<p><strong>ಗುದ್ದುಮಳಿ</strong></p>.<p>ಗುದ್ದುಮಳಿ (ನಾ). ತುಮುಲ</p>.<p>ರಾಮಚಂದ್ರನು ಸುಗ್ರೀವ ಮತ್ತು ವಿಭೀಷಣರ ಸಹಾಯದಿಂದ ರಾವಣನ ಮೇಲೆ ವಿಜಯ ಸಾಧಿಸುವನು. ಅನಂತರ ಅವನ ಆಜ್ಞೆಯಂತೆ ವಿಭೀಷಣನು ಅಲಂಕೃತಳಾದ ಸೀತೆಯನ್ನು ಒಬ್ಬಳೇ ರಾಮನ ಬಳಿಗೆ ಹೋಗಲು ತಿಳಿಸುವನು. ಆ ಮಾತೆಯ ದರ್ಶನಾಕಾಂಕ್ಷಿಗಳಾಗಿ ವಾನರರು ಮುನ್ನುಗ್ಗುವರು. ಆಗ ವಿಭೀಷಣನ ಅಪ್ಪಣೆಯಂತೆ ಬೆತ್ತ ಹಿಡಿದವರು ಆ ಸೈನಿಕರನ್ನು ಹಿಂದಕ್ಕೆ ತಳ್ಳುವರು.</p>.<p>ಆಗ ಆದ ಗದ್ದಲ ತುಮುಲವನ್ನು ಕುವೆಂಪು ಅವರು ‘ಗುದ್ದುಮಳಿ’ ಎಂಬ ನುಡಿ ರೂಪಿಸಿ ಗದ್ದಲ ವಾತಾವರಣವನ್ನು ಹಿಡಿದಿಟ್ಟಿದ್ದಾರೆ. ಅದು ಮಳೆ ಗಾಳಿ ಮಸೆವ ಸಮುದ್ರದ ಸದ್ದಾಗಿತ್ತು ಎಂದು ರೂಪಕದಲ್ಲಿ ಚಿತ್ರಿಸಿದ್ದಾರೆ.</p>.<p><strong>ಗಾಳೀ ಮಸೆವಂಬುಧಿಯ</strong></p>.<p>ಸದ್ದೆದ್ದುದೈ ಗುದ್ದುಮಳಿ ಗದ್ದಲಂ.</p>.<p>ಬೆಂಕೆವೆಟ್ಟು</p>.<p>ಬೆಂಕೆವೆಟ್ಟು (ನಾ). ಕುದಿಯುತ್ತಿರುವ ಲಾವಾರಸವನ್ನು ಉಗುಳುವ ಬೆಟ್ಟ; ಅಗ್ನಿ ಪರ್ವತ.</p>.<p>[ಬೆಂಕೆ + ಬೆಟ್ಟು (<ಬೆಟ್ಟ)]</p>.<p>ರಾವಣನನ್ನು ಸಂಹರಿಸಲು ನಿಶ್ಚಯಿಸಿದ ರಾಮಚಂದ್ರನು ಕೋದಂಡವನ್ನು ಹಿಡಿದನು. ಬೆನ್ನಿನ ಬತ್ತಳಿಕೆಗೆ ಕೈ ಹಾಕಿದನು. ಆಗ ಉಂಟಾದ ಪ್ರಕೃತಿಯ ವಿಕೋಪವನ್ನು ಕವಿ ಚಿತ್ರಿಸುತ್ತ ‘ಅಗ್ನಿ ಪರ್ವತ’ವನ್ನು ‘ಬೆಂಕೆವೆಟ್ಟು’ ಎಂಬ ಹೊಸ ಕನ್ನಡ ಪದದಿಂದ ಬಣ್ಣಿಸಿದ್ದಾರೆ.</p>.<p><strong>ಸುಯ್ದುದು ಲಯಂ</strong></p>.<p>ನಡುಗೆ ಗಿರಿ ಸಂಕುಲಂ, ಕದಡಿದುವು ಕಡಲುಗಳ್.</p>.<p>ಬೆಂಕೆವೆಟ್ಟುಗಳೋಕರಿಸಿದುವು ಭಯಂಕರ</p>.<p>ಯುಗಾಂತರ ದ್ರಾವಾಗ್ನಿಯಂ.</p>.<p><strong>ಮರಸುಕೂರು</strong></p>.<p>ಮರಸುಕೂರು (ಕ್ರಿ). ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಮರದ ಮೇಲೆ ಕಟ್ಟಿರುವ ಮರಸಿನ ಮೇಲೆ ಕುಳಿತುಕೊಳ್ಳು.</p>.<p>ಮರಸು (ನಾ). 1. ಬೇಟೆಯಲ್ಲಿ ಪ್ರಾಣಿಗಳನ್ನು ಹಿಡಿಯಲು ಹೊಂಚುಹಾಕಿ ಕುಳಿತು ಕೊಳ್ಳುವುದಕ್ಕಾಗಿ ಕಟ್ಟಿರುವ ಮರೆ.</p>.<p>2. ಪ್ರಾಣಿಗಳನ್ನು ಹಿಡಿಯಲು ಮರೆಯಲ್ಲಿ ಅಡಗಿಕೊಂಡು ಮಾಡುವ ಬೇಟೆ; ಮರಸುಬೇಟೆ</p>.<p>ವಾಲಿಯನ್ನು ದ್ವಂದ್ವಯುದ್ಧಕ್ಕೆ ಕರೆಯಲು ಸುಗ್ರೀವನು ರಾಮಲಕ್ಷ್ಮಣರೊಡನೆ ಕಿಷ್ಕಿಂಧೆಗೆ ಹೋಗುವನು. ಆ ಕಾಡಿನಲ್ಲಿ ವಾಲಿಯು ಬರುವುದನ್ನು ಕಾಯುತ್ತ ರಾಮಲಕ್ಷ್ಮಣರು ಮೌನದಿಂದ ನಿಟ್ಟಿಸುತ್ತ ಕುಳಿತರು. ಅವರು ಕುಳಿತ ರೀತಿಯನ್ನು ಕುವೆಂಪು ಅವರು ತಮ್ಮ ಕಾಡಿನ ಬೇಟೆಯ ಅನುಭವದೊಡನೆ ‘ಪಳುಮರೆಯೊಳಡಿ ಪಣ್ಮರಕೆ ಮರಸುಕೂತವರಂತೆ’ ಎಂದು ಚಿತ್ರಿಸಿದ್ದಾರೆ.</p>.<p>ಅವರು ಕುಳಿತ ರೀತಿ ‘ಪ್ರಾಣಿಗಳನ್ನು ಹಿಡಿಯಲು ಮರೆಯಲ್ಲಿ ಅಡಗಿಕೊಂಡು ಮಾಡುವ ಬೇಟೆ’ಯಂತಿದೆ. ಅದು ಮರಸುಬೇಟೆ. ಹೀಗೆ ಕವಿಯ ಬೇಟೆಯ ಅನುಭವ ನುಡಿ ಕನ್ನಡ ಕಾವ್ಯದಲ್ಲಿ ಹೊಸತಾಗಿ ಸೇರ್ಪಡೆಯಾಗಿದೆ.</p>.<p>ಪಳುಮರೆಯೊಳಡಗಿ, ಪಣ್ಮರಕೆ</p>.<p>ಮರಸು ಕೂತವರಂತೆ, ಮೋನದಿಂದೆಳ್ಚರಿಂ</p>.<p>ರಾಮಾದಿಗಳ್ ನಿಟ್ಟಿಸಿರೆ ಕಾದು ಕಾತರಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುದ್ದುಮಳಿ</strong></p>.<p>ಗುದ್ದುಮಳಿ (ನಾ). ತುಮುಲ</p>.<p>ರಾಮಚಂದ್ರನು ಸುಗ್ರೀವ ಮತ್ತು ವಿಭೀಷಣರ ಸಹಾಯದಿಂದ ರಾವಣನ ಮೇಲೆ ವಿಜಯ ಸಾಧಿಸುವನು. ಅನಂತರ ಅವನ ಆಜ್ಞೆಯಂತೆ ವಿಭೀಷಣನು ಅಲಂಕೃತಳಾದ ಸೀತೆಯನ್ನು ಒಬ್ಬಳೇ ರಾಮನ ಬಳಿಗೆ ಹೋಗಲು ತಿಳಿಸುವನು. ಆ ಮಾತೆಯ ದರ್ಶನಾಕಾಂಕ್ಷಿಗಳಾಗಿ ವಾನರರು ಮುನ್ನುಗ್ಗುವರು. ಆಗ ವಿಭೀಷಣನ ಅಪ್ಪಣೆಯಂತೆ ಬೆತ್ತ ಹಿಡಿದವರು ಆ ಸೈನಿಕರನ್ನು ಹಿಂದಕ್ಕೆ ತಳ್ಳುವರು.</p>.<p>ಆಗ ಆದ ಗದ್ದಲ ತುಮುಲವನ್ನು ಕುವೆಂಪು ಅವರು ‘ಗುದ್ದುಮಳಿ’ ಎಂಬ ನುಡಿ ರೂಪಿಸಿ ಗದ್ದಲ ವಾತಾವರಣವನ್ನು ಹಿಡಿದಿಟ್ಟಿದ್ದಾರೆ. ಅದು ಮಳೆ ಗಾಳಿ ಮಸೆವ ಸಮುದ್ರದ ಸದ್ದಾಗಿತ್ತು ಎಂದು ರೂಪಕದಲ್ಲಿ ಚಿತ್ರಿಸಿದ್ದಾರೆ.</p>.<p><strong>ಗಾಳೀ ಮಸೆವಂಬುಧಿಯ</strong></p>.<p>ಸದ್ದೆದ್ದುದೈ ಗುದ್ದುಮಳಿ ಗದ್ದಲಂ.</p>.<p>ಬೆಂಕೆವೆಟ್ಟು</p>.<p>ಬೆಂಕೆವೆಟ್ಟು (ನಾ). ಕುದಿಯುತ್ತಿರುವ ಲಾವಾರಸವನ್ನು ಉಗುಳುವ ಬೆಟ್ಟ; ಅಗ್ನಿ ಪರ್ವತ.</p>.<p>[ಬೆಂಕೆ + ಬೆಟ್ಟು (<ಬೆಟ್ಟ)]</p>.<p>ರಾವಣನನ್ನು ಸಂಹರಿಸಲು ನಿಶ್ಚಯಿಸಿದ ರಾಮಚಂದ್ರನು ಕೋದಂಡವನ್ನು ಹಿಡಿದನು. ಬೆನ್ನಿನ ಬತ್ತಳಿಕೆಗೆ ಕೈ ಹಾಕಿದನು. ಆಗ ಉಂಟಾದ ಪ್ರಕೃತಿಯ ವಿಕೋಪವನ್ನು ಕವಿ ಚಿತ್ರಿಸುತ್ತ ‘ಅಗ್ನಿ ಪರ್ವತ’ವನ್ನು ‘ಬೆಂಕೆವೆಟ್ಟು’ ಎಂಬ ಹೊಸ ಕನ್ನಡ ಪದದಿಂದ ಬಣ್ಣಿಸಿದ್ದಾರೆ.</p>.<p><strong>ಸುಯ್ದುದು ಲಯಂ</strong></p>.<p>ನಡುಗೆ ಗಿರಿ ಸಂಕುಲಂ, ಕದಡಿದುವು ಕಡಲುಗಳ್.</p>.<p>ಬೆಂಕೆವೆಟ್ಟುಗಳೋಕರಿಸಿದುವು ಭಯಂಕರ</p>.<p>ಯುಗಾಂತರ ದ್ರಾವಾಗ್ನಿಯಂ.</p>.<p><strong>ಮರಸುಕೂರು</strong></p>.<p>ಮರಸುಕೂರು (ಕ್ರಿ). ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಮರದ ಮೇಲೆ ಕಟ್ಟಿರುವ ಮರಸಿನ ಮೇಲೆ ಕುಳಿತುಕೊಳ್ಳು.</p>.<p>ಮರಸು (ನಾ). 1. ಬೇಟೆಯಲ್ಲಿ ಪ್ರಾಣಿಗಳನ್ನು ಹಿಡಿಯಲು ಹೊಂಚುಹಾಕಿ ಕುಳಿತು ಕೊಳ್ಳುವುದಕ್ಕಾಗಿ ಕಟ್ಟಿರುವ ಮರೆ.</p>.<p>2. ಪ್ರಾಣಿಗಳನ್ನು ಹಿಡಿಯಲು ಮರೆಯಲ್ಲಿ ಅಡಗಿಕೊಂಡು ಮಾಡುವ ಬೇಟೆ; ಮರಸುಬೇಟೆ</p>.<p>ವಾಲಿಯನ್ನು ದ್ವಂದ್ವಯುದ್ಧಕ್ಕೆ ಕರೆಯಲು ಸುಗ್ರೀವನು ರಾಮಲಕ್ಷ್ಮಣರೊಡನೆ ಕಿಷ್ಕಿಂಧೆಗೆ ಹೋಗುವನು. ಆ ಕಾಡಿನಲ್ಲಿ ವಾಲಿಯು ಬರುವುದನ್ನು ಕಾಯುತ್ತ ರಾಮಲಕ್ಷ್ಮಣರು ಮೌನದಿಂದ ನಿಟ್ಟಿಸುತ್ತ ಕುಳಿತರು. ಅವರು ಕುಳಿತ ರೀತಿಯನ್ನು ಕುವೆಂಪು ಅವರು ತಮ್ಮ ಕಾಡಿನ ಬೇಟೆಯ ಅನುಭವದೊಡನೆ ‘ಪಳುಮರೆಯೊಳಡಿ ಪಣ್ಮರಕೆ ಮರಸುಕೂತವರಂತೆ’ ಎಂದು ಚಿತ್ರಿಸಿದ್ದಾರೆ.</p>.<p>ಅವರು ಕುಳಿತ ರೀತಿ ‘ಪ್ರಾಣಿಗಳನ್ನು ಹಿಡಿಯಲು ಮರೆಯಲ್ಲಿ ಅಡಗಿಕೊಂಡು ಮಾಡುವ ಬೇಟೆ’ಯಂತಿದೆ. ಅದು ಮರಸುಬೇಟೆ. ಹೀಗೆ ಕವಿಯ ಬೇಟೆಯ ಅನುಭವ ನುಡಿ ಕನ್ನಡ ಕಾವ್ಯದಲ್ಲಿ ಹೊಸತಾಗಿ ಸೇರ್ಪಡೆಯಾಗಿದೆ.</p>.<p>ಪಳುಮರೆಯೊಳಡಗಿ, ಪಣ್ಮರಕೆ</p>.<p>ಮರಸು ಕೂತವರಂತೆ, ಮೋನದಿಂದೆಳ್ಚರಿಂ</p>.<p>ರಾಮಾದಿಗಳ್ ನಿಟ್ಟಿಸಿರೆ ಕಾದು ಕಾತರಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>