ಎಂಬ ನುಡಿ ಕಿಡಿಸೂಸಲು ಭುಗಿಲ್ಲೆಂದ ಬಿಂಕದುರಿ ಆ ವೀರನಾರಿಯ ಮನದಲ್ಲಿ ಹೊರಹೊಮ್ಮಿತು.</p>.<p>ಅವಳಲ್ಲಿದ್ದ ಜಂಬ, ಸೊಕ್ಕು ಜ್ವಲಿಸಿದುದನ್ನು ಕುವೆಂಪು ಅವರು ‘ಬಿಂಕದುರಿ’ ಪದರೂಪಿಸಿ ಅಭಿವ್ಯಕ್ತಿಸಿದ್ದಾರೆ.</p>.<p>‘... ನುಡಿ, ಅಂಜದಿರು; ನಾವು ಮುನಿವ ಮುನಿವರರಲ್ಲ!’</p>.<p>‘ಅಂಜದಿರು’ ಎಂಬ ನುಡಿ ಕಿಡಿಸೂಸೆ, ಬಿಂಕದುರಿ</p>.<p>ಮಸಗಿದುದು ಭುಗಿಲೆಂದು ವೀರ ನಾರಿಯ ಮನದಿ.’</p>.<p><strong>ತೀಕ್ಷ್ಣದಕ್ಷಿ</strong></p>.<p>ತೀಕ್ಷ್ಣದಕ್ಷಿ (ನಾ). ತೀವ್ರ ದೃಷ್ಟಿಯ ಕಣ್ಣು</p>.<p>ಚಿತ್ರಕೂಟದಲ್ಲಿ ರಾಮಸೀತೆ ಲಕ್ಷ್ಮಣರು ಸುತ್ತಾಡುತ್ತಿರುವಾಗ ಉಗ್ರಧ್ವನಿ ಕೇಳುವರು. ರಾಮನ ಸೂಚನೆಯಂತೆ ಲಕ್ಷ್ಮಣನು ಒಂದು ಮರ ಹತ್ತಿ ಅದರ ಶಿರದ ಗೋಪುರದಲ್ಲಿ ನಿಂತು ನೋಡುವನು. ಆ ನೋಟವನ್ನು ಕುವೆಂಪು ಗರುಡನ ಚುರುಕಾದ ಕಣ್ಣಿನ ಉಪಮಾನದಲ್ಲಿ ಹೀಗೆ ಬಣ್ಣಿಸಿರುವರು:</p>.<p>‘ಪಕ್ಷಿರಾಜನ ತೀಕ್ಷ್ಣದಕ್ಷಿಯೋಲ್</p>.<p>ನೋಡಿದನು ಕಣ್ಣಟ್ಟಿ ದಿಗ್ದೇಶಮಂ’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>